ಎಲಿಸ್ ಮಾರ್ಟೆನ್ಸ್ಗೆ ಕತಾರ್ ಕಿರೀಟ
Team Udayavani, Feb 18, 2019, 12:30 AM IST
ದೋಹಾ: ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ತಮ್ಮ ಟೆನಿಸ್ ಬಾಳ್ವೆಯ ಅತೀ ದೊಡ್ಡ ಪ್ರಶಸ್ತಿ ಜಯಿಸಿದ್ದಾರೆ. ಶನಿವಾರ ರಾತ್ರಿ ನಡೆದ “ಕತಾರ್ ಓಪನ್’ ಕೂಟದ ಫೈನಲ್ನಲ್ಲಿ ಅವರು 3ನೇ ಶ್ರೇಯಾಂಕದ ಸಿಮೋನಾ ಹಾಲೆಪ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ ಟ್ರೋಫಿಗೆ ಮುತ್ತಿಡುವಲ್ಲಿ ಯಶಸ್ವಿಯಾದರು. ಮಾರ್ಟೆನ್ಸ್ ಗೆಲುವಿನ ಅಂತರ 3-6, 6-4, 6-3.
ವಿಶ್ವದ 21ನೇ ರ್ಯಾಂಕಿಂಗ್ ಆಟಗಾರ್ತಿಯಾಗಿರುವ ಎಲಿಸ್ ಮಾರ್ಟೆನ್ಸ್ ಮೊದಲ ಸೆಟ್ನಲ್ಲಿ ಹಾಲೆಪ್ಗೆ ಸಾಟಿಯಾಗುವಲ್ಲಿ ವಿಫಲರಾದರು. ಆಗ ಮಾರ್ಟೆನ್ಸ್ ಬಹಳ ನರ್ವಸ್ ಆದಂತಿತ್ತು. 32 ನಿಮಿಷಗಳಲ್ಲಿ ಈ ಸೆಟ್ ಕಳೆದುಕೊಂಡರು.
ದ್ವಿತೀಯ ಸೆಟ್ ವೇಳೆಯೂ 0-2 ಹಿನ್ನಡೆಯಲ್ಲಿದ್ದರು. ಆಗ ಬೆನ್ನು ನೋವಿಗೆ ಸಿಲುಕಿದಾಗಲಂತೂ ಬೆಲ್ಜಿಯನ್ ಆಟಗಾರ್ತಿಯ ಸೋಲು ಖಚಿತ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ 8 ನಿಮಿಷಗಳ “ಮೆಡಿಕಲ್ ಟೈಮ್ಔಟ್’ ಬಳಿಕ ಅಮೋಘ ರೀತಿಯಲ್ಲಿ ಚೇತರಿಸಿಕೊಂಡ ಮಾರ್ಟೆನ್ಸ್, ನೆಚ್ಚಿನ ಹಾಲೆಪ್ ಹಾರಾಟವನ್ನು ಕೊನೆಗೊಳಿಸಿಯೇ ಬಿಟ್ಟರು. 2 ಗಂಟೆಗೂ ಸ್ವಲ್ಪ ಹೆಚ್ಚು ಕಾಲ ಇವರಿಬ್ಬರ ಆಟ ಸಾಗಿತು.
ಈ ಜಯದೊಂದಿಗೆ ಎಲಿಸ್ ಮಾರ್ಟೆನ್ಸ್ ಒಂದೇ ವಾರದಲ್ಲಿ ಟಾಪ್-10 ಯಾದಿಯ ಮೂವರು ಆಟಗಾರರನ್ನು ಸೋಲಿಸಿದಂತಾಯಿತು. ಹಾಗೆಯೇ ಗ್ರ್ಯಾನ್ಸ್ಲಾಮ್ ಚಾಂಪಿಯನ್ಸ್ ವಿರುದ್ಧ 2ನೇ ಗೆಲುವನ್ನೂ ಸಾಧಿಸಿದರು. ಹಾಲಿ ಫ್ರೆಂಚ್ ಓಪನ್ ಚಾಂಪಿಯನ್ ಹಾಲೆಪ್ ಅವರನ್ನು ಫೈನಲ್ನಲ್ಲಿ ಸೋಲಿಸುವುದಕ್ಕಿಂತ ಮೊದಲು ಸೆಮಿಫೈನಲ್ನಲ್ಲಿ ವಿಂಬಲ್ಡನ್ ವಿಜೇತೆಯಾಗಿರುವ ಆ್ಯಂಜೆಲಿಕ್ ಕೆರ್ಬರ್ ಆಟವನ್ನೂ ಕೊನೆಗೊಳಿಸಿದ್ದರು.
ಈ ಜಯದಿಂದಾಗಿ ನೂತನ ರ್ಯಾಂಕಿಂಗ್ನಲ್ಲಿ ಎಲಿಸ್ ಮಾರ್ಟೆನ್ಸ್ 5 ಸ್ಥಾನ ಮೇಲೇರಿ 16ನೇ ಸ್ಥಾನ ತಲುಪಲಿದ್ದಾರೆ. ಕಾಕತಾಳೀಯವೆಂದರೆ, ಕಳೆದ ವರ್ಷದ ಕತಾರ್ ಓಪನ್ ಪ್ರಶಸ್ತಿ ಗೆಲ್ಲುವಾಗ ಪೆಟ್ರಾ ಕ್ವಿಟೋವಾ ಕೂಡ 21ನೇ ರ್ಯಾಂಕಿಂಗ್ ಹೊಂದಿದ್ದರು.
ಬಹಳ ಬಳಲಿದ್ದೆ: ಹಾಲೆಪ್
2014ರಲ್ಲಿ ಕತಾರ್ ಕಿರೀಟ ಏರಿಸಿಕೊಂಡಿದ್ದ ಸಿಮೋನಾ ಹಾಲೆಪ್ ಸೋಲಿನ ಬಳಿಕ ಪ್ರತಿಕ್ರಿಯಿಸುತ್ತ, “3ನೇ ಸೆಟ್ ವೇಳೆ ನಾನು ಬಹಳ ಬಳಲಿದ್ದೆ. ಈ ಸೆಟ್ ಗೆಲ್ಲುವ ಯಾವ ಅವಕಾಶವೂ ನನ್ನ ಮುಂದಿರಲಿಲ್ಲ. ಮಾರ್ಟೆನ್ಸ್ ಹಂತ ಹಂತವಾಗಿ ಹೆಚ್ಚು ಬಲಿಷ್ಠಗೊಳ್ಳುತ್ತಲೇ ಹೋದರು. ಗೆಲುವಿಗೆ ಅವರು ಅರ್ಹವಾಗಿದ್ದರು’ ಎಂದರು.
“ಇದು ನನ್ನ ಟೆನಿಸ್ ಬದುಕಿನ ಮಹಾನ್ ಗಳಿಗೆ. ಹಿನ್ನಡೆಯ ಬಳಿಕವೂ ಉತ್ತಮ ಪ್ರದರ್ಶನ ನೀಡಿದೆ. ನೈಸೆಸ್ಟ್ ವಿಕ್ಟರಿ’
– ಎಲಿಸ್ ಮಾರ್ಟೆನ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ