ಕೋವಿಡ್ : ಟಿ20 ವಿಶ್ವಕಪ್ ಆಡಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗ ; ಇಂದು ಡೆಲಿವರಿ ಬಾಯ್.!
Team Udayavani, Nov 16, 2020, 10:05 PM IST
ನವದೆಹಲಿ : ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಈ ಬಾರಿಯ ಟಿ20 ವಿಶ್ವಕಪ್ ಇಷ್ಟು ಹೊತ್ತಿಗೆ ಮುಗಿದು ಗೆದ್ದ ತಂಡ ಟ್ರೋಫಿಯೊಂದಿಗೆ ಸಂಭ್ರಮದಲ್ಲಿ ಇರುತ್ತಿತ್ತು. ಆದರೆ ಕೋವಿಡ್ ಮಹಾಮಾರಿಯ ಕಾರಣದಿಂದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆ ಆಗಿದೆ.
ಕೋವಿಡ್ ಪರಿಣಾಮ ಬಹುತೇಕ ಎಲ್ಲಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಕ್ರಿಕಟ್ ಪಂದ್ಯಗಳು ಆರಂಭವಾಗಿದ್ರು, ವೀಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಆಟಗಾರರು ಆಡಬೇಕಾದ ಪರಿಸ್ಥಿತಿಯಿದೆ. ಎಲ್ಲಾ ಸರಿ ಆಗಿ ಇದ್ದಿದ್ರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಇಷ್ಟು ಹೊತ್ತಿಗೆ ಮುಕ್ತಾಯವಾಗಿರುತ್ತಿತ್ತು. ಅಕ್ಟೋಬರ್ 18 ರಿಂದ ನವೆಂಬರ್ 15 ವರೆಗೆ ನಡೆಯಬೇಕಿದ್ದ ಟಿ20 ವಿಶ್ವಕಪ್ ಮುಂದಿನ ವರ್ಷಕ್ಕೆ ಮುಂದೂಡಿಕೆ ಆಗಿದೆ. ಈ ಕುರಿತು ಇಎಸ್ ಪಿಎನ್ ಕ್ರಿಕ್ ಇನ್ಫೋ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದು, ಅದಕ್ಕೆ ಬಂದ ರಿ ಟ್ವೀಟ್ಒಂದು ಸದ್ಯ ವೈರಲ್ ಆಗಿದೆ.
ಎಲ್ಲವೂ ಸರಿಯಿದ್ದಿದ್ರೆ ಈ ಬಾರಿಯ ಪುರುಷರ ಟಿ20 ವಿಶ್ವಕಪ್ ಫೈನಲ್ ಎಮ್ ಸಿಜಿ ಮೈದಾನದಲ್ಲಿ ಇಂದು ನಡೆಯುತ್ತ ಇರುತ್ತಿತ್ತು. ಎಂದು ಇಎಸ್ ಪಿನ್ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ನೆದರ್ಲೆಂಡ್ ಪೌಲ್ ವ್ಯಾನ್ ಮೀಕೆರನ್ ರಿ ಟ್ವೀಟ್ ಮಾಡಿದ್ದು, “ ಟಿ20 ಟೂರ್ನಿ ಆಯೋಜನೆಯಾಗಿದ್ದರೆ, ನಾನಿಂದು ಐಸಿಸಿಯಲ್ಲಿ ಆಡುತ್ತಿದ್ದೆ.ಆದರೆ ನಾನೀಗ ಉಬರ್ ಈಟ್ಸ್ ನಲ್ಲಿ ಫುಡ್ ಡೆಲಿವರಿ ಮಾಡುತ್ತಿದ್ದೇನೆ. ಚಳಿಗಾಲ ಕಳೆಯಲು ಬೇರೆ ದಾರಿ ಇಲ್ಲ. ಎಲ್ಲವೂ ಬದಲಾಗಿದೆ .ಎಲ್ಲರೂ ನಗುತ್ತಿರಿ”ಎಂದು ಪೌಲ್ ವ್ಯಾನ್ ಮೀಕೆರನ್ ಟ್ವೀಟ್ ಮಾಡಿದ್ದಾರೆ.
ಪೌಲ್ ವ್ಯಾನ್ ನೆದರ್ಲೆಂಡ್ ಪರ 5 ಅಂತಾರಾಷ್ಟ್ರೀಯ ಏಕದಿನ ಹಾಗೂ 41 ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 47 ವಿಕೆಟ್ ಗಳನ್ನು ಪಡೆದಿದ್ದಾರೆ. 2013 ರಲ್ಲಿ ಕೀನ್ಯಾದ ವಿರುದ್ಧ ಕ್ರಿಕಟ್ ಬದುಕು ಆರಂಭಸಿದರು. ಕೋವಿಡ್ ಪರಿಣಾಮವಾಗಿ ನೆದರ್ಲೆಂಡ್ ನಲ್ಲಿ ಕ್ರಿಕಟ್ ಸಂಪೂರ್ಣ ನಿಂತು ಹೋಗಿದೆ.
Should’ve been playing cricket today ?? now I’m delivering Uber eats to get through the winter months!! Funny how things change hahaha keep smiling people ? https://t.co/kwVEIo6We9
— Paul van Meekeren (@paulvanmeekeren) November 15, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ