ವಿಜಯ್‌ ಹಜಾರೆ: ಧೋನಿ ತಂಡ ಝಾರ್ಖಂಡ್‌ಗೆ ಫೈನಲ್‌ ಕನಸು ಭಗ್ನ


Team Udayavani, Mar 19, 2017, 12:30 PM IST

bagna.jpg

ಹೊಸದಿಲ್ಲಿ: ಆರಂಭಿಕ ಆಟಗಾರರಾದ ಶ್ರೀವತ್ಸ ಗೋಸ್ವಾಮಿ, ಅಭಿಮನ್ಯು ಈಶ್ವರನ್‌ ಬಾರಿಸಿದ ಶತಕದ ನೆರವಿನಿಂದ ಬಂಗಾಲ ತಂಡ ವಿಜಯ್‌ ಹಜಾರೆ ಏಕದಿನ ಟ್ರೋಫಿಯಲ್ಲಿ ಫೈನಲ್‌ ಪ್ರವೇಶಿಸಿದೆ. ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ನೇತೃತ್ವದ ಝಾರ್ಖಂಡ್‌ಗೆ 41 ರನ್‌ ಆಘಾತ ನೀಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಬಂಗಾಲ ಭರ್ಜರಿ 329 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಧೋನಿ ಮತ್ತು ಇಶಾಂಕ್‌ ಜಗ್ಗಿ ಅವರ ಹೋರಾಟದ ಹೊರತಾಗಿಯೂ ಝಾರ್ಖಂಡ್‌ ಸರಿಯಾಗಿ 50 ಓವರ್‌ಗಳಲ್ಲಿ 288 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. 

ಈ ಗೆಲುವಿನಿಂದ ಬಂಗಾಲ ಫೈನಲ್‌ ಹಂತ ಕ್ಕೇರಿತು. ಮಾ. 20ರಂದು ನಡೆಯುವ ಫೈನಲ್‌ ಹೋರಾಟದಲ್ಲಿ ಬಂಗಾಲ ತಂಡವು ತಮಿಳುನಾಡು ತಂಡವನ್ನು ಎದುರಿಸಲಿದೆ.,

ಧೋನಿ ಹೋರಾಟ ವ್ಯರ್ಥ
ದೊಡ್ಡ ಮೊತ್ತ ಬೆನ್ನು ಹತ್ತಿದ ಧೋನಿ ಪಡೆ 20 ರನ್‌ ಸೇರಿಸಿದಾಗ ಪ್ರತ್ಯುಶ್‌ ಸಿಂಗ್‌ ವಿಕೆಟ್‌ ಕಳೆದುಕೊಂಡಿತು. ಬಂಗಾಲ ಬೌಲರ್‌ಗಳ ಚುರುಕಿನ ದಾಳಿಗೆ ಝಾರ್ಖಂಡ್‌ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಧೋನಿ ಝಾರ್ಖಂಡ್‌ಗೆ ಗೆಲುವಿನ ಆಸೆ ತೋರಿಸಿದ್ದರು. 66 ಎಸೆತ ಎದು ರಿಸಿದ ಧೋನಿ 4 ಭರ್ಜರಿ ಸಿಕ್ಸರ್‌, 2 ಬೌಂಡರಿ ಸೇರಿದಂತೆ 70 ರನ್‌ ಬಾರಿಸಿದ್ದರು. ಆದರೆ ಸ್ಪಿನ್ನರ್‌ ಓಜಾ ಎಸೆತಕ್ಕೆ ಬೋಲ್ಡ್‌ ಆಗಿ ನಿರಾಸೆ ಮೂಡಿಸಿದರು. ಧೋನಿ ಮತ್ತು ಇಶಾಂಕ್‌ ಜಗ್ಗಿ 5ನೇ ವಿಕೆಟ್‌ಗೆ 97 ರನ್‌ ಜತೆಯಾಟ ನೀಡಿದ್ದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಬಾರಿಸುವಲ್ಲಿ ವೈಫ‌ಲ್ಯ ಎದುರಿಸಿದರು. ಇಶಾಂಕ್‌ ಜಗ್ಗಿ (59) ಅರ್ಧ ಶತಕ ದಾಖಲಿಸಿ ಘೋಷ್‌ಗೆ ವಿಕೆಟ್‌ ಒಪ್ಪಿಸಿದರು. ಸ್ಪಿನ್ನರ್‌ ಪ್ರಗ್ಯಾನ್‌ ಓಜಾ 71ಕ್ಕೆ 5 ವಿಕೆಟ್‌ ಪಡೆದು ಝಾರ್ಖಂಡ್‌ಗೆ ದೊಡ್ಡ ಹೊಡೆತ ನೀಡಿದರು.

ಗೋಸ್ವಾಮಿ, ಈಶ್ವರನ್‌ ಶತಕ
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಬಂಗಾಲ ತಂಡಕ್ಕೆ ಶ್ರೀವತ್ಸ ಗೋಸ್ವಾಮಿ (101), ಅಭಿಮನ್ಯು ಈಶ್ವರನ್‌ (101) ಆಸರೆಯಾದರು. ತಂಡ ದೊಡ್ಡ ಮೊತ್ತ ಕಲೆಹಾಕುವಲ್ಲಿ ನೆರವಾದರು. ಈ ಜೋಡಿ ಮೊದಲ ವಿಕೆಟಿಗೆ 198 ರನ್‌ ದಾಖಲಿಸಿದರು. ಉಳಿದಂತೆ ಮನೋಜ್‌ ತಿವಾರಿ ಕೇವಲ 49 ಎಸೆತದಲ್ಲಿ 75 ರನ್‌ ಬಾರಿಸಿ ತಂಡದ ಮೊತ್ತ ತ್ರಿಶತಕದ ಗಡಿ ದಾಟಿಸಿದರು. ಜಾರ್ಖಂಡ್‌ ಪರ ವರುಣ್‌ ಏರಾನ್‌ 89ಕ್ಕೆ 2 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌
ಬಂಗಾಳ 50 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ  329 (ಶ್ರೀವತ್ಸ ಗೋಸ್ವಾಮಿ 101, ಈಶ್ವರನ್‌ 101, ಮನೋಜ್‌ ತಿವಾರಿ 75,  ವರುಣ್‌ ಅರಾನ್‌ 89ಕ್ಕೆ 2), ಝಾರ್ಖಂಡ್‌ 50 ಓವರ್‌ಗಳಲ್ಲಿ 288 (ವಿರಾಟ್‌ ಸಿಂಗ್‌ 24, ಕುಮಾರ ದೇವಭ್ರತ್‌ 37, ಸೌರಭ್‌ ತಿವಾರಿ 48, ಧೋನಿ 70, ಇಶಾಂಕ್‌ ಜಗ್ಗಿ 59, ಕಾನಿಷ್‌R ಸೇಥ್‌ 48ಕ್ಕೆ 2, ಸಯನ್‌ ಘೋಷ್‌ 52ಕ್ಕೆ 2, ಪ್ರಗ್ಯಾನ್‌ ಓಜಾ 71ಕ್ಕೆ 5).

ಮಾ. 20ಕ್ಕೆ ಫೈನಲ್‌
ನಿಗದಿತ ವೇಳಾಪಟ್ಟಿಯಂತೆ ವಿಜಯ್‌ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯ ಮಾ.19ಕ್ಕೆ ನಿಗದಿಯಾಗಿತ್ತು. ಆದರೆ ಮಾ.17 ರಂದು ದಿಲ್ಲಿಯಲ್ಲಿ ಝಾರ್ಖಂಡ್‌ ತಂಡ ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಹೀಗಾಗಿ ಮಾ.17ರಂದು ನಡೆಯಬೇಕಿದ್ದ ಬಂಗಾಲ ಮತ್ತು ಝಾರ್ಖಂಡ್‌ ನಡುವಿನ ಸೆಮಿಫೈನಲ್‌ ಪಂದ್ಯವನ್ನು ಮಾ.18ಕ್ಕೆ ಮುದೂಡಲಾಗಿತ್ತು. ಹಾಗಾಗಿ ಫೈನಲ್‌ ಪಂದ್ಯವನ್ನು ಒಂದು ದಿನ ಮುಂದೂ ಡಲಾಗಿದ್ದು ಮಾ. 19ರ ಬದಲು ಮಾ. 20ರಂದು ನಡೆಯಲಿದೆ.

ಟಾಪ್ ನ್ಯೂಸ್

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.