ಟೋಕಿಯೊ ಒಲಿಂಪಿಕ್ಸ್‌ ತಂಡದಲ್ಲಿ ರಾಜ್ಯ ಆಟಗಾರರೇ ಇರುವುದಿಲ್ಲ?


Team Udayavani, Dec 2, 2017, 7:50 AM IST

TOKYO.jpg

ಬೆಂಗಳೂರು: ಹಾಕಿ ತವರೂರು ಎಂದೇ ಖ್ಯಾತಿವೆತ್ತಿರುವ ಕರ್ನಾಟಕ ಬಹುತೇಕ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ದೇಶಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದೆ. ಪ್ರತಿ ಒಲಿಂಪಿಕ್ಸ್‌ ನಡೆದಾಗಲೂ ಭಾರತ ತಂಡಕ್ಕೆ ಕನಿಷ್ಠ ಎಂದರೂ 2-3 ಆಟಗಾರರನ್ನು ಕೊಡುಗೆಯಾಗಿ ಕೊಟ್ಟಿದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಮುಂದೆ ಹೀಗೆ ಇರುತ್ತದೆ ಎಂದು ಹೇಳಲೂ ಆಗುವುದಿಲ್ಲ. ದಿನೇ ದಿನೇ ರಾಜ್ಯದಲ್ಲಿ ಹಾಕಿಗೆ ಸರ್ಕಾರದ ಬೆಂಬಲ ಕ್ಷೀಣಿಸುತ್ತಿದೆ. ಖಾಸಗಿ ಸಂಸ್ಥೆಗಳ ಬೆಂಬಲವೂ ದುರ್ಬಲವಾಗುತ್ತಿದೆ. ಹಿಂದೆ ಇದ್ದ ಕ್ಲಬ್‌ಗಳೆಲ್ಲವೂ ಬಾಗಿಲು ಮುಚ್ಚಿಕೊಂಡಿವೆ. ಆಟಗಾರರೆಲ್ಲರೂ ನಿರ್ಗತಿಕರಾಗಿದ್ದಾರೆ. ಒಲಿಂಪಿಕ್ಸ್‌ ಭವಿಷ್ಯದ ಶಿಬಿರದಲ್ಲೂ ರಾಜ್ಯ ಆಟಗಾರರಿಗೆ ಸ್ಥಾನವಿಲ್ಲ. ಇವೆಲ್ಲವನ್ನೂ ಗಂಭೀರವಾಗಿ ಅವಲೋಕಿಸುವುದಾದರೆ 2020ಕ್ಕೆ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ಕೂಟದ ಭಾರತ ತಂಡದಲ್ಲೇ ರಾಜ್ಯ ಆಟಗಾರರು ಸ್ಥಾನ ಪಡೆದುಕೊಳ್ಳುವುದೇ ಭಾರೀ ಸವಾಲಿನ ಕೆಲಸವಾಗಿದೆ.

ಹಿರಿಯರ ವಿದಾಯದ ಬಳಿಕ ರಾಜ್ಯದಿಂದ ಯಾರು?:  1968 ಹಾಗೂ 2000ನೇ ಇಸವಿಯ ಸಿಡ್ನಿ ಒಲಿಂಪಿಕ್ಸ್‌ ಹೊರತು ಪಡಿಸಿ ಉಳಿದಂತೆ ಎಲ್ಲ ಒಲಿಂಪಿಕ್ಸ್‌ಗಳಲ್ಲೂ ರಾಜ್ಯದಿಂದ ಇಬ್ಬರು ಅಥವಾ ಮೂವರು ಪ್ರತಿ ಒಲಿಂಪಿಕ್ಸ್‌ಗಳಲ್ಲೂ ಪಾಲ್ಗೊಂಡಿದ್ದಾರೆ. 2016 ರಿಯೋ ಒಲಿಂಪಿಕ್ಸ್‌ನ ರಾಷ್ಟ್ರೀಯ ತಂಡದಲ್ಲಿ ರಾಜ್ಯದವರಾದ ವಿ.ಆರ್‌.ರಘುನಾಥ್‌, ಎಸ್‌.ಕೆ.ಉತ್ತಪ್ಪ, ಎಸ್‌.ವಿ. ಸುನಿಲ್‌ ಹಾಗೂ ನಿಕಿನ್‌ ತಿಮ್ಮಯ್ಯ ಸ್ಥಾನ ಪಡೆದಿದ್ದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ ಇವರೆಲ್ಲರು ಅನುಭವಿ ಆಟಗಾರರು. ವಿ.ಆರ್‌.ರಘುನಾಥ್‌ ನಿವೃತ್ತಿ ಸನಿಹದಲ್ಲಿದ್ದಾರೆ.

ಎಸ್‌.ಕೆ.ಉತ್ತಪ್ಪ,  ಎಸ್‌.ವಿ.ಸುನಿಲ್‌ ಕೂಡ ಹಲವಾರು ವರ್ಷಗಳಿಂದ ಭಾರತ ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಇವರಿಬ್ಬರು 2 ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ್ದಾರೆ. ಮುಂದೆ ಇವರು ಫಿಟೆ°ಸ್‌ ಕಾಪಾಡಿಕೊಂಡು ಸ್ಥಾನ ಪಡೆಯುತ್ತಾರೆ ಎನ್ನುವುದನ್ನು ಹೇಳುವುದು ಅಸಾಧ್ಯ. ಇರುವುದರಲ್ಲಿ ಫಿಟ್‌ನೆಸ್‌ ಕಾಯ್ದುಕೊಂಡರೆ ನಿಕಿನ್‌ ತಿಮ್ಮಯ್ಯಗೆ ಇನ್ನೂ ಸ್ವಲ್ಪ ವರ್ಷ ವರ್ಷ ಆಡುವ ಅವಕಾಶವಿದೆ. ಸದ್ಯ ದಿಲ್ಲಿಯ ಮೇಜರ್‌ ಧ್ಯಾನ್‌ಚಂದ್‌ ಹಾಕಿ ಸ್ಟೇಡಿಯಂನಲ್ಲಿರುವ ಭವಿಷ್ಯದ ಒಲಿಂಪಿಕ್ಸ್‌ ತಯಾರಿ ನಡೆಸುವ ಶಿಬಿರಕ್ಕೂ ಯಾವುದೇ ಆಟಗಾರರು ಆಯ್ಕೆಯಾಗಿಲ್ಲ. ಸಾಯ್‌ನಲ್ಲೂ ರಾಜ್ಯದ ಯುವ ಆಟಗಾರರು ಪ್ರವರ್ಧಮಾನಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಹೀಗಿದ್ದ ಮೇಲೆ ಹಿರಿಯ ಆಟಗಾರರ ಬಳಿಕ ರಾಜ್ಯದಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವವರು ಯಾರು? ಎನ್ನುವುದು ದೊಡ್ಡ ಪ್ರಶ್ನೆ.

ರಿಯೋವರೆಗೆ ರಾಜ್ಯದ ರಾಜ ನಡಿಗೆ: 1952ರಲ್ಲಿ ಫಿನ್‌ಲೆಂಡ್‌ನ‌ಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಎಂ.ರಾಜಗೋಪಾಲ್‌, ಸಿ.ವ್ಯಾಸಮುತ್ತು, 1960 ರೋಮ್‌ ಒಲಿಂಪಿಕ್ಸ್‌ನಲ್ಲಿ ರಾಜ್ಯದ ವ್ಯಾಸಮುತ್ತು, ವಿ.ಜೆ.ಪೀಟರ್‌ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 1964 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆರ್‌.ಎ.ಕ್ರಿಸ್ಟಿ ಮತ್ತು ವಿ.ಜೆ.ಪೀಟರ್‌ ಭಾರತ ಪರ ಆಡಿದ್ದರು.  1968ರಲ್ಲಿ ನಡೆದ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲೂ ಕ್ರಮವಾಗಿ ಇವರಿಬ್ಬರೇ ಸ್ಥಾನ ಪಡೆದುಕೊಂಡಿದ್ದರು.

1972ರಲ್ಲಿ ನಡೆದ ಮ್ಯೂನಿಚ್‌ ಒಲಿಂಪಿಕ್ಸ್‌ನಲ್ಲಿ ಮ್ಯಾನುಯಲ್‌ ಫೆಡ್ರಿಕ್‌, ಎಂ.ಪಿ.ಗಣೇಶ್‌, ಬಿ.ಪಿ.ಗೋವಿಂದ ರಾಜ್ಯದಿಂದ ರಾಷ್ಟ್ರೀಯ ತಂಡದ ಪರ ಅಡಿದ್ದರು. 1976ರಲ್ಲಿ ಕೆನಡಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ರಾಜ್ಯದಿಂದ ಬಿ.ಪಿ.ಗೋವಿಂದ ಒಬ್ಬರೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಅಲೆನ್ಸ್‌ ಸ್ಕೋಫೀಲ್ಡ್‌ ಮತ್ತು ಎಂ.ಎಂ.ಸೋಮಯ್ಯ, 1984 ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಎಂ.ಎಂ.ಸೋಮಯ್ಯ ಒಬ್ಬರೇ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

1988 ಸಿಯೋಲ್‌ ಒಲಿಂಪಿಕ್ಸ್‌ನಲ್ಲಿ ಎಂ.ಎಂ.ಸೋಮಯ್ಯ, ಬಿ.ಕೆ.ಸುಬ್ರಹ್ಮಣ್ಯ, ಜ್ಯೂಡ್‌ ಫಿಲಿಕ್ಸ್‌ ಭಾರತ ಪರ ಆಡಿದ ರಾಜ್ಯ ಆಟಗಾರರು, 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಭಾರತ ಪರ ರಾಜ್ಯದ ಆಶಿಶ್‌ ಬಲ್ಲಾಳ್‌, ಎಬಿ.ಸುಬ್ಬಯ್ಯ, ಸಿಎಸ್‌.ಪೂಣಚ್ಚ, ಜೂಡ್‌ ಫಿಲಿಕ್ಸ್‌ ಹಾಗೂ ರವಿ ನಾಯಕರ್‌ ಆಡಿದ್ದಾರೆ. 1996 ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಎಬಿ. ಸುಬ್ಬಯ್ಯ, ಅನಿಲ್‌, ಸಾಬು ವರ್ಗಿ ಭಾರತ ತಂಡದಲ್ಲಿದ್ದ ರಾಜ್ಯ ಆಟಗಾರರು.

2004 ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಅರ್ಜುನ್‌ ಹಾಲಪ್ಪ ಹಾಗೂ ಇಗೆ¾ಸ್‌ ಟರ್ಕೆ ಭಾರತ ತಂಡದಲ್ಲಿ ಇಬ್ಬರು ರಾಜ್ಯ ಆಟಗಾರರು. 2012 ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭರತ್‌ ಚೆತ್ರಿ, ಎಸ್‌.ಕೆ.ಉತ್ತಪ್ಪ, ವಿ.ಆರ್‌.ರಘುನಾಥ್‌ ಹಾಗೂ ಎಸ್‌.ವಿ.ಸುನಿಲ್‌ ಸ್ಥಾನ ಪಡೆದುಕೊಂಡಿದ್ದರು. 2016 ರಿಯೋ ಒಲಿಂಪಿಕ್ಸ್‌ನಲ್ಲಿ ರಾಜ್ಯದ ಇದೇ ಆಟಗಾರರು ಮತ್ತೆ ಭಾರತ ತಂಡಕ್ಕೆ ಮರು ಆಯ್ಕೆಯಾದರು. ಇವರೊಂದಿಗೆ ರಾಜ್ಯದ ನಿಕಿನ್‌ ತಿಮ್ಮಯ್ಯ ಸ್ಥಾನ ಪಡೆದುಕೊಂಡು ಹೊಸ ಮುಖ ಎನಿಸಿಕೊಂಡಿದ್ದರು.

– ಹೇಮಂತ್‌  ಸಂಪಾಜೆ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.