ಕನಸುಗಳು ದುಸ್ವಪ್ನವಾಯಿತು..: ಟೀಂ ಇಂಡಿಯಾ ವಿರುದ್ಧ ಗಾವಸ್ಕರ್ ಕಿಡಿ
Team Udayavani, Jan 15, 2022, 12:38 PM IST
ಕೇಪ್ ಟೌನ್: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋಲನುಭವಿಸಿದೆ. ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫ್ರೀಡಂ ಕಪ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಟೀಂ ಇಂಡಿಯಾದ ಆಟಕ್ಕೆ ಮಾಜಿ ನಾಯಕ ಸುನೀಲ್ ಗಾವಸ್ಕರ್ ಕಿಡಿಕಾರಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾದ ಕೆಲವು ನಡೆಗಳು ತನ್ನನ್ನು ತಬ್ಬಿಬ್ಬುಗೊಳಿಸಿದವು ಎಂದು ಗಾವಸ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆಲ್ಲಬೇಕೆನ್ನುವ ಭಾರತ ತಂಡದ ಕನಸು ದುಸ್ವಪ್ನವಾಯಿತು ಎಂದು ಗಾವಸ್ಕರ್ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ:ಇನ್ಸ್ಟ್ರಾಗ್ರಾಂ ಮೂಲಕ ಮಹಿಳೆ ಸೇರಿ ಇಬ್ಬರ ಖಾತೆಯಿಂದ 7 ಲಕ್ಷ ರೂ ವಂಚನೆ
ಮೊದಲ ಟೆಸ್ಟ್ ನಲ್ಲಿ ಭಾರತವು ದೊಡ್ಡ ಗೆಲುವು ಸಾಧಿಸಿತ್ತು, ಹೀಗಾಗಿ ಮುಂದಿನ ಎರಡು ಟೆಸ್ಟ್ ಪಂದ್ಯಗಳಿಗೂ ಅದೇ ಮಾದರಿಯಾಗಲಿದೆ ಎಂದು ನಾವು ಭಾವಿಸಿದೆವು. ಆದರೆ ಅದಾಗಲಿಲ್ಲ. ಎರಡೂ ಪಂದ್ಯಗಳಲ್ಲಿ ನಾವು ಏಳು ವಿಕೆಟ್ ಅಂತರದಿಂದ ಸೋಲನುಭವಿಸಿದೆವು ಎಂದಿದ್ದಾರೆ.
“ದಕ್ಷಿಣ ಆಫ್ರಿಕಾದ ಗೆಲುವಿನ ಅಂತರವು ಅದ್ಭುತವಾಗಿದೆ. ಆದರೆ ಭಾರತಕ್ಕೆ ಸಂಬಂಧಿಸಿದಂತೆ ಅರ್ಥಮಾಡಿಕೊಳ್ಳುವುದು ಕಷ್ಟ. ಮೊದಲ ಟೆಸ್ಟ್ ನಲ್ಲಿ ಪ್ರಾಬಲ್ಯ ಸಾಧಿಸಿದ ರೀತಿ, ಅವರು ಸರಣಿಯನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿದ್ದೆ. ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಪ್ರಬಲವಾಗಿರಲಿಲ್ಲ, ಆರ್ನಿಚ್ ನೋರ್ಜೆ ತಂಡದಿಂದ ಹೊರಬಿದ್ದ ಕಾರಣ ಆಫ್ರಿಕನ್ ಬೌಲಿಂಗ್ ನಲ್ಲೂ ಅನುಭವ ಕಡಿಮೆಯಿತ್ತು. ಹೀಗಾಗಿ ಭಾರತವು 3-0 ಅಂತರದಿಂದ ಸರಣಿ ಗೆಲ್ಲುತ್ತದೆ ಎಂದು ಭಾವಿಸಿದ್ದೆ” ಎಂದು ಗಾವಸ್ಕರ್ ಹೇಳಿದ್ದಾರೆ.