ಇಂಗ್ಲೆಂಡಿನ ಹೊಡೆತಕ್ಕೆ ಶರಣಾದ ನ್ಯೂಜಿಲ್ಯಾಂಡ್‌

ಬಣ ಒಂದರಲ್ಲಿ ಸೆಮಿಫೈನಲ್‌ ಅರ್ಹತೆಗೆ ನಾಲ್ವರೊಳಗೆ ಸ್ಪರ್ಧೆ

Team Udayavani, Nov 1, 2022, 10:51 PM IST

ಇಂಗ್ಲೆಂಡಿನ ಹೊಡೆತಕ್ಕೆ ಶರಣಾದ ನ್ಯೂಜಿಲ್ಯಾಂಡ್‌

ಬ್ರಿಸ್ಟನ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್‌ ತಂಡವು ಟಿ20 ವಿಶ್ವಕಪ್‌ ಕೂಟದ ಮಂಗಳವಾರದ ಮಹತ್ವದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 20 ರನ್ನುಗಳಿಂದ ಸೋಲಿಸಿತಲ್ಲದೇ ಸೆಮಿಫೈನಲಿಗೇರುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು.

ನಾಯಕ ಜಾಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಅವರ ಅಮೋಘ ಆಟದಿಂದಾಗಿ ಇಂಗ್ಲೆಂಡ್‌ ತಂಡವು ಆರು ವಿಕೆಟಿಗೆ 179 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡಿನ ನಿಖರ ದಾಳಿಗೆ ರನ್‌ ಗಳಿಸಲು ಒದ್ದಾಡಿದ ನ್ಯೂಜಿಲ್ಯಾಂಡ್‌ ಆರು ವಿಕೆಟಿಗೆ 159 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಗೆಲುವಿನಿಂದ ಇಂಗ್ಲೆಂಡ್‌ ತಂಡವು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವನ್ನು ಹಿಂದಿಕ್ಕಿ ಬಣ ಒಂದರಲ್ಲಿ ದ್ವಿತೀಯ ಸ್ಥಾನಕ್ಕೇರಿತು. ನ್ಯೂಜಿಲ್ಯಾಂಡ್‌, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ತಲಾ ಐದಂಕ ಹೊಂದಿದ್ದು ಉತ್ತಮ ರನ್‌ಧಾರಣೆಯ ಆಧಾರದಲ್ಲಿ ನ್ಯೂಜಿಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ.

ಫಿಲಿಪ್ಸ್‌ ಬಿರುಸಿನ ಅರ್ಧಶತಕ
ಭರ್ಜರಿ ಫಾರ್ಮ್ನಲ್ಲಿರುವ ಗ್ಲೆನ್‌ ಫಿಲಿಪ್ಸ್‌ ಈ ಪಂದ್ಯದಲ್ಲೂ ಬಿರುಸಿನ ಅರ್ಧಶತಕ ಹೊಡೆದರೂ ನ್ಯೂಜಿಲ್ಯಾಂಡ್‌ ಗೆಲುವಿನಿಂದ ದೂರವೇ ಉಳಿಯಿತು. ಸ್ಪಿನ್‌ಗೆ ಸ್ವಲ್ಪಮಟ್ಟಿನ ನೆರವು ನೀಡುತ್ತಿದ್ದ ಈ ಪಿಚ್‌ನಲ್ಲಿಯೂ ಫಿಲಿಪ್ಸ್‌ ಇಂಗ್ಲೆಂಡಿನ ಲೆಗ್‌ಸ್ಪಿನ್ನರ್‌ ಅದಿಲ್‌ ರಶೀದ್‌ ಅವರ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್‌ ಬಾರಿಸಿದ್ದರು. ಅವರು ಕೇವಲ 36 ಎಸೆತಗಳಿಂದ 62 ರನ್‌ ಗಳಿಸಿದ್ದರು. 4 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದ್ದರು.

ನ್ಯೂಜಿಲ್ಯಾಂಡ್‌ ಕೊನೆಯ ನಾಲ್ಕು ಓವರ್‌ಗಳಲ್ಲಿ 54 ರನ್‌ ಗಳಿಸಬೇಕಿತ್ತು. ಆಗ ಫಿಲಿಪ್ಸ್‌ ಕ್ರೀಸ್‌ನಲ್ಲಿದ್ದರು. ಆದರೆ ಇಂಗ್ಲೆಂಡಿನ ವೇಗದ ಪಡೆ ನಿಖರ ದಾಳಿ ಸಂಘಟಿಸಿ ಮೇಲುಗೈ ಸಾಧಿಸಿತ್ತು. ಮಾರ್ಕ್‌ ವುಡ್‌ ಸಹಿತ ಸ್ಯಾಮ್‌ ಕರನ್‌ ಮತ್ತು ಕ್ರಿಸ್‌ ವೋಕ್ಸ್‌ ಅವರ ತೀಕ್ಷ್ಣ ದಾಳಿಯಿಂದ ನ್ಯೂಜಿಲ್ಯಾಂಡ್‌ ತತ್ತರಿಸಿತು. 18ನೇ ಓವರಿನಲ್ಲಿ ಫಿಲಿಪ್ಸ್‌ ಅವರ ಬಹುಮೂಲ್ಯ ವಿಕೆಟನ್ನು ಹಾರಿಸಿದ ಕರನ್‌ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು.

ಬಣ ಒಂದರ ಅಗ್ರಸ್ಥಾನಿ ನ್ಯೂಜಿಲ್ಯಾಂಡಿಗೆ ಇದು ಮೊದಲ ಸೋಲು ಆಗಿದೆ. ನಾಲ್ಕು ಪಂದ್ಯ ಆಡಿರುವ ನ್ಯೂಜಿಲ್ಯಾಂಡ್‌ ಶುಕ್ರವಾರದ ಅಂತಿಮ ಸೂಪರ್‌ 12 ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್‌ ತನ್ನ ಅಂತಿಮ ಪಂದ್ಯದಲ್ಲಿ ಶನಿವಾರ ಶ್ರೀಲಂಕಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿಯೂ ಇಂಗ್ಲೆಂಡ್‌ ಉತ್ತಮ ರನ್‌ಧಾರಣೆಯೊಂದಿಗೆ ಗೆದ್ದರೆ ಸೆಮಿಫೈನಲಿಗೇರುವ ಸಾಧ್ಯತೆಯಿದೆ.

ಇಂಗ್ಲೆಂಡ್‌ ಉತ್ತಮ ಆರಂಭ
ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಇಂಗ್ಲೆಂಡ್‌ ತಂಡವು ಉತ್ತಮ ಆರಂಭ ಪಡೆಯಿತು. ತನ್ನ 100ನೇ ಟಿ20 ಪಂದ್ಯವನ್ನಾಡಿದ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಮೊದಲ ವಿಕೆಟಿಗೆ 10.2 ಓವರ್‌ಗಳಲ್ಲಿ 81 ರನ್‌ ಪೇರಿಸಿ ಬೇರ್ಪಟ್ಟರು. ಹೇಲ್ಸ್‌ 40 ಎಸೆತಗಳಿಂದ 52 ರನ್‌ ಗಳಿಸಿ ಔಟಾದರು. 7 ಬೌಂಡರಿ ಮತ್ತು 1 ಸಿಕ್ಸರ್‌ ಬಾರಿಸಿದರು.

ಬಹುತೇಕ ಇನ್ನಿಂಗ್ಸ್‌ಪೂರ್ತಿ ಆಡಿದ ಬಟ್ಲರ್‌ 19ನೇ ಓವರಿನಲ್ಲಿ ರನೌಟ್‌ಗೆ ಬಲಿಯಾದರು. 47 ಎಸೆತ ಎದುರಿಸಿದ ಅವರು 73 ರನ್‌ ಗಳಿಸಿ ಔಟಾದರು. 7 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದರು. ಅಂತಿಮವಾಗಿ ಇಂಗ್ಲೆಂಡ್‌ 6 ವಿಕೆಟಿಗೆ 179 ರನ್ನುಗಳ ಉತ್ತಮ ಮೊತ್ತ ಪೇರಿಸಿತ್ತು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸ್‌ ಬಟ್ಲರ್‌ ರನೌಟ್‌ 73
ಅಲೆಕ್ಸ್‌ ಹೇಲ್ಸ್‌ ಸ್ಟಂಪ್ಡ್ ಕಾನ್ವೆ ಬಿ ಸ್ಯಾಂಟ್ನರ್‌ 52
ಮೊಯಿನ್‌ ಅಲಿ ಸಿ ಬೌಲ್ಟ್ ಬಿ ಸೋಧಿ 5
ಎಲ್‌. ಲಿವಿಂಗ್‌ಸ್ಟೋನ್‌ ಬಿ ಫೆರ್ಗ್ಯುಸನ್‌ 20
ಹ್ಯಾರಿ ಬ್ರೂಕ್‌ ಸಿ ಅಲೆನ್‌ ಬಿ ಸೌಥಿ 7
ಬೆನ್‌ ಸ್ಟೋಕ್ಸ್‌ ಎಲ್‌ಬಿಡಬ್ಲ್ಯು ಬಿ ಫೆರ್ಗುÂಸನ್‌ 8
ಸ್ಯಾಮ್‌ ಕರನ್‌ ಔಟಾಗದೆ 6
ಡೇವಿಡ್‌ ಮಾಲನ್‌ ಔಟಾಗದೆ 3
ಇತರ 5
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 179
ವಿಕೆಟ್‌ ಪತನ: 1-81, 2-108, 3-153, 4-160, 5-162, 6-176
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-40-0
ಟಿಮ್‌ ಸೌಥಿ 4-0-43-1
ಮಿಚೆಲ್‌ ಸ್ಯಾಂಟ್ನರ್‌ 4-0-25-1
ಲೂಕಿ ಫೆರ್ಗ್ಯುಸನ್‌ 4-0-45-2
ಐಶ್‌ ಸೋಧಿ 4-0-23-1

ನ್ಯೂಜಿಲ್ಯಾಂಡ್‌
ಫಿನ್‌ ಅಲೆನ್‌ ಸಿ ಸ್ಟೋಕ್ಸ್‌ ಬಿ ಕರನ್‌ 16
ಡೆವೋನ್‌ ಕಾನ್ವೆ ಸ್ಟಂಪ್ಡ್ ಬಟ್ಲರ್‌ ಬಿ ವೋಕ್ಸ್‌ 3
ಕೇನ್‌ ವಿಲಿಯಮ್ಸ್‌ನ್‌ ಸಿ ರಶೀದ್‌ ಬಿ ಸ್ಟೋಕ್ಸ್‌ 40
ಗ್ಲೆನ್‌ ಫಿಲಿಪ್ಸ್‌ ಸಿ ಬದಲಿಗ ಬಿ ಕರನ್‌ 62
ಜೇಮ್ಸ್‌ ನೀಶಮ್‌ ಸಿ ಕರನ್‌ ಬಿ ವುಡ್‌ 6
ಡ್ಯಾರಿಲ್‌ ಮಿಚೆಲ್‌ ಸಿ ಬದಲಿಗ ಬಿ ವೋಕ್ಸ್‌ 3
ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 16
ಐಶ್‌ ಸೋಧಿ ಔಟಾಗದೆ 6
ಇತರ: 7
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 159
ವಿಕೆಟ್‌ ಪತನ: 1-8, 2-28, 3-119, 4-126, 5-131, 6-135
ಬೌಲಿಂಗ್‌: ಮೊಯಿನ್‌ ಅಲಿ 1-0-4-0
ಕ್ರಿಸ್‌ ವೋಕ್ಸ್‌ 4-0-33-2
ಅದಿಲ್‌ ರಶೀದ್‌ 4-0-33-0
ಸ್ಯಾಮ್‌ ಕರನ್‌ 4-0-26-2
ಮಾರ್ಕ್‌ ವುಡ್‌ 3-0-25-1
ಲಿಯಮ್‌ ಲಿವಿಂಗ್‌ಸ್ಟೋನ್‌ 3-0-26-0
ಬೆನ್‌ ಸ್ಟೋಕ್ಸ್‌ 1-0-10-0

ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

ನಮ್ಮಲ್ಲಿ ಆತ್ಮವಿಶ್ವಾಸವಿದೆ: ಜಾಸ್‌ ಬಟ್ಲರ್‌
ಐರ್ಲೆಂಡ್‌ ವಿರುದ್ಧ ತಂಡದ ಆಘಾತಕಾರಿ ಸೋಲಿನ ಬಗ್ಗೆ ನಾವು ಗಂಭೀರವಾಗಿ ಚಿಂತಿಸುವುದಿಲ್ಲ. ಯಾಕೆಂದರೆ ನಮ್ಮ ತಂಡದಲ್ಲಿ ಹಲವು ಶ್ರೇಷ್ಠ ಆಟಗಾರರು ಇದ್ದಾರೆ ಮತ್ತು ಸದ್ದ ಸಾಗುತ್ತಿರುವ ಟಿ20 ವಿಶ್ವಕಪ್‌ನಲ್ಲಿ ತಿರುಗೇಟು ನೀಡುವಷ್ಟು ಆತ್ಮವಿಶ್ವಾಸ ನಮ್ಮಲ್ಲಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌ ಹೇಳಿದ್ದಾರೆ.

ಐರ್ಲೆಂಡ್‌ ವಿರುದ್ಧ ಅ. 26ರಂದು ನಡೆದ ಪಂದ್ಯದಲ್ಲಿ ಸೋತ ಬಳಿಕ ಇಂಗ್ಲೆಂಡ್‌ ತಂಡವು ಬಹಳಷ್ಟು ಒತ್ತಡಕ್ಕೆ ಬಿತ್ತು. ಆದರೆ ಮಂಗಳವಾರ ನ್ಯೂಜಿಲ್ಯಾಂಡ್‌ ತಂಡವನ್ನು 20 ರನ್ನುಗಳಿಂದ ಸೋಲಿಸುವ ಮೂಲಕ ತಂಡವು ಸೆಮಿಫೈನಲಿಗೇರುವ ಆಸೆಯನ್ನು ಜೀವಂತವಿರಿಸಿಕೊಂಡಿದೆ.

ಹಿಂದಿನ ನಿರ್ವಹಣೆಯ ಬಗ್ಗೆ ನಾವು ಅಲೋಚನೆ ಮಾಡುತ್ತಿಲ್ಲ. ನಮ್ಮ ಆಟವಾಡುವ ಬಳಗದಲ್ಲಿ ಉತ್ತಮ ಆಟಗಾರರು ಇದ್ದಾರೆ. ನಮ್ಮ ಶ್ರೇಷ್ಠ ನಿರ್ವಹಣೆಯನ್ನು ನ್ಯೂಜಿಲ್ಯಾಂಡ್‌ ವಿರುದ್ಧ ತೋರಿಸಿದ್ದೇವೆ. ಈ ನಿರ್ವಹಣೆ ಮುಂದಿನ ಪಂದ್ಯಗಳಲ್ಲೂ ಮುಂದುವರಿಯಲಿದೆ ಎಂದವರು ವಿವರಿಸಿದರು.

ಮೊದಲಿಗೆ ಬ್ಯಾಟಿಂಗ್‌ ಮಾಡುವ ನಿರ್ಧಾರ ಮಾಡಿರುವುದು ಉತ್ತಮ ಆಯ್ಕೆಯಾಗಿದೆ. 160ರಿಂದ 165 ರನ್‌ ಪೇರಿಸುವುದು ನಮ್ಮ ಗುರಿಯಾಗಿತ್ತು. ಕೊನೆಯಲ್ಲಿ ನಾವು ಅದಕ್ಕಿಂತಲೂ ಹೆಚ್ಚಿನ ರನ್‌ ಪೇರಿಸಿದ್ದೆವು. ನಮ್ಮ ಬೌಲಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು. ಇನ್ನು ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲುವುದು ಅತೀ ಮುಖ್ಯ ಎಂದು ಬಟ್ಲರ್‌ ತಿಳಿಸಿದರು.

ಟಾಪ್ ನ್ಯೂಸ್

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

7-

Obsessive Psychiatry: ಗೀಳು ಮನೋರೋಗ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.