ಮೊದಲ ಹರ್ಡಲ್ಸ್‌ ಯಶಸ್ವಿ: ಮಿಥಾಲಿ


Team Udayavani, Jul 17, 2017, 4:00 AM IST

india.jpg

ಡರ್ಬಿ: ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವುದು ನಮ್ಮ ಮೊದಲ ಗುರಿಯಾಗಿತ್ತು. ಇದರಲ್ಲಿ ಯಶಸ್ವಿ ಯಾಗಿದ್ದೇವೆ. ಮುಂದಿನ ಸವಾಲಿಗೆ ಸಿದ್ಧರಾಗಬೇಕಿದೆ… ಎಂಬುದಾಗಿ ಭಾರತ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಹೇಳಿದ್ದಾರೆ.

“ನಮ್ಮ ಮೊದಲ ಗುರಿ ಏನಿದ್ದರೂ ಸೆಮಿ ಫೈನಲ್‌ ತಲಪುವುದಾಗಿತ್ತು. ಈ ಯೋಜನೆ ಯಶಸ್ವಿಯಾಗಿದೆ. ನನಗಂತೂ ಭಾರೀ ಖುಷಿಯಾಗಿದೆ. ಕಾರಣ, ನಮ್ಮಲ್ಲಿ ಕೆಲವರಿಗೆ ಇದು ಕೊನೆಯ ವಿಶ್ವಕಪ್‌ ಆಗಿದೆ. ಇದನ್ನು ಸ್ಮರಣೀಯವಾಗಿ ಮುಗಿಸುವ ಬಯಕೆ ನಮ್ಮೆ ಲ್ಲರದು…’ ಎಂಬುದಾಗಿ ನ್ಯೂಜಿಲ್ಯಾಂಡನ್ನು 186 ರನ್ನುಗಳ ಬೃಹತ್‌ ಅಂತರ ದಿಂದ ಮಗುಚಿದ ಬಳಿಕ ಮಿಥಾಲಿ ಹೇಳಿದರು. ಭಾರತವಿನ್ನು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದು ರಿಸಲಿದೆ. ಲೀಗ್‌ ಹಂತದಲ್ಲಿ ಆಸೀಸ್‌ ಪಡೆ ಭಾರತವನ್ನು 8 ವಿಕೆಟ್‌ಗಳಿಂದ ಕೆಡವಿತ್ತು.

ಪಂದ್ಯಾವಳಿಯುದ್ದಕ್ಕೂ ಪ್ರಚಂಡ ಬ್ಯಾಟಿಂಗ್‌ ಫಾರ್ಮ್ ಪ್ರದರ್ಶಿಸಿದ ಮಿಥಾಲಿ ರಾಜ್‌ ಅನೇಕ ದಾಖಲೆ, ವಿಶ್ವದಾಖಲೆ ಗಳೊಂದಿಗೆ ಈ ವಿಶ್ವಕಪ್‌ ಕೂಟದ ಮೆರುಗು ಹೆಚ್ಚಿಸಿದ್ದನ್ನು ಮರೆಯುವಂತಿಲ್ಲ. ನ್ಯೂಜಿಲ್ಯಾಂಡ್‌ ವಿರುದ್ಧವೂ ಅಮೋಘ ಆಟವಾಡಿದ ಮಿಥಾಲಿ 109 ರನ್‌ ಬಾರಿಸಿ ಮೆರೆದರು. ನ್ಯೂಜಿಲ್ಯಾಂಡಿಗೆ ಭಾರತದ ಮೊತ್ತವಿರಲಿ, ಮಿಥಾಲಿ ಗಳಿಕೆಯನ್ನೂ ಸರಿ ದೂಗಿಸಲಾಗಲಿಲ್ಲ. ಅದು 79 ರನ್ನುಗಳಿಗೆ ಗಂಟುಮೂಟೆ ಕಟ್ಟಿತು!

“ತಂಡಕ್ಕಾಗಿ ಯಾವತ್ತೂ ಹೆಚ್ಚೆಚ್ಚು ರನ್‌
ಗಳಿಸಿಕೊಡಬೇಕೆಂಬುದೇ ನನ್ನ ಪ್ರಮುಖ ಉದ್ದೇಶ. ನನ್ನ ಈ ರನ್‌ ಹಸಿವಿಗೆ ಕೊನೆಎಂಬುದಿಲ್ಲ. ನಾವಿಲ್ಲಿ ಇನ್ನೂ 2 ಮೆಟ್ಟಿಲು ಮೇಲೇರಲಿಕ್ಕಿದೆ. ಆಸ್ಟ್ರೇಲಿಯ ಸವಾಲು ಸುಲಭ ದ್ದಲ್ಲ. ಆದರೆ ಇದನ್ನು ಮೀರಬಲ್ಲೆವೆಂಬ ವಿಶ್ವಾಸ ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯದ ಮೂಲಕ ಲಭಿಸಿದೆ…’ ಎಂದು ಮಿಥಾಲಿ ಹೇಳಿದರು.

“ನ್ಯೂಜಿಲ್ಯಾಂಡ್‌ ವಿರುದ್ಧ ಆಡುವಾಗ ಬಹಳ ಒತ್ತಡವಿತ್ತು. ಆದರೆ ಇದನ್ನು ತೋರಿಸಿ ಕೊಳ್ಳಲಿಲ್ಲ. ಹರ್ಮನ್‌ಪ್ರೀತ್‌, ವೇದಾ ಅಮೋಘ ಆಟವಾಡಿದರು. ಸರಿಯಾದ ಹೊತ್ತಿನಲ್ಲೇ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯ ತೆರೆದಿರಿಸಿದರು. ಮೊತ್ತ 250ರ ಗಡಿ ದಾಟಿದ ಬಳಿಕ ಅರ್ಧ ಪಂದ್ಯ ಗೆದ್ದಂತೆಯೆ ಎಂಬ ನಂಬಿಕೆ ನಮ್ಮದಾಗಿತ್ತು. ಇದನ್ನು ಬೌಲರ್‌ಗಳು ನಿಜಗೊಳಿಸಿದರು. ಆರಂಭದಲ್ಲೇ ವೇಗಕ್ಕೆ ಒಂದೆರಡು ವಿಕೆಟ್‌ ಉರುಳಿದರೆ ಉಳಿದುದನ್ನು ಸ್ಪಿನ್ನರ್‌ಗಳು ನೋಡಿ
ಕೊಳ್ಳುವ ಬಗ್ಗೆ ಸಂಪೂರ್ಣ ವಿಶ್ವಾಸವಿತ್ತು. ರಾಜೇಶ್ವರಿ ಇದನ್ನು ಸಾಕಾರಗೊಳಿಸಿದರು…’ ಎಂದು ಮಿಥಾಲಿ ಪ್ರಶಂಸಿಸಿದರು. ಇದೊಂದು “ನ್ಯೂ ಇಂಡಿಯಾ ಟೀಮ್‌’ ಎಂದೂ ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯ ಅತ್ಯುತ್ತಮ ತಂಡ
ಸೆಮಿಫೈನಲ್‌ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಮಿಥಾಲಿ ರಾಜ್‌, “ಆಸ್ಟ್ರೇಲಿಯ ಆತ್ಯುತ್ತಮ ಮಟ್ಟದ ತಂಡ. ಅಲ್ಲದೇ ಹಾಲಿ ಚಾಂಪಿಯನ್‌ ಕೂಡ ಹೌದು. ಆವರ ಬ್ಯಾಟಿಂಗ್‌ ಆಳ ಅಪಾರ. ಶ್ರೇಷ್ಠ ಬೌಲರ್‌ಗಳಿದ್ದಾರೆ. ಆದರೆ ನಿರ್ದಿಷ್ಟ ದಿನ ದಂದು ಪಂದ್ಯದ ಪರಿಸ್ಥಿತಿಗೆ ತಂಡ ಹೇಗೆ ಹೊಂದಿಕೊಳ್ಳಲಿದೆ ಎಂಬುದು ಮುಖ್ಯ. ಇದೇ ರೀತಿಯ ಆಟವಾಡಿದರೆ ನಾವು ಆಸ್ಟ್ರೇಲಿಯವನ್ನು ಮಣಿಸುವ ಸಾಧ್ಯತೆ ಹೆಚ್ಚಿದೆ…’ ಎಂದು ಮಿಥಾಲಿ ಹೇಳಿದರು.

ರಾಜ್‌-ರಾಜೇಶ್ವರಿ ಮೆರೆದಾಟ
ಕೊನೆಯ ಲೀಗ್‌ ಪಂದ್ಯದಲ್ಲಿ ರಾಜ್‌ (ಮಿಥಾಲಿ)-ರಾಜೇಶ್ವರಿ (ಗಾಯಕ್ವಾಡ್‌) ವೈಭವ ಭಾರತದ ಪಾಲಿನ ಹೆಮ್ಮೆಯ ಸಂಗತಿ ಯಾಗಿತ್ತು. ಮಿಥಾಲಿ ಸೆಂಚುರಿ ಬಾರಿಸಿದರೆ, ರಾಜೇಶ್ವರಿ 5 ವಿಕೆಟ್‌ ಉಡಾಯಿಸಿದರು! ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಸರದಿ ಯನ್ನು ಸೀಳಿದ 25ರ ಹರೆಯದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಕರ್ನಾಟಕದ
ಬಿಜಾಪುರದವರೆಂಬುದು ಹೆಮ್ಮೆಯ ಸಂಗತಿ.

ರಾಜೇಶ್ವರಿ ಸಾಧನೆ: 7.3-1-15-5. ಇದು ವಿಶ್ವಕಪ್‌ ಇತಿಹಾಸದಲ್ಲಿ ಭಾರತದ ಬೌಲರ್‌ ಒಬ್ಬರ ಸರ್ವಶ್ರೇಷ್ಠ ನಿದರ್ಶನವಾಗಿದೆ. ರಾಜೇಶ್ವರಿ ಅವರ ಜೀವನಶ್ರೇಷ್ಠ ಸಾಧನೆಯೂ ಹೌದು. ಅವರು ಏಕದಿನ ಪಂದ್ಯ ದಲ್ಲಿ 5 ವಿಕೆಟ್‌ ಉರುಳಿಸಿದ್ದು ಇದೇ ಮೊದಲು. 

ಇನ್ನೊಂದು ಸ್ವಾರಸ್ಯ ಗೊತ್ತೇ? ಪ್ರಸಕ್ತ ವಿಶ್ವಕಪ್‌ನಲ್ಲಿ ರಾಜೇಶ್ವರಿ ಗಾಯಕ್ವಾಡ್‌ ಆಡಿದ ಮೊದಲ ಪಂದ್ಯ ಇದಾಗಿದೆ. ಏಕ್ತಾ ಬಿಷ್ಟ್ ಸ್ಥಾನಕ್ಕೆ ಬಂದ ರಾಜೇಶ್ವರಿ, ಈ ಅವಕಾಶವನ್ನು ಅಮೋಘ ರೀತಿಯಲ್ಲೇ ಬಾಚಿಕೊಂಡರು.

“ಇಲ್ಲಿಯ ತನಕ ನನಗೆ ಅವಕಾಶ ಸಿಗಲಿಲ್ಲ ಎಂಬ ಬಗ್ಗೆ ನನಗೆ ಖಂಡಿತ ಬೇಸರವಿಲ್ಲ. ನಾನು ಅಧೀರಳೂ ಆಗಿಲ್ಲ. ನೀರು ಕೊಂಡೊ ಯ್ಯುವುದರಲ್ಲೂ ಒಂದು ರೀತಿಯ ಸಂತಸ ಇರುತ್ತಿತ್ತು. ಆದರೆ ಮುಖ್ಯವಾದದ್ದು ತಂಡದ ಗೆಲುವು. ಇದರಿಂದ ಸಂತಸವಾಗಿದೆ…’ ಎಂದು ರಾಜೇಶ್ವರಿ ಪ್ರತಿಕ್ರಿಯಿಸಿದರು.

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

1-weewqe

IPL; 89 ಕ್ಕೆ ಆಲೌಟಾದ ಟೈಟಾನ್ಸ್ ; ಡೆಲ್ಲಿಗೆ ಸುಲಭ ಜಯ

IPL ಗುಜರಾತ್‌ ಟೈಟಾನ್ಸ್‌ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಅನಿವಾರ್ಯ

IPL ಗುಜರಾತ್‌ ಟೈಟಾನ್ಸ್‌ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ಅನಿವಾರ್ಯ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.