ಕೋವಿಡ್ ಸಂತ್ರಸ್ತರಿಗೆ ಟಿಟಿ ಆಟಗಾರರಿಂದ ಆರ್ಥಿಕ ನೆರವು
Team Udayavani, Jun 28, 2020, 5:50 AM IST
ಹೊಸದಿಲ್ಲಿ: ಕೋವಿಡ್-19ದಿಂದ ಸಂಕಟಕ್ಕೆ ಸಿಲುಕಿದ ಟೇಬಲ್ ಟೆನಿಸ್ ಪರಿವಾರಕ್ಕೆ ಭಾರತದ ಮೂವರು ಟಿಟಿ ಆಟಗಾರರು ಆರ್ಥಿಕ ನೆರವಿಗೆ ಮುಂದಾಗಿದ್ದಾರೆ. ಇವರೆಂದರೆ ಶರತ್ ಕಮಲ್, ಜಿ. ಸಥಿಯನ್ ಮತ್ತು ನೇಹಾ ಅಗರ್ವಾಲ್.
ಈ ಮೂವರು ಸೇರಿಕೊಂಡು ನಾಲ್ಕೇ ದಿನಗಳಲ್ಲಿ 7 ಲಕ್ಷ ರೂ. ಒಟ್ಟುಗೂಡಿಸಿದ್ದಾರೆ. ಇದನ್ನು 10 ಲಕ್ಷ ರೂ.ಗೆವಿಸ್ತರಿಸಿ ಕನಿಷ್ಠ 100 ಮಂದಿಗೆ ನೆರವು ಒದಗಿಸುವುದು ಇವರ ಯೋಜನೆಯಾಗಿದೆ. ತೀವ್ರ ಸಂಕಟದಲ್ಲಿರುವ ಟಿಟಿ ಆಟಗಾರರಿಗೆ, ತರಬೇತುದಾರರಿಗೆ, ಅಂಪಾಯರ್ ಮೊದಲಾದವರಿಗೆಲ್ಲ ಈ ನೆರವು ಲಭಿಸಲಿದೆ.
“ಇಂಥದೊಂದು ಯೋಜನೆ ಹೊಳೆದದ್ದು ಸಥಿಯನ್ ಅವರಿಗೆ. ಕೋವಿಡ್ ದಿಂದಾಗಿ ಕೆಲಸವಿಲ್ಲದೆ ಕುಳಿತಿರುವ ಟಿಟಿ ತರಬೇತುದಾರರಿಗೆ ಹಾಗೂ ಇತರರಿಗೆ ಈ ಸಮಯದಲ್ಲಿ ಕನಿಷ್ಠ ಇಷ್ಟಾದರೂ ನೆರವು ನೀಡೋಣ ಎಂದು ತೀರ್ಮಾನಿಸಿದೆವು…’ ಎಂಬುದಾಗಿ ಶರತ್ ಕಮಲ್ ಹೇಳಿದರು.
ಈ ನೆರವು ಯಾರಿಗೆ ತಲುಪಬೇಕು ಎಂಬುದನ್ನು ಸೌಮ್ಯದೀಪ್ ರಾಯ್ ಮತ್ತು ಕಮಲೇಶ್ ಮೆಹ್ತಾ ಸೇರಿಕೊಂಡು ನಿರ್ಧರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ