ಅಂಡರ್‌-19 ವಿಶ್ವಕಪ್‌ ಐಸಿಸಿ ತಂಡದಲ್ಲಿ ಭಾರತದ ಐವರು


Team Udayavani, Feb 5, 2018, 6:25 AM IST

Five-Indians-in-ICC.jpg

ದುಬಾೖ: ಭಾರತದ 4ನೇ ಜಯಭೇರಿಯೊಂದಿಗೆ ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಮುಗಿದಿದೆ. ಸಂಪ್ರದಾಯದಂತೆ, ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರ ತಂಡವನ್ನು ಐಸಿಸಿ ಪ್ರಕಟಿಸಿದೆ. 

ಇದರಲ್ಲಿ ನಾಯಕ ಪೃಥ್ವಿ ಶಾ, ಶುಭಂ ಗಿಲ್‌ ಸೇರಿದಂತೆ ಭಾರತದ ಸರ್ವಾಧಿಕ 5 ಮಂದಿ ಆಟಗಾರರು ಸ್ಥಾನ ಸಂಪಾದಿಸಿದ್ದಾರೆ.

ಉಳಿದ ಮೂವರು ಭಾರತೀಯರೆಂದರೆ ಆರಂಭಕಾರ ಮನ್‌ಜೋತ್‌ ಕಾಲ್ರಾ , ಬೌಲರ್‌ಗಳಾದ ಅನುಕೂಲ್‌ ರಾಯ್‌ ಮತ್ತು ಕಮಲೇಶ್‌ ನಾಗರಕೋಟಿ. ರಾಯ್‌ ಈ ಕೂಟದಲ್ಲಿ ಸರ್ವಾಧಿಕ 14 ವಿಕೆಟ್‌ ಸಂಪಾದಿಸಿದ ಮೂವರು ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. 14 ವಿಕೆಟ್‌ ಕಿತ್ತ ಉಳಿದಿಬ್ಬರೆಂದರೆ ಕೆನಡಾದ ಫೈಸಲ್‌ ಜಮಖಂಡಿ ಮತ್ತು ಅಫ್ಘಾನಿಸ್ಥಾನದ ಕೈಸ್‌ ಅಹ್ಮದ್‌.

ವಾನ್‌ ಟಂಡರ್‌ ನಾಯಕ
ಅಚ್ಚರಿಯೆರಂದರೆ ವಿಶ್ವಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ ಅವರಿಗೆ ಈ ತಂಡದ ನಾಯಕತ್ವ ಲಭಿಸದಿರುವುದು. ಇದು ದಕ್ಷಿಣ ಆಫ್ರಿಕಾದ ರೆನಾರ್ಡ್‌ ವಾನ್‌ ಟಂಡರ್‌ ಪಾಲಾಗಿದೆ. ದಕ್ಷಿಣ ಆಫ್ರಿಕಾದರೇ ಆದ ವಾಂಡಿಲ್‌ ಮಕ್ವೆ ಟು ವಿಕೆಟ್‌ ಕೀಪರ್‌ ಆಗಿ ಆಯ್ಕೆಯಾಗಿದ್ದಾರೆ.

“ವಾನ್‌ ಟಂಡರ್‌ 6 ಪಂದ್ಯಗಳಿಂದ 348 ರನ್‌ ಬಾರಿಸಿದ್ದಾರೆ. ಕೀನ್ಯಾ ವಿರುದ್ಧ ಅವರು 143 ರನ್‌ ಹೊಡೆದಿದ್ದರು. ಹೀಗಾಗಿ ನಾಯಕರ ಆಯ್ಕೆಯ ವೇಳೆ ವಾನ್‌ ಟಂಡರ್‌ ಅವರನ್ನೇ ಪರಿಗಣಿಸಲಾಯಿತು’ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಟಾಪ್‌-3 ಯಾದಿಯಲ್ಲಿ ಭಾರತದ ಮೂವರೇ ಅಲಂಕರಿಸಿದ್ದಾರೆ. ಪೃಥ್ವಿ ಶಾ-ಮನ್‌ಜೋತ್‌ ಕಾಲ್ರಾ  ಆರಂಭಿಕರಾಗಿದ್ದು, ವನ್‌ಡೌನ್‌ನಲ್ಲಿ ಶುಭಮನ್‌ ಗಿಲ್‌ ಇದ್ದಾರೆ. ಕಾಲ್ರಾ  ಫೈನಲ್‌ನಲ್ಲಿ ಅಜೇಯ 101 ರನ್‌ ಬಾರಿಸಿ ಭಾರತದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಗಿಲ್‌ ಕ್ರಮವಾಗಿ 63, ಅಜೇಯ 90, 86, ಅಜೇಯ 102 ಹಾಗೂ 31 ರನ್‌ ಸಹಿತ ಒಟ್ಟು 372 ರನ್‌ ಪೇರಿಸಿದ್ದರು. ಈ ಸರಣಿಯ ಸರ್ವಾಧಿಕ ರನ್‌ ಸಾಧಕರ ಯಾದಿಯಲ್ಲಿ ಗಿಲ್‌ ಅವರಿಗೆ ದ್ವಿತೀಯ ಸ್ಥಾನ. ವೆಸ್ಟ್‌ ಇಂಡೀಸಿನ ಅಲಿಕ್‌ ಅತನೇಜ್‌ 418 ರನ್ನುಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಆದರೆ ಅತನೇಜ್‌ ಅವರಿಗೆ ಐಸಿಸಿ ತಂಡದ ಯಾದಿಯಲ್ಲಿ ಲಭಿಸಿರುವುದು 12ನೇ ಆಟಗಾರನ ಸ್ಥಾನ.

ಐಸಿಸಿ ಅಂಡರ್‌-19 ಸಾಧಕರ ತಂಡ
1. ಪೃಥ್ವಿ ಶಾ (ಭಾರತ, 261 ರನ್‌)
2. ಮನ್‌ಜೋತ್‌ ಕಾಲ್ರಾ  (ಭಾರತ, 252 ರನ್‌)
3. ಶುಭಮನ್‌ ಗಿಲ್‌ (ಭಾರತ, 372 ರನ್‌)
4. ಫಿಲ್‌ ಅಲೆನ್‌ (ನ್ಯೂಜಿಲ್ಯಾಂಡ್‌, 338 ರನ್‌)
5. ರೆನಾರ್ಡ್‌ ವಾನ್‌ ಟಂಡರ್‌ (ದಕ್ಷಿಣ ಆಫ್ರಿಕಾ, ನಾಯಕ, 348 ರನ್‌)
6. ವಾಂಡಿಲ್‌ ಮಕೆಟುÌ (ವಿ.ಕೀ., 184 ರನ್‌, 11 ಕ್ಯಾಚ್‌)
7. ಅನುಕೂಲ್‌ ರಾಯ್‌ (ಭಾರತ, 14 ವಿಕೆಟ್‌)
8. ಕಮಲೇಶ್‌ ನಾಗರಕೋಟಿ (ಭಾರತ, 9 ವಿಕೆಟ್‌)
9. ಗೆರಾಲ್ಡ್‌ ಕೋಝಿ (ದಕ್ಷಿಣ ಆಫ್ರಿಕಾ, 8 ವಿಕೆಟ್‌)
10. ಕೈಸ್‌ ಅಹ್ಮದ್‌ (ಅಫ್ಘಾನಿಸ್ಥಾನ, 14 ವಿಕೆಟ್‌)
11. ಶಾಹೀನ್‌ ಅಫ್ರಿದಿ (ಪಾಕಿಸ್ಥಾನ, 12 ವಿಕೆಟ್‌)
12. ಅಲಿಕ್‌ ಅತನೇಜ್‌ (ವೆಸ್ಟ್‌ ಇಂಡೀಸ್‌, 418 ರನ್‌)

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.