ರಣಜಿ ಪಂದ್ಯ: ಕರ್ನಾಟಕ-ಯುಪಿ ಪಂದ್ಯ ನೀರಸ ಡ್ರಾ
ಶೌಕತ್ ಅಜೇಯ ಶತಕ ; ಇನ್ನಿಂಗ್ಸ್ ಮುನ್ನಡೆಗಾಗಿ ಕರ್ನಾಟಕಕ್ಕೆ 3 ಅಂಕ
Team Udayavani, Dec 20, 2019, 7:36 PM IST
ಹುಬ್ಬಳ್ಳಿ: ಇಲ್ಲಿ ನಡೆದ ಕರ್ನಾಟಕ-ಉತ್ತರಪ್ರದೇಶ ನಡುವಿನ ರಣಜಿ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ ರಾಜ್ಯ ತಂಡ 3 ಅಂಕ ಗಳಿಸಿದರೆ, ಯುಪಿ ಒಂದಂಕ ಪಡೆಯಿತು.
40 ರನ್ ಹಿನ್ನಡೆಗೆ ಸಿಲುಕಿದ ಉತ್ತರಪ್ರದೇಶ ದ್ವಿತೀಯ ಇನ್ನಿಂಗ್ಸ್ನಲ್ಲಿ 3 ವಿಕೆಟಿಗೆ 204 ರನ್ ಮಾಡಿತ್ತು. ಆರಂಭಕಾರ ಅಲ್ಮಾಸ್ ಶೌಕತ್ ಅವರ ಶತಕ ಪೂರ್ತಿಗೊಂಡೊಡನೆ ಪಂದ್ಯವನ್ನು ಕೊನೆಗೊಳಿಸಲು ನಿರ್ಧರಿಸಲಾಯಿತು. ಆಗ ಚಹಾ ವಿರಾಮದ ಸಮಯವಾಗಿತ್ತು. ಪಂದ್ಯ ಮುಂದುವರಿದರೂ ಸ್ಪಷ್ಟ ಫಲಿತಾಂಶ ದೊರಕುವ ಯಾವುದೇ ಸಾಧ್ಯತೆ ಇರದ ಕಾರಣ ಉಭಯ ತಂಡಗಳ ನಾಯಕರು ಪಂದ್ಯವನ್ನು ಇಲ್ಲಿಗೇ ನಿಲ್ಲಿಸುವ ನಿರ್ಧಾರಕ್ಕೆ ಬಂದರು.
ಉತ್ತರಪ್ರದೇಶದ 281 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ಕರ್ನಾಟಕ 321 ರನ್ ಪೇರಿಸಿತ್ತು. ಯುಪಿ ಒಂದಕ್ಕೆ 29 ರನ್ ಗಳಿಸಿದಲ್ಲಿಂದ ಕೊನೆಯ ದಿನದಾಟ ಮುಂದುವರಿಸಿತ್ತು.
ಶೌಕತ್ ಶತಕ ಸಾಹಸ
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ಆರಂಭಕಾರ ಆರ್ಯನ್ ಜುಯಾಲ್ ಅವರು° ಸೊನ್ನೆಗೆ ಕಳೆದುಕೊಂಡ ಬಳಿಕ ಮತ್ತೂಬ್ಬ ಓಪನರ್ ಅಲ್ಮಾಸ್ ಶೌಕತ್ ತಂಡದ ನೆರವಿಗೆ ನಿಂತರು. ಕರ್ನಾಟಕದ ಬೌಲಿಂಗ್ ದಾಳಿಯನ್ನು ದಿಟ್ಟ ರೀತಿಯಲ್ಲಿ ನಿಭಾಯಿಸಿದ ಅವರು 210 ಎಸೆತಗಳಿಂದ 2ನೇ ಪ್ರಥಮ ದರ್ಜೆ ಶತಕವನ್ನು ಪೂರ್ತಿಗೊಳಿಸಿದರು. ಇದರಲ್ಲಿ 14 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು.
ಮಾಧವ್ ಕೌಶಿಕ್ (45) ಮತ್ತು ಅಕ್ಷದೀಪ್ ನಾಥ್ (38) ಅವರ ನೆರವಿನೊಂದಿಗೆ ಶೌಕತ್ 2 ಉತ್ತಮ ಜತೆಯಾಟ ನಿಭಾಯಿಸಿದರು. 2ನೇ ವಿಕೆಟಿಗೆ 82 ರನ್, 3ನೇ ವಿಕೆಟಿಗೆ 77 ರನ್ ಒಟ್ಟುಗೂಡಿಸಿ ಕರ್ನಾಟಕದ ಯೋಜನೆಯನ್ನು ವಿಫಲಗೊಳಿಸಿದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಯುಪಿ ಒಟ್ಟು 69.1 ಓವರ್ ನಿಭಾಯಿಸಿತು.
6 ವಿಕೆಟ್ ಜತೆಗೆ ಅಜೇಯ 34 ರನ್ ಬಾರಿಸಿ ಆಲ್ರೌಂಡ್ ಪ್ರದರ್ಶನವಿತ್ತ ಅಭಿಮನ್ಯು ಮಿಥುನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಹಿಮಾಚಲಪ್ರದೇಶ ವಿರುದ್ಧ ಮೈಸೂರಿನಲ್ಲಿ ಆಡಲಿದೆ. ಡಿ. 25ರಿಂದ 28ರ ತನಕ ಈ ಪಂದ್ಯ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಉತ್ತರಪ್ರದೇಶ-281 ಮತ್ತು 3 ವಿಕೆಟಿಗೆ 204 (ಶೌಕತ್ 103, ಕೌಶಿಕ್ 45, ಅಕ್ಷದೀಪ್ 38, ಮಥಾಯಿಸ್ 27ಕ್ಕೆ 1, ಮೋರೆ 52ಕ್ಕೆ 1, ಗೋಪಾಲ್ 61ಕ್ಕೆ 1). ಪಂದ್ಯಶ್ರೇಷ್ಠ: ಅಭಿಮನ್ಯು ಮಿಥುನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ