ಕಂಚು ಕಳೆದುಕೊಂಡ ವಿನೋದ್ ಕುಮಾರ್!
Team Udayavani, Aug 31, 2021, 6:15 AM IST
ಟೋಕಿಯೊ: ರವಿವಾರ ಪ್ಯಾರಾಲಿಂಪಿಕ್ಸ್ ಎಫ್52 ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ಗೆದ್ದ ಕಂಚಿನ ಪದಕ ಸೋಮವಾರ ವಿನೋದ್ ಕುಮಾರ್ ಕೈಜಾರಿದೆ. ಇದರಿಂದ ಭಾರತಕ್ಕೆ ಒಂದು ಪದಕ ನಷ್ಟವಾಗಿದೆ.
ವಿನೋದ್ ಕುಮಾರ್ ಸ್ಪರ್ಧೆಗೆ ಹಾಗೂ ಕಂಚಿನ ಜಯಕ್ಕೆ ಇತರ ದೇಶಗಳ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ವಿನೋದ್ ಎಫ್52 ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆ ಹೊಂದಿಲ್ಲ ಎಂದು ವಾದಿಸಿದ್ದರು. ಹೀಗಾಗಿ ಫಲಿತಾಂಶವನ್ನು ಸೋಮವಾರ ಪ್ರಕಟಿಸಲು ಸಮಿತಿ ನಿರ್ಧರಿಸಲಾಗಿತ್ತು. ಅದರಂತೆ ವಿನೋದ್ ಕುಮಾರ್ ಸ್ಪರ್ಧೆಯನ್ನು ಅನೂರ್ಜಿತಗೊಳಿಸಿ ಪದಕವನ್ನು ವಾಪಸ್ ಪಡೆಯಲಾಗಿದೆ.
ವರ್ಗೀಕರಣ ಪ್ರಕ್ರಿಯೆ ಅಪೂರ್ಣ :
ಈ ವಿಚಾರವಾಗಿ ಮಾತನಾಡಿರುವ ಸಂಘಟಕರು, “ಭಾರತದ ಕ್ರೀಡಾಪಟು ವಿನೋದ್ ಕುಮಾರ್ ಅವರನ್ನು ನಿರ್ದಿಷ್ಟ ಕ್ರೀಡಾ ವರ್ಗದೊಂದಿಗೆ ನಿಯೋಜಿಸಲು ಸಮಿತಿಗೆ ಸಾಧ್ಯವಾಗಿರಲಿಲ್ಲ. ಅವರ ಕ್ರೀಡಾ ವರ್ಗೀಕರಣ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇದೇ ಕಾರಣಕ್ಕಾಗಿ ವಿನೋದ್ ಅವರು ಸ್ಪರ್ಧೆಗೆ ಅನರ್ಹರಾಗಿದ್ದು, ಆ ಸ್ಪರ್ಧೆಯಲ್ಲಿನ ಅವರ ಫಲಿತಾಂಶ ಅನೂರ್ಜಿತವಾಗಿದೆ’ ಎಂದು ಹೇಳಿದ್ದಾರೆ.
ಪದಕ ಕಳೆದುಕೊಳ್ಳಲು ಕಾರಣ…
ಎಫ್52 ಎನ್ನುವುದು ದುರ್ಬಲಗೊಂಡ ಸ್ನಾಯು ಶಕ್ತಿ ಹೊಂದಿರುವ ಕ್ರೀಡಾಪಟುಗಳ ವಿಭಾಗವಾಗಿದೆ. ನಿರ್ಬಂಧಿತ ಚಲನೆ, ಅಂಗಗಳ ವೈಫಲ್ಯಅಥವಾ ಕಾಲಿನ ಉದ್ದ ವ್ಯತ್ಯಾಸ, ಬೆನ್ನುಹುರಿ ಗಾಯದಿಂದಾಗಿ ಸದಾಕಾಲ ಕುಳಿತುಕೊಂಡೇ ಇರುವ ವ್ಯಕ್ತಿಗಳು, ಅಂಗಚ್ಛೇದನ ಮತ್ತು ಕ್ರಿಯಾತ್ಮಕ ಅಸ್ವಸ್ಥತೆ ಇರುವರು ಎಫ್52 ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ. ಆದರೆ ವಿನೋದ್ ಕುಮಾರ್ ಈ ವರ್ಗಕ್ಕೆ ಸೇರುವುದಿಲ್ಲ ಎಂದು ಸಂಘಟಕರು ತೀರ್ಮಾನಿಸಿದ್ದಾರೆ.
ಮಾನದಂಡದಂತೆ ಆ. 22ರಂದು ವಿನೋದ್ ಅವರನ್ನು ಎಫ್52 ವಿಭಾಗಕ್ಕೆ ಸೇರಿಸಲಾಗಿತ್ತು. ಇದೀಗ ಸ್ಪರ್ಧೆಗೆ ಅವಕಾಶ ನೀಡಿದ್ದೇಕೆ, ಪದಕ ಗೆದ್ದೂ ಕಳೆದುಕೊಂಡವರ ಮನಸ್ಥಿತಿ ಹೇಗಿರಬೇಡ, ಪ್ಯಾರಾಲಿಂಪಿಕ್ಸ್ನಂಥ ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಇದೆಂಥ ಎಡವಟ್ಟು ಎಂಬೆಲ್ಲ ವಿಚಾರವಾಗಿ ಸಂಘಟಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ