ಗಿರಿಧಾಮ ಡಾರ್ಜಿಲಿಂಗ್‌ನಲ್ಲಿ ಫಿಫಾ ಜ್ವರ !


Team Udayavani, Jun 5, 2018, 6:00 AM IST

c-32.jpg

ಡಾರ್ಜಿಲಿಂಗ್‌: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ನಡೆಯುವುದು ದೂರದ ಮಾಸ್ಕೋದಲ್ಲಾದರೆ, ಇತ್ತ ಭಾರತದ ಹಿಲ್‌ ಸ್ಟೇಶನ್‌ ಡಾರ್ಜಿಲಿಂಗ್‌ ಇದರ ಸಂಪೂರ್ಣ ಲಾಭವನ್ನೆತ್ತಿ ತನ್ನ ಪ್ರವಾಸೋದ್ಯಕ್ಕೆ ಹೊಸದೊಂದು ಆಯಾಮ ನೀಡುವ ಪ್ರಯತ್ನದಲ್ಲಿದೆ. ಹಿಮಾಚ್ಛಾದಿತ ನಗರವೀಗ “ಫ‌ುಟ್‌ಬಾಲ್‌ ಸಿಟಿ’ಯಾಗಿ ಪರಿವರ್ತನೆಯಾಗತೊಡಗಿದೆ!

ಡಾರ್ಜಿಲಿಂಗ್‌ ನಗರವನ್ನೀಗ ವಿಶ್ವಕಪ್‌ ಫ‌ುಟ್‌ಬಾಲ್‌ನಲ್ಲಿ ಪಾಲ್ಗೊಳ್ಳುವ 32 ದೇಶಗಳ ಧ್ವಜಗಳೊಂದಿಗೆ ಸಿಂಗರಿ ಸಲಾಗಿದೆ. ಇಲ್ಲಿನ ಸೇಂಟ್‌ ಜೋಸೆಫ್ ಮತ್ತು ನಾರ್ತ್‌ ಪಾಯಿಂಟ್‌ ಸ್ಕೂಲ್‌ನ ಹಳೆಯ ವಿದ್ಯಾರ್ಥಿಗಳು, ಸರ ಕಾರೇತರ ಸಂಘಟನೆಗಳು ಇಡೀ ನಗರವನ್ನು ಫ‌ುಟ್‌ಬಾಲ್‌ವುಯಗೊಳಿಸುವ ಕಾಯಕಕ್ಕೆ ಮುಂದಾಗಿವೆ. ಶನಿವಾರ ಬೃಹತ್‌ ಫ‌ುಟ್‌ಬಾಲ್‌ ರ್ಯಾಲಿಯೊಂದನ್ನು ಸಂಘಟಿಸುವ ಮೂಲಕ ಡಾರ್ಜಿಲಿಂಗ್‌ಗೆ ವಿಶ್ವಕಪ್‌ ಸಿಂಗಾರದ ಅಧಿಕೃತ ಮುದ್ರೆ ಬೀಳಲಿದೆ.

ಮುಂದಿನ ದಿನಗಳಲ್ಲಿ ಫ‌ುಟ್‌ಬಾಲ್‌ ಪರೇಡ್‌, ಚಿಯರ್‌ ಲೀಡಿಂಗ್‌ ಸ್ಪರ್ಧೆ, ಮೌಂಟೇನ್‌ ಬೈಕ್‌ ರ್ಯಾಲಿ, ಫೇಸ್‌ ಪೇಂಟಿಂಗ್‌, ನೈಲ್‌ ಆರ್ಟ್‌, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ… ಸಾಲು ಸಾಲಾಗಿ ನಡೆಯಲಿವೆ. ಈ ಗಿರಿಧಾಮದಲ್ಲಿ ಕ್ರಿಕೆಟ್‌ಗಿಂತ ಮಿಗಿಲಾದ ಫ‌ುಟ್‌ಬಾಲ್‌ ಕ್ರೇಜ್‌ ಇದೆ. ವಿಶ್ವಕಪ್‌ ಸಂದರ್ಭದಲ್ಲಿ ಇದನ್ನು ಎನ್‌ಕ್ಯಾಶ್‌ ಮಾಡಿಕೊಂಡು ಅತ್ಯಧಿಕ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವುದು ಈ ಎಲ್ಲ ಕಾರ್ಯಕ್ರಮಗಳ ಉದ್ದೇಶ.

ವೈದ್ಯಕೀಯ ಸವಲತ್ತಿಗೆ ನೆರವು
ಈ ಕಾರ್ಯಕ್ರಮದಲ್ಲಿ ಸಂಗ್ರಹಗೊಂಡ ಮೊತ್ತವನ್ನು “ಕ್ಲಿನಿಕ್‌ ಆನ್‌ ವೀಲ್ಸ್‌’ ಯೋಜನೆಯಡಿ ಗ್ರಾಮೀಣ ಪ್ರದೇಶದ ದುರ್ಗಮ ಸ್ಥಳಗಳಲ್ಲಿ ವಾಸಿಸುವ ಜನರ ವೈದ್ಯಕೀಯ ಸವಲತ್ತಿಗೆ ಬಳಸಲಾಗುವುದು ಕಳೆದ ವರ್ಷ 104 ದಿನಗಳ ಮುಷ್ಕರ ಕಂಡ ಬಳಿಕ ಡಾರ್ಜಿ ಲಿಂಗ್‌ನ ಪ್ರವಾಸೋದ್ಯಮಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಕೊರತೆಯನ್ನು ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿ ನೀಗಿಸಿದರೆ ಇದಕ್ಕಿಂತ ಹೆಮ್ಮೆಯ ಸಂಗತಿ ಬೇರೇನಿದೆ?!

ಪೆನಾಲ್ಟಿ  ಕಾರ್ನರ್‌
35 ಸಾವಿರ ಆಸನ ಕಡ್ಡಾಯ!

ವಿಶ್ವಕಪ್‌ ಫ‌ುಟ್‌ಬಾಲ್‌ ಸಂದರ್ಭದಲ್ಲಿ ಆತಿಥೇಯ ರಾಷ್ಟ್ರ ಫಿಫಾದ ಒಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಅದೆಂದರೆ, ವಿಶ್ವಕಪ್‌ ಪಂದ್ಯಗಳು ನಡೆಯುವ ಸ್ಟೇಡಿಯಂನಲ್ಲಿ 35 ಸಾವಿರ ಆಸನ ವ್ಯವಸ್ಥೆ ಇರಲೇಬೇಕು! ಇಲ್ಲವಾದರೆ? ಅಷ್ಟೊಂದು ಆಸನಗಳಿಗೆ ವ್ಯವಸ್ಥೆ ಮಾಡಬೇಕು. ಅಷ್ಟೊಂದು ಸಂಖ್ಯೆಯ ವೀಕ್ಷಕರು ಸ್ಟೇಡಿಯಂಗೆ ಆಗಮಿಸುತ್ತಾರೋ ಇಲ್ಲವೋ ಬೇರೆ ಪ್ರಶ್ನೆ. ಆದರೆ 35 ಸಾವಿರ ಆಸನ ಮಾತ್ರ ಕಡ್ಡಾಯ! 

ಈ ಬಾರಿಯ 12 ಸ್ಟೇಡಿಯಂಗಳಲ್ಲಿ ಒಂದು ಮಾತ್ರ ಇದಕ್ಕೆ ಅಪವಾದವಾಗಿತ್ತು. “ಎಕಟೆರಿನಬರ್ಗ್‌ ಅರೇನಾ’ದಲ್ಲಿ 27 ಸಾವಿರ ಆಸನ ವ್ಯವಸ್ಥೆಯಷ್ಟೇ ಇತ್ತು. ಇದನ್ನು ಹೆಚ್ಚಿಸಲಿಕ್ಕೂ ಅಲ್ಲಿ ಆಸ್ಪದವಿರಲಿಲ್ಲ. ಇದು 1953-57ರ ನಡುವಿನ ಅವಧಿಯಲ್ಲಿ ನಿರ್ಮಿಸಲಾದ ಪುರಾತನ ಸ್ಟೇಡಿಯಂ ಆಗಿತ್ತು. ಕೊನೆಗೆ ಸ್ಟೇಡಿಯಂನ ಹೊರಗಡೆ, ಎರಡೂ ಕಡೆಯ ಗೋಲುಪಟ್ಟಿಯ ಹಿಂದೆ ತಾತ್ಕಾಲಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಜಾಗದಲ್ಲಿ ಕುಳಿತು ಯಾರೂ ಪಂದ್ಯವನ್ನು ವೀಕ್ಷಿಸುವುದಿಲ್ಲ. ಆದರೇನಂತೆ, ಇಲ್ಲಿನ ಆಸನಗಳ ಸಂಖ್ಯೆ ಈಗ 45 ಸಾವಿರಕ್ಕೆ ಏರಿದೆ. ಈ ಸ್ಟೇಡಿಯಂನಲ್ಲಿ ಗ್ರೂಪ್‌ ಹಂತದ 4 ಪಂದ್ಯಗಳು ನಡೆಯಲಿದ್ದು, ಇದು ಮುಗಿದ ಕೂಡಲೇ ಈ ತಾತ್ಕಾಲಿಕ ಆಸನಗಳನ್ನು ತೆರವುಗೊಳಿಸಲಾಗುವುದು! 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.