ದುಲೀಪ್ ಟ್ರೋಫಿ ಫೈನಲ್: ಇಂದ್ರಜಿತ್ ಶತಕ; ದಕ್ಷಿಣಕ್ಕೆ ಮುನ್ನಡೆ
Team Udayavani, Sep 22, 2022, 10:16 PM IST
ಕೊಯಮತ್ತೂರು: ಪಶ್ಚಿಮ ವಲಯ ವಿರುದ್ಧದ ದುಲೀಪ್ ಟ್ರೋಫಿ ಕ್ರಿಕೆಟ್ ಫೈನಲ್ನಲ್ಲಿ ಆತಿಥೇಯ ದಕ್ಷಿಣ ವಲಯ ಮಹತ್ವದ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಬಾಬಾ ಇಂದ್ರಜಿತ್ ಅವರ ಶತಕ ದಕ್ಷಿಣ ವಲಯ ಸರದಿಯ ಆಕರ್ಷಣೆ ಆಗಿತ್ತು. ಪಶ್ಚಿಮ ವಲಯದ 270 ರನ್ನುಗಳ ಮೊದಲ ಇನಿಂಗ್ಸ್ಗೆ ಜವಾಬು ನೀಡಿದ ದಕ್ಷಿಣ ವಲಯ, ದ್ವಿತೀಯ ದಿನದಾಟದ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು 318 ರನ್ ಗಳಿಸಿತ್ತು.
ತಂಡ ಅಗ್ರ ಕ್ರಮಾಂಕದಲ್ಲಿ ಸಣ್ಣದೊಂದು ಕುಸಿತ ಕಂಡಾಗ ಬಾಬಾ ಇಂದ್ರಜಿತ್ ಅಮೋಘ ಶತಕ ಬಾರಿಸಿ ರಕ್ಷಣೆ ಒದಗಿಸಿದರು. ಇಂದ್ರಜಿತ್ ಕೊಡುಗೆ 118 ರನ್. ಇದು ಕೇವಲ 125 ಎಸೆತಗಳಲ್ಲಿ ಬಂತು (14 ಬೌಂಡರಿ). ಅವರಿಗೆ ಮನೀಷ್ ಪಾಂಡೆ (48) ಉತ್ತಮ ಬೆಂಲವಿತ್ತರು. ಈ ಜೋಡಿಯಿಂದ 4ನೇ ವಿಕೆಟಿಗೆ 105 ರನ್ ಒಟ್ಟುಗೂಡಿತು. ಕರ್ನಾಟಕದ ಮತ್ತೂಬ್ಬ ಕ್ರಿಕೆಟಿಗ ಕೆ.ಗೌತಮ್ ಕೂಡ ಆಪತ್ಭಾಂಧವನಾಗಿ ಗೋಚರಿಸಿದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಅವರು 55 ಎಸೆತಗಳಿಂದ 43 ರನ್ ಹೊಡೆದರು (3 ಬೌಂಡರಿ, 3 ಸಿಕ್ಸರ್). 26 ರನ್ ಮಾಡಿರುವ ಟಿ. ರವಿತೇಜ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ರೋಹನ್ ಕುನ್ನುಮ್ಮಾಳ್ (31), ಮಾಯಾಂಕ್ ಅಗರ್ವಾಲ್ (9) ಮತ್ತು ನಾಯಕ ಹನುಮ ವಿಹಾರಿ (25) ವಿಕೆಟ್ 101 ರನ್ ಆಗುವಷ್ಟರಲ್ಲಿ ಬಿತ್ತು. ಅಜಿತ್ ಶೇs… ಮತ್ತು ಜೈದೇವ್ ಉನಾದ್ಕಟ್ ತಲಾ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಪಶ್ಚಿಮ ವಲಯ-270. ದಕ್ಷಿಣ ವಲಯ-7 ವಿಕೆಟಿಗೆ 318 (ಬಾಬಾ ಇಂದ್ರಜಿತ್ 118, ಮನೀಷ್ ಪಾಂಡೆ 48, ಕೆ. ಗೌತಮ್ 43, ಅಜಿತ್ ಶೇಠ್ 51ಕ್ಕೆ 3, ಜೈದೇವ್ ಉನಾದ್ಕಟ್ 52ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ