‘ವಿಸ್ಡನ್‌’ಗೆ ವಿದಾಯ; ‘ರಿಚರ್ಡ್ಸ್‌-ಬೋಥಂ’ ನೂತನ ಟ್ರೋಫಿ

ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿ

Team Udayavani, Jul 25, 2020, 6:15 AM IST

Wisden-Trophy

'ವಿಸ್ಡನ್‌ ಟ್ರೋಫಿ' ಇನ್ನು ನೇಪಥ್ಯಕ್ಕೆ ಸರಿಯಲಿದೆ.

ಲಂಡನ್: ಇಂಗ್ಲೆಂಡ್‌-ವೆಸ್ಟ್‌ ಇಂಡೀಸ್‌ ನಡುವಿನ ಟೆಸ್ಟ್‌ ಸರಣಿ ವಿಜೇತರಿಗೆ ನೀಡಲಾಗುತ್ತಿದ್ದ ‘ವಿಸ್ಡನ್‌ ಟ್ರೋಫಿ’ ಇನ್ನು ನೇಪಥ್ಯಕ್ಕೆ ಸರಿಯಲಿದೆ.

ಈಗ ಸಾಗುತ್ತಿರುವ ಇತ್ತಂಡಗಳ ನಡುವಿನ ಸರಣಿ ವಿಜೇತರಿಗೆ ಕೊನೆಯದಾಗಿ ಈ ಟ್ರೋಫಿ ನೀಡಲಾಗುತ್ತದೆ.

ಮುಂಬರುವ ಸರಣಿಯಿಂದ ‘ರಿಚರ್ಡ್ಸ್‌-ಬೋಥಂ ಟ್ರೋಫಿ’ ಅಸ್ತಿತ್ವಕ್ಕೆ ಬರಲಿದೆ ಎಂದು ಇಸಿಬಿ ತಿಳಿಸಿದೆ.

70-80ನೇ ದಶಕದ ವಿಂಡೀಸ್‌ ಮತ್ತು ಇಂಗ್ಲೆಂಡಿನ ಮಹಾನ್‌ ಕ್ರಿಕೆಟಿಗರಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಮತ್ತು ಸರ್‌ ಇಯಾನ್‌ ಬೋಥಂ ಅವರಿಗೆ ಗೌರವ ಸಲ್ಲಿಸುವುದು ಇಸಿಬಿಯ ಉದ್ದೇಶವಾಗಿದೆ.

ಬ್ಯಾಟಿಂಗ್‌ ದೈತ್ಯನೆನಿಸಿದ ವಿವ್‌ ರಿಚರ್ಡ್ಸ್‌ ‘ಕೆರಿಬಿಯನ್‌ ಕ್ರಿಕೆಟಿಗರ ಬಿಗ್‌ ಹಿಟ್ಟಿಂಗ್‌ ಕುಟುಂಬ’ದ ಪ್ರಮುಖ ಸದಸ್ಯ. 121 ಟೆಸ್ಟ್‌ಗಳಿಂದ 8,540 ರನ್‌ ಹಾಗೂ 187 ಏಕದಿನ ಪಂದ್ಯಗಳಿಂದ 6,721 ರನ್‌ ಪೇರಿಸಿದ ಸಾಹಸಿ. ಒಟ್ಟು 35 ಶತಕಗಳನ್ನು ಸಿಡಿಸಿದ ಪರಾಕ್ರಮಿ. ರಿಚರ್ಡ್ಸ್‌ ಕ್ರೀಸಿಗಿಳಿದರೆಂದರೆ ಎದುರಾಳಿ ಬೌಲರ್‌ಗಳಲ್ಲಿ ಢವಢವ!

ಇಯಾನ್‌ ಬೋಥಂ ವಿಶ್ವ ಕ್ರಿಕೆಟಿನ ಅಮೋಘ ಸವ್ಯಸಾಚಿ. ಟೆಸ್ಟ್‌ನಲ್ಲಿ 5,200 ರನ್‌ ಮತ್ತು 383 ವಿಕೆಟ್‌ ಉರುಳಿಸಿದ ಹಿರಿಮೆ ಬೋಥಂ ಅವರದಾಗಿದೆ. ಏಕದಿನದಲ್ಲಿ 2,113 ರನ್‌ ಮತ್ತು 145 ವಿಕೆಟ್‌ ಸಂಪಾದಿಸಿದ್ದಾರೆ. ವಿಂಡೀಸ್‌ ವಿರುದ್ಧ 61 ಟೆಸ್ಟ್‌ ವಿಕೆಟ್‌ ಉರುಳಿಸಿದ್ದಾರೆ.

ನನ್ನ ಆತ್ಮೀಯ ಗೆಳೆಯ
ಇದು ತಮ್ಮಿಬ್ಬರ ಕ್ರಿಕೆಟ್‌ ಸಾಧನೆಗೆ ಸಂದ ಗೌರವ ಎಂಬುದಾಗಿ ರಿಚರ್ಡ್ಸ್‌ ಪ್ರತಿಕ್ರಿಯಿಸಿದ್ದಾರೆ. ‘ನಾನು ಮೊಟ್ಟ ಮೊದಲ ಸಲ ಸಾಮರ್‌ಸೆಟ್‌ ಕೌಂಟಿಯಲ್ಲಿ ಆಡಲು ಇಂಗ್ಲೆಂಡಿಗೆ ತೆರಳಿದಾಗ ಮೊದಲು ಭೇಟಿಯಾದವರಲ್ಲಿ ಬೋಥಂ ಮೊದಲಿಗರು. ಬಳಿಕ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು, ಜೀವದ ಗೆಳೆಯರೆನಿಸಿದೆವು. ಈಗ ಟ್ರೋಫಿ ರೂಪದಲ್ಲಿ ಈ ನಂಟು ಹೆಚ್ಚು ಗಟ್ಟಿಯಾಗಿದೆ’ ಎಂದು ರಿಚರ್ಡ್ಸ್‌ ಪ್ರತಿಕ್ರಿಯಿಸಿದ್ದಾರೆ.

1963ರಲ್ಲಿ ವಿಸ್ಡನ್‌ ವಾರ್ಷಿಕಾಂಕದ 100ನೇ ಆವೃತ್ತಿಯ ಸವಿನೆನಪಿಗಾಗಿ ಇತ್ತಂಡಗಳ ನಡುವಿನ ಸರಣಿ ವಿಜೇತರಿಗೆ ‘ವಿಸ್ಡನ್‌ ಟ್ರೋಫಿ’ ನೀಡಲು ನಿರ್ಧರಿಸಲಾಗಿತ್ತು. ಮೂಲ ಟ್ರೋಫಿ ಈಗ ಲಾರ್ಡ್ಸ್‌ನ ‘ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌’ನಲ್ಲಿದೆ.

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.