ಧೋನಿ ಸಮಸ್ಯೆ ಪರಿಹರಿಸುವ ರೀತಿಯೇ ಭಿನ್ನ: ಪಂತ್
Team Udayavani, May 4, 2020, 7:37 PM IST
ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ಮೆಂಟರ್ ಎಂದೇ ಪರಿಗಣಿಸುವ ಕಿರಿಯ ಕೀಪರ್ ರಿಷಭ್ ಪಂತ್, ಅವರ ಕುರಿತ ಕೆಲವು ವಿಶೇಷ ಗುಣಗಳ ಬಗ್ಗೆ ಮಾತಾಡಿದ್ದಾರೆ. ಧೋನಿ ಸದಾ ಕಿರಿಯ ಕ್ರಿಕೆಟಿಗರ ನೆರವಿಗೆ ನಿಲ್ಲುತ್ತಿದ್ದರೂ ಸಮಸ್ಯೆಗೆ ಎಂದೂ ಪರಿಪೂರ್ಣ ಪರಿಹಾರ ಸೂಚಿಸುತ್ತಿರಲಿಲ್ಲ. ಇದನ್ನು ತಾವೇ ಕಂಡುಕೊಂಡು ಬೆಳೆಯಬೇಕೆಂಬುದು ಅವರ ಸಿದ್ಧಾಂತವಾಗಿತ್ತು ಎಂದಿದ್ದಾರೆ.
“ಮಹಿ ಭಾಯ್ ನನ್ನ ಪಾಲಿನ ಮೆಂಟರ್. ಅಂಗಳದಲ್ಲೂ ಅಂಗಳದಾಚೆಯೂ ಅವರೇ ಮಾರ್ಗದರ್ಶಕ. ನನ್ನ ಏನೇ ಸಮಸ್ಯೆಗಳಿದ್ದರೂ ಸಂಕೋಚವಿಲ್ಲದೆ ಅವರಲ್ಲಿ ಕೇಳುತ್ತೇನೆ. ಆದರೆ ಅವರೆಂದೂ ಇದಕ್ಕೆ ಸಂಪೂರ್ಣ ಪರಿಹಾರ ನೀಡುತ್ತಿರಲಿಲ್ಲ. ಕೆಲವು ಸುಳಿವುಗಳನ್ನಷ್ಟೇ ಕೊಟ್ಟು ಇದನ್ನು ನೀವೇ ಪರಿಹರಿಸಿಕೊಳ್ಳಬೇಕೆಂದು ಸೂಚಿಸುತ್ತಿದ್ದರು. ಆಗಲೇ ನೀವು ಪರಿಪೂರ್ಣರಾಗಲು ಸಾಧ್ಯ ಎಂಬುದು ಅವರ ಸಿದ್ಧಾಂತವಾಗಿರುತ್ತಿತ್ತು…’ ಎಂದು ರಿಷಭ್ ಪಂತ್ ಹೇಳಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನ್ಸ್ಟಾಗ್ರಾಮ್ ಲೈವ್ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.”ಧೋನಿ ನನ್ನ ನೆಚ್ಚಿನ ಬ್ಯಾಟಿಂಗ್ ಜತೆಗಾರನೂ ಹೌದು. ಅವರು ಕ್ರೀಸಿನಲ್ಲಿದ್ದರೆ ಯಾವುದೇ ಚಿಂತೆಗೆ ಆಸ್ಪದವಿರದು. ಅವರ ತಲೆಯಲ್ಲಿ ಸಾಕಷ್ಟು ಯೋಜನೆಗಳಿರುತ್ತವೆ. ಇದನ್ನು ನಾವು ಅನುಸರಿಸಿ ಆಡುವುದು ಮುಖ್ಯ’ ಎಂಬುದಾಗಿ ಪಂತ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!