ಇಂಗ್ಲೆಂಡ್‌ಗೆ ಸರಣಿ ಕಿರೀಟ : ಕೊಹ್ಲಿ, ಧವನ್‌ ಜತೆಯಾಟ ವ್ಯರ್ಥ


Team Udayavani, Jul 18, 2018, 9:37 AM IST

100.jpg

ಲೀಡ್ಸ್‌: ಜೋ ರೂಟ್‌ (ಅಜೇಯ 100 ರನ್‌) ಮತ್ತು ಇಯಾನ್‌ ಮಾರ್ಗನ್‌ (ಅಜೇಯ 88 ರನ್‌) ನೆರವಿನಿಂದ ನಿರ್ಣಾಯಕ ಪಂದ್ಯದಲ್ಲಿ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಆತಿಥೇಯ ಇಂಗ್ಲೆಂಡ್‌ 2-1 ರಿಂದ ಏಕದಿನ
ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತ 50 ಓವರ್‌ಗೆ 8 ವಿಕೆಟ್‌ಗೆ 256 ರನ್‌ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌
ಅಗ್ರ ಬ್ಯಾಟ್ಸ್‌ಮನ್‌ ಪ್ರಚಂಡ ಸಾಹಸದಿಂದಾಗಿ 44.3 ಓವರ್‌ ಗೆ ಕೇವಲ 2 ವಿಕೆಟ್‌ ಕಳೆದುಕೊಂಡು 260 ರನ್‌ಗಳಿಸಿ
ಗೆಲುವಿನ ದಡ ಸೇರಿತು. ಆರಂಭದಲ್ಲಿ 2 ವಿಕೆಟ್‌ ಕಳೆದುಕೊಂಡರೂ ರೂಟ್‌ ಮತ್ತು ಮೊರ್ಗನ್‌ ಸಾಹಸಮಯ
ಜತೆಯಾಟದಿಂದ ಇಂಗ್ಲೆಂಡ್‌ ಸುಲಭ ಗೆಲುವು ಸಾಧಿಸಿತು.ಇದರೊಂದಿಗೆ ಟಿ20 ಸರಣಿ ಸೋಲಿಗೆ ಆತಿಥೇಯರು ಸೇಡು
ತೀರಿಸಿಕೊಂಡರು.

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಭಾರತೀಯರು ಅದ್ಭುತ ಆಟ ಪ್ರದರ್ಶಿಸಲಿಲ್ಲ. ಅಗ್ರ ಕ್ರಮಾಂಕದಲ್ಲಿ ವಿರಾಟ್‌
ಕೊಹ್ಲಿ (71 ರನ್‌), ಶಿಖರ್‌ ಧವನ್‌ (44 ರನ್‌) ಉತ್ತಮ ಜತೆಯಾಟ ನೀಡಿದರೂ ಬ್ಯಾಟ್ಸ್‌ಮನ್‌ಗಳ ಹಠಾತ್‌ ಕುಸಿತ
ಪರಿಣಾಮದಿಂದ ಇಂಗ್ಲೆಂಡ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಾಧಾರಣ ಸವಾಲನ್ನು ನೀಡಲಷ್ಟೇ
ಸಾಧ್ಯವಾಯಿತು.

ಕೊಹ್ಲಿ, ಧವನ್‌ ಜತೆಯಾಟ: ಶಿಖರ್‌ ಧವನ್‌ ಜತೆಗೆ ರೋಹಿತ್‌ ಶರ್ಮ (2 ರನ್‌) ಇನಿಂಗ್ಸ್‌ ಆರಂಭಿಸಿದರು.
ತಂಡದ ಒಟ್ಟು ರನ್‌ 13 ಆಗಿದ್ದಾಗ ವಿಲ್ಲಿ ಎಸೆತದಲ್ಲಿ ಹಿಟ್‌ ಮ್ಯಾನ್‌ ರೋಹಿತ್‌ ಅವರು ವುಡ್‌ ಮ್ಯಾನ್‌ಗೆ ಕ್ಯಾಚ್‌ ನೀಡಿ ಔಟಾದರು. ಈ ಹಂತದಲ್ಲಿ ವಿರಾಟ್‌ ಕೊಹ್ಲಿ-ಶಿಖರ್‌ ಧವನ್‌ ಒಂದಾದರು. 81 ರನ್‌ ಜತೆಯಾಟ ಮಾಡಿದರು. ಆರಂಭಿಕ
ಆಘಾತವನ್ನು ಸರಿಪಡಿಸಲು ಪ್ರಯತ್ನಿಸಿದರು. 49 ಎಸೆತ ಎದುರಿಸಿದ್ದ ಧವನ್‌ 7 ಬೌಂಡರಿ ಸಿಡಿಸಿದ್ದಾಗ ಇಲ್ಲದ ರನ್‌ ಕದಿಯಲು ಪ್ರಯತ್ನಿಸಿ ಸ್ಟೋಕ್ಸ್‌ ಎಸೆತದಲ್ಲಿ ರನೌಟಾದರು.

ಆ ಬಳಿಕ ಕೊಹ್ಲಿ ಜತೆಗೆ ದಿನೇಶ್‌ ಕಾರ್ತಿಕ್‌ (21 ರನ್‌) ಜತೆಗೂಡಿದರು. 22 ಎಸೆತದ ಎದುರಿಸಿದ ಕಾರ್ತಿಕ್‌ 3
ಬೌಂಡರಿ ಸಿಡಿಸಿದ್ದಾಗ ರಶೀದ್‌ ಎಸೆತದಲ್ಲಿ ಬೌಲ್ಡ್‌ ಆದರು. ಆಗ ತಂಡದ ಒಟ್ಟು ಮೊತ್ತ 3 ವಿಕೆಟ್‌ಗೆ 125 ರನ್‌ ಆಗಿತ್ತು.
ಕಾರ್ತಿಕ್‌ ಔಟಾದ ಬೆನ್ನಲ್ಲೇ ಅರ್ಧಶತಕ ದಾಖಲಿಸಿ ಶತಕದತ್ತ ಸಾಗುತ್ತಿದ್ದ ವಿರಾಟ್‌ ಕೊಹ್ಲಿ ಕೂಡ ಎಡವಿದರು. ಮತ್ತೂಮ್ಮೆ ಅಪಾಯಕಾರಿಯಾದ ರಶೀದ್‌ ಕೊಹ್ಲಿಯನ್ನು ಬೌಲ್ಡ್‌ ಮಾಡಿದರು. ಆಗ ತಂಡದ ಮೊತ್ತ 4 ವಿಕೆಟ್‌ಗೆ 156 ರನ್‌ ಆಗಿತ್ತು. ಈ ಬೆನ್ನಲ್ಲೇ ಸುರೇಶ್‌ ರೈನಾ (1 ರನ್‌) ಕೂಡ ರಶೀದ್‌ ಮ್ಯಾಜಿಕ್‌ ಅರಿಯಲಾಗದೆ ವಿಕೆಟ್‌
ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ಭಾರತ 31 ಓವರ್‌ಗೆ 158 ರನ್‌ಗೆ 7 ವಿಕೆಟ್‌ ಕಳೆದುಕೊಂಡಿತ್ತು.
ಮತ್ತೂಮ್ಮೆ ಧೋನಿ ನಿಧಾನ: ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿ ಸಾಮಾಜಿಕ
ಜಾಲತಾಣದಲ್ಲಿ ಟೀಕೆಗೊಳಗಾಗಿದ್ದ ಎಂ.ಎಸ್‌.ಧೋನಿ ಮತ್ತೂಮ್ಮೆ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಬೇಕಾಯಿತು.

66 ಎಸೆತದಿಂದ 4 ಬೌಂಡರಿ ಒಳಗೊಂಡ 42 ರನ್‌ ಅಷ್ಟನ್ನೇ ಧೋನಿಗಳಿಸಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ (21
ರನ್‌), ಭುವನೇಶ್ವರ್‌ ಕುಮಾರ್‌ (21 ರನ್‌) ಮತ್ತು ಶಾದೂìಲ್‌ ಠಾಕೂರ್‌ (ಅಜೇಯ 22 ರನ್‌) ಗಳಿಸಿದ್ದರಿಂದ
ಭಾರತ 250 ರನ್‌ ಗಡಿದಾಟಲು ಸಾಧ್ಯವಾಯಿತು

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.