ವಿಶ್ವ ನಾಯಕರೇ, ನಮ್ಮನ್ನು ಕೈಬಿಡಬೇಡಿ: ರಶೀದ್ ಮನವಿ
Team Udayavani, Aug 12, 2021, 6:55 AM IST
ದುಬಾೖ: ಅಫ್ಘಾನಿಸ್ಥಾನದಿಂದ ಅಮೆರಿಕದ ಸೇನಾ ಪಡೆಗಳು ವಾಪಸಾದ ಬಳಿಕ ಅಲ್ಲಿ ತಾಲಿಬಾನಿಗಳು ಮತ್ತು ದೇಶದ ಮಿಲಿಟರಿ ನಡುವೆ ಸಂಘರ್ಷ ತಾರಕಕ್ಕೇರಿದೆ.
ಎಲ್ಲೆಡೆ ಆತಂಕದ ವಾತಾವರಣ ಕಂಡುಬಂದಿದೆ. ಅಲ್ಲಿನ ಕ್ರಿಕೆಟ್ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಅಲ್ಲಿನ ಖ್ಯಾತ ಕ್ರಿಕೆಟಿಗ ರಶೀದ್ ಖಾನ್ ಟ್ವೀಟ್ ಮಾಡಿ, ತಮ್ಮ ದೇಶವಾಸಿಗಳನ್ನು ಇಂಥ ಸಂಕಷ್ಟದ ಸಂದರ್ಭದಲ್ಲಿ ಕೈಬಿಡಬೇಡಿ ಎಂದು ಜಾಗತಿಕ ನಾಯಕರಲ್ಲಿ ಮನವಿ ಮಾಡಿದ್ದಾರೆ.
“ಪ್ರೀತಿಯ ವಿಶ್ವ ನಾಯಕರೇ, ನನ್ನ ದೇಶದಲ್ಲಿ ಅರಾಜಕತೆ ಮೇರೆ ಮೀರಿದೆ. ಪ್ರತಿದಿನವೂ ಅಮಾಯಕ ಜನರು, ಮಕ್ಕಳು ಬಲಿಯಾಗುತ್ತಿದ್ದಾರೆ. ಮನೆ, ಆಸ್ತಿಗಳನ್ನು ನಾಶಪಡಿಸಲಾಗುತ್ತಿದೆ. ಸಾವಿರಾರು ಕುಟುಂಬಗಳು ನಿರ್ಗತಿಕವಾಗಿವೆ. ನಮ್ಮನ್ನು ಈ ರೀತಿ ಅರಾಜಕತೆಯಲ್ಲಿ ಬಿಟ್ಟುಬಿಡಬೇಡಿ. ಅಫ್ಘಾನಿಯರನ್ನು ಹತ್ಯೆ ಮಾಡುವುದನ್ನು ಹಾಗೂ ಅಫ್ಘಾನಿಸ್ಥಾನವನ್ನು ನಾಶಪಡಿಸುವುದನ್ನು ನಿಲ್ಲಿಸಿ. ಇಂಥ ಸಂಕಷ್ಟದ ಕಾಲದಲ್ಲಿ ನಮ್ಮನ್ನು ಕೈಬಿಡಬೇಡಿ. ನಮಗೆ ಶಾಂತಿ ಬೇಕಿದೆ’ ಎಂದು ರಶೀದ್ ಕಳಕಳಿಯಿಂದ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?