ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ


Team Udayavani, Jul 8, 2020, 6:17 AM IST

ಕೋವಿಡ್ ಕಾಲದಲ್ಲೊಂದು ಕ್ರಿಕೆಟ್‌ ಕದನ ; 4 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಚಾಲನೆ

ಸೌತಾಂಪ್ಟನ್‌: ಇದು ಕೋವಿಡ್ 19 ಮಾರಿಗೆ ಕ್ರಿಕೆಟ್‌ ಮೂಲಕ ಸಡ್ಡು ಹೊಡೆಯುವ ಕಾಲ.

ಬರೋಬ್ಬರಿ 4 ತಿಂಗಳಿಂದ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನುಂಗಿ, ಜಗತ್ತಿನ ತುಂಬ ದಾಂಗುಡಿ ಇಡುತ್ತಲೇ ಬಂದ ಕೋವಿಡ್ 19 ಪೀಡೆಗೆ ಇನ್ನು ಅಂಜುತ್ತ ಕುಳಿತರೆ ಸಾಧ್ಯವಾಗದು ಎಂಬ ದಿಟ್ಟ ನಿರ್ಧಾರಕ್ಕೆ ಬಂದ ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡಗಳು ಬುಧವಾರದಿಂದ ಇಲ್ಲಿ ಟೆಸ್ಟ್‌ ಕದನಕ್ಕೆ ಇಳಿಯಲಿವೆ.

ಈ ಕೋವಿಡ್ 19 ಮಹಾಮಾರಿ ಒಲಿಂಪಿಕ್ಸ್‌ನಂಥ ಮಹೋನ್ನತ ಪಂದ್ಯಾವಳಿಯನ್ನೇ ಆಹುತಿ ಪಡೆದ ಹೆಮ್ಮಾರಿ. ಹೀಗಾಗಿ ಜಾಗತಿಕ ಕ್ರೀಡೆ ಮರಳಿ ಚಿಗುರೊಡೆಯುವ ಕಾಲಘಟಕ್ಕೆ ಈ ಕ್ರಿಕೆಟ್‌ ಸರಣಿ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.

ಹಿಂದಿನಂತಲ್ಲ ಈ ಮುಖಾಮುಖಿ
ಇದು ಹಿಂದಿನ ಮಾಮೂಲು ಕ್ರಿಕೆಟ್‌ ಟೆಸ್ಟ್‌ ಪಂದ್ಯಗಳಂಥಲ್ಲ. ಕೋವಿಡ್ 19 ಭೀತಿ ಇರುವ ಕಾರಣ ಸಾಕಷ್ಟು ಮುಂಜಾಗ್ರತಾ ಕ್ರಮ, ನೂತನ ನಿಯಮ, ಪ್ರೇಕ್ಷಕರಿಲ್ಲದ ಶೂನ್ಯ ವಾತಾವರಣಕ್ಕೆಲ್ಲ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಸಂಭ್ರಮಾಚರಣೆ ಇಲ್ಲ
ವಿಕೆಟ್‌ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪುಗೂಡಿ ಸಂಭ್ರಮ ನಡೆಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್‌ಗಳ ಹಾಗೂ ಕ್ಯಾಚ್‌ ಪಡೆದವರ ಮೈಮೇಲೆ ಏರಿ ಹೋಗುವುದು, ಬೌಲರ್‌ಗಳ ಕೈ ತಟ್ಟಿ ಸಂಭ್ರಮಿಸುವುದು ಇಲ್ಲಿ ಕಂಡುಬರದು. ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಬೇಕಿದ್ದರೆ ಕಾಲಿಗೆ ಕಾಲನ್ನು ತಾಗಿಸಲೂಬಹುದು!


ವೀಕ್ಷಕರಿಗೆ ನಿರ್ಬಂಧ
ಈ ಪಂದ್ಯದ ವೇಳೆ ಸ್ಟೇಡಿಯಂ ಸಂಪೂರ್ಣ ಖಾಲಿ ಇರಲಿದೆ. ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪಂದ್ಯದುದ್ದಕ್ಕೂ ಮೌನವೇ ಮುಂದುವರಿಯಲಿದೆ. ಆದರೆ ಟಿವಿ ವೀಕ್ಷಕರಿಗಾಗಿ ಪ್ರೇಕ್ಷಕರ ಭೋರ್ಗರೆತದ ಕೃತಕ ಧ್ವನಿಯನ್ನು ಅಳವಡಿಸಲಾಗುವುದು.

ಇಲ್ಲಿ ಇನ್ನೊಂದು ಪ್ರಮುಖ ಸಂಗತಿ ಇದೆ. ಇತ್ತೀಚೆಗೆ ಜಗತ್ತಿನ ಕೆಲವೆಡೆ ವರ್ಣ ವೈಷಮ್ಯ ಮತ್ತೆ ಜನರ ನಡುವೆ ಕಂದಕವನ್ನು ಸೃಷ್ಟಿಸಿದೆ. ಇಂಥದೊಂದು ವಿಷಮ ಸ್ಥಿತಿಯಲ್ಲಿ ಬಿಳಿಯ ಆಂಗ್ಲರು ಮತ್ತು ಕೆರಿಬಿಯನ್ನರು ಕ್ರಿಕೆಟ್‌ನಲ್ಲಿ ಮುಖಾಮುಖಿ ಆಗುತ್ತಿರುವುದು ಕಚ್ಚಾಡುತ್ತಿರುವವರ ಪಾಲಿಗೊಂದು ಪಾಠ ಆಗುವುದರಲ್ಲಿ ಸಂಶಯವಿಲ್ಲ.

ಹೀಗಾಗಿ ಈ ಟೆಸ್ಟ್‌ ಪಂದ್ಯವನ್ನು, ಸರಣಿಯನ್ನು ಯಾರೇ ಗೆಲ್ಲಲಿ ಅಥವಾ ಸೋಲಲಿ, ಅದು ಮುಖ್ಯವಲ್ಲ. ಮತ್ತೆ ವಿಶ್ವ ಮಟ್ಟದ ಕ್ರೀಡೆಗೆ ಬಾಗಿಲು ತೆರೆದುಕೊಳ್ಳುತ್ತಿರುವುದೇ ಒಂದು ಸಂತಸದ ಬೆಳವಣಿಗೆ.

ಕಾಯುವಿಕೆಗೆ 32 ವರ್ಷ
ಇತ್ತಂಡಗಳ ಟೆಸ್ಟ್‌ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸಮಬಲದ ಸಾಧನೆಯನ್ನು ಕಾಣಬಹುದು. ಇಂಗ್ಲೆಂಡ್‌ ಅತ್ಯಧಿಕ ಸರಣಿ ಗೆದ್ದರೆ, ವೆಸ್ಟ್‌ ಇಂಡೀಸ್‌ ಅತೀ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಜಯಿಸಿದೆ.

ಆದರೆ ಕಳೆದ 32 ವರ್ಷಗಳಿಂದ, ಅಂದರೆ 1988ರ ಬಳಿಕ ಕೆರಿಬಿಯನ್ನರಿಗೆ ಆಂಗ್ಲರ ನೆಲದಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ದೊಡ್ಡದೊಂದು ಕೊರಗು ಕಾಡುತ್ತಲೇ ಇದೆ. ಹೋಲ್ಡರ್‌ ಪಡೆ ಇದನ್ನು ನೀಗಿಸಿಕೊಂಡೀತೇ ಎಂಬುದೊಂದು ಕುತೂಹಲ.

ಕೋವಿಡ್ 19ಗೆ ಸವಾಲ್‌ ಎಂಬ ರೀತಿಯಲ್ಲಿ ನಡೆಯಲ್ಪಡುವ ಈ ಟೆಸ್ಟ್‌ ಮುಖಾಮುಖಿ ಹಿಂದಿನ ಪಂದ್ಯಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ. ತೀವ್ರ ಮುನ್ನೆಚ್ಚರಿಕೆ ಹಾಗೂ ಆಟಗಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾದ ಈ ಪಂದ್ಯದ ವೇಳೆ ಕಂಡುಬರುವ ಪ್ರಮುಖ ಬದಲಾವಣೆಗಳು ಹೀಗಿವೆ..

ಚೆಂಡಿಗೆ ಎಂಜಲು ನಿಷೇಧ
ಕೋವಿಡ್ 19 ಭೀತಿಯಿಂದಾಗಿ ಚೆಂಡಿನ ಹೊಳಪನ್ನು ಕಾಯ್ದುಕೊಳ್ಳಲು ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಈ ನಿಯಮಾವಳಿಯಂತೆ ನಡೆಯುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಇದಾಗಿದೆ. ಆದರೆ ಅಭ್ಯಾಸಬಲದಿಂದ ಚೆಂಡಿಗೆ ಎಂಜಲು ಸವರುವ ಸಾಧ್ಯತೆ ಇದ್ದೇ ಇದೆ.

ಹೀಗಾಗಿ ಐಸಿಸಿ “ಹೊಂದಾಣಿಕೆ ಅವಧಿ’ಯನ್ನು ನಿಗದಿಪಡಿಸಿದೆ. ಇದರಂತೆ, ಪ್ರತೀ ತಂಡಕ್ಕೆ ಒಂದೊಂದು ಇನ್ನಿಂಗ್ಸ್‌ ವೇಳೆ ಅಂಪಾಯರ್‌ಗಳು ಎರಡು ಸಲ ಎಚ್ಚರಿಕೆ ನೀಡುತ್ತಾರೆ. ಆನಂತರ ಬ್ಯಾಟಿಂಗ್‌ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿ ರನ್‌ ನೀಡಲಾಗುತ್ತದೆ. ಎಂಜಲಿನ ಬದಲು ಚೆಂಡಿಗೆ ಬೆವರು ಹಚ್ಚಬಹುದಾಗಿದೆ.

ಆಟಗಾರರ ಬದಲಾವಣೆ
ಪಂದ್ಯಆರಂಭಕ್ಕೂ ಮುನ್ನ ದಿನಂಪ್ರತಿ ಆಟಗಾರರಿಗೆ ಕೋವಿಡ್‌ ಟೆಸ್ಟ್‌ ನಡೆಯುತ್ತದೆ. ಅಕಸ್ಮಾತ್‌ ಆಟದ ವೇಳೆ ಕ್ರಿಕೆಟಿಗನಿಗೆ ಕೋವಿಡ್ 19 ಲಕ್ಷಣ ಕಂಡುಬಂದಲ್ಲಿ ಬದಲಿ ಆಟಗಾರನನ್ನು ಆಡಿಸಬಹುದು.

ಹೆಚ್ಚುವರಿ ಡಿಆರ್‌ಎಸ್‌
ಸರಣಿಯ ವೇಳೆ ಅಷ್ಟೇನೂ ಅನುಭವವಿಲ್ಲದ ಅಂಪಾಯರ್‌ಗಳು ಕಾರ್ಯ ನಿಭಾಯಿಸುವುದರಿಂದ ಐಸಿಸಿ ಪ್ರತಿಯೊಂದು ಇನ್ನಿಂಗ್ಸಿಗೂ ಹೆಚ್ಚುವರಿ ಡಿಆರ್‌ಎಸ್‌ ರಿವ್ಯೂಗೆ ಅವಕಾಶ ನೀಡಿದೆ. ಹೀಗಾಗಿ ಬ್ಯಾಟಿಂಗ್‌, ಬೌಲಿಂಗ್‌ ಕಡೆಗಳಿಂದ ಎರಡರ ಬದಲು 3 ಡಿಆರ್‌ಎಸ್‌ ರಿವ್ಯೂ ಮಾಡಬಹುದಾಗಿದೆ.

ತಟಸ್ಥ ಅಂಪಾಯರ್‌ಗಳಿಲ್ಲ
ಕಳೆದ 19 ವರ್ಷಗಳಿಂದ ಜಾರಿಯಲ್ಲಿದ್ದ ತಟಸ್ಥ ಅಂಪಾಯರ್‌ ನಿಯಮವನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ. ಪ್ರಯಾಣ ನಿರ್ಬಂಧವೇ ಇದಕ್ಕೆ ಕಾರಣ. ಈ ಪಂದ್ಯದ ವೇಳೆ ಎಲ್ಲ ಅಂಪಾಯರ್‌ಗಳೂ ತವರು ದೇಶದವರೇ ಆಗಿರುತ್ತಾರೆ. ಈ ಸರಣಿಯ ಅಂಪಾಯರ್‌ಗಳೆಂದರೆ ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಿಚರ್ಡ್‌ ಕ್ಯಾಟಲ್‌ಬರೋ, ಮೈಕಲ್‌ ಗಾಫ್‌, ಅಲೆಕ್ಸ್‌ ವಾರ್ಫ್‌ ಮತ್ತು ಡೇವಿಡ್‌ ಮಿಲ್ಸ್.

ಟೆಸ್ಟ್‌ ಸರಣಿ ವೇಳಾಪಟ್ಟಿ

– ಮೊದಲ ಟೆಸ್ಟ್‌: ಸೌತಾಂಪ್ಟನ್‌- ಜು. 8-12

– ಎರಡನೇ ಟೆಸ್ಟ್‌: ಮ್ಯಾಂಚೆಸ್ಟರ್‌- ಜು. 16-20

– ಮೂರನೇ ಟೆಸ್ಟ್‌: ಮ್ಯಾಂಚೆಸ್ಟರ್‌  -ಜು.24-28

– ಆರಂಭ: ಅಪರಾಹ್ನ 3.30

– ಪ್ರಸಾರ: ಸೋನಿ ನ್ಪೋರ್ಟ್ಸ್

ಮುಖಾಮುಖಿ
ಒಟ್ಟು ಟೆಸ್ಟ್‌:
157

ಇಂಗ್ಲೆಂಡ್‌ ಜಯ: 49

ವಿಂಡೀಸ್‌ ಜಯ: 57

ಡ್ರಾ: 51

ಒಟ್ಟು ಸರಣಿ: 36

ಇಂಗ್ಲೆಂಡ್‌ ಜಯ: 21

ವಿಂಡೀಸ್‌ ಜಯ: 06

ಡ್ರಾ: 09

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.