ಯು ಮುಂಬಾ ತಂಡದಿಂದ ಫ‌ುಟ್‌ಬಾಲ್‌ ಪ್ರತಿಭಾಶೋಧ


Team Udayavani, Sep 26, 2017, 9:19 AM IST

26-STATE-17.jpg

ನವದೆಹಲಿ: ಪ್ರೊ ಕಬಡ್ಡಿಗಾಗಿ ಹುಟ್ಟಿಕೊಂಡ ತಂಡವೊಂದು ಕಬಡ್ಡಿ ಜತೆಗೆ ಈಗ ದೇಶದ ಫ‌ುಟ್‌ಬಾಲ್‌ ಏಳಿಗೆಗಾಗಿಯೂ ಶ್ರಮಿಸುತ್ತಿದೆ. ದೇಶದ ಪ್ರತಿಭಾನ್ವಿತ ಯುವ ಕ್ರೀಡಾಪಟುಗಳನ್ನು ಒಂದೆಡೆ ಕಲೆ ಹಾಕಿ, ಅವರಲ್ಲಿರುವ ಕಲಿಕಾ ಆಸಕ್ತಿ, ಪ್ರತಿಭೆ ಗುರುತಿಸಿ ಜರ್ಮನಿಯಲ್ಲಿ ಸದ್ದಿಲ್ಲದೆ ಉಚಿತ ತರಬೇತಿಯನ್ನೂ ನೀಡುತ್ತಿದೆ. ಹೌದು, ಕಳೆದ 2 ವರ್ಷದಿಂದ ಇಂತಹದೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರೊ ಕಬಡ್ಡಿಯ ಪ್ರಮುಖ ತಂಡವಾಗಿರುವ ಯು ಮುಂಬಾ ತಂಡ ಕಾರ್ಯಗತಗೊಳಿಸಿದೆ. ಫ‌ುಟ್‌ಬಾಲ್‌
ಜೊತೆಗೆ ವಿದೇಶದಲ್ಲಿ ಉಚಿತ ಶಿಕ್ಷಣ ನೀಡುತ್ತಾ, ಜರ್ಮನಿಯ ಬಿಟ್‌ಬರ್ಗ್‌ನಲ್ಲಿ ಮಕ್ಕಳಿಗೆ ಭವಿಷ್ಯ ಕಟ್ಟಿಕೊಳ್ಳುವ ಸುವರ್ಣಾವಕಾಶವನ್ನು ಯು ಮುಂಬಾ ನೀಡಿದೆ.  ಇದರೊಂದಿಗೆ ಇತರೆ ಫ್ರಾಂಚೈಸಿಗಳಿಗೆ ಮಾದರಿಯಾಗಿದೆ.

ಕನಸುಗಳ ಸಾಕಾರಕ್ಕಾಗಿ ಯು ಡ್ರೀಮ್‌: ಯು ಮುಂಬಾ ಫ್ರಾಂಚೈಸಿ ರೋನಿ ಸ್ಕಿವ್‌ವಾಲಾ ಯು ಡ್ರೀಮ್‌ ಸಂಸ್ಥೆ ಹುಟ್ಟು ಹಾಕಿದ್ದು ವೃತ್ತಿಪರ ಫ‌ುಟ್‌ಬಾಲ್‌ ಆಟಗಾರರನ್ನು ಹೊರ ತರುವ ಭಾರೀ ಸಂಕಲ್ಪ ಮಾಡಿದ್ದಾರೆ, ಇದಕ್ಕೆ ಟಾಟಾ ಟ್ರಸ್ಟ್‌ ಸಂಸ್ಥೆ ಸಾಥ್‌ ನೀಡುತ್ತಿದೆ.

ವಿದೇಶಿ ಕ್ಲಬ್‌ಗಳ ಜತೆಗೆ ಕಲಿಕೆಗೆ ಅವಕಾಶ: ಬಿವಿಬಿ
ಡಾರ್ಟ್‌ಮಂಡ್‌ ಜರ್ಮನಿಯ ಖ್ಯಾತ ಫ‌ುಟ್‌ಬಾಲ್‌ ಕ್ಲಬ್‌ ತಂಡ. ಇಲ್ಲಿನ ಆಟಗಾರರೊಂದಿಗೆ ಕಲಿಯುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ ನಮ್ಮ ದೇಶದ ಪ್ರತಿಭಾನ್ವಿತರಿಗೆ ಇಂತಹದೊಂದು ಅವಕಾಶವನ್ನು ಯು ಡ್ರೀಮ್ಸ್‌ ಮಾಡಿಕೊಟ್ಟಿದೆ.

2015ರಲ್ಲಿ 45 ನಗರದಲ್ಲಿ ಪ್ರತಿಭಾನ್ವೇಷಣೆ: 15 ವರ್ಷ ವಯೋಮಿತಿಯೊಳಗಿನ ಭಾರತ ಫ‌ುಟ್‌ಬಾಲ್‌ ಪ್ರತಿಭೆಗಳನ್ನು ಯು ಡ್ರೀಮ್‌ ಮೊದಲ ಬಾರಿಗೆ ಹುಡುಕಲು ಆರಂಭಿಸಿದ್ದು 2015ರಲ್ಲಿ. ಮೊದಲ ಪ್ರಯತ್ನವಾಗಿ ದೇಶದ 46 ನಗರದ ಶಾಲೆಗಳಲ್ಲಿ ಫ‌ುಟ್ಬಾಲಿಗರನ್ನು ಅನ್ವೇಷಿಸಲಾಯಿತು. ಜರ್ಮನಿಯ ಖ್ಯಾತ ಕ್ಲಬ್‌ ತಂಡದ ಕೋಚ್‌ಗಳು ಹುಡುಕಾಟದಲ್ಲಿ ಪಾಲ್ಗೊಂಡರು. ಮೊದಲ ಸಲ 20ಕ್ಕೂ ಹೆಚ್ಚು ಯುವ ಆಟಗಾರರನ್ನು ಆಯ್ಕೆ ಮಾಡಲಾಯಿತು. ಇವರೆಲ್ಲರೂ ದೇಶದ ಸಿಬಿಎಸ್‌ಸಿ ಪಠ್ಯಕ್ರಮದ ವಿದ್ಯಾರ್ಥಿಗಳಾಗಿದ್ದಾರೆ.

ಇತರೆ ವಿದೇಶಿ ತಂಡಗಳ ಜತೆಗೂ ಅಭ್ಯಾಸ:
ಜರ್ಮನಿಯಲ್ಲಿರುವ ಭಾರತೀಯ ಆಟಗಾರರಿಗೆ ಲಕ್ಸೆಂಬರ್ಗ್‌, ಬೆಲ್ಜಿಯಂ, ಫ್ರಾನ್ಸ್‌, ಹಾಲೆಂಡ್‌ ಹಾಗೂ ಯುಕೆ ಕ್ಲಬ್‌ ತಂಡಗಳ ಜತೆಗೆ ಆಡುವ ಅವಕಾಶ ಸಿಗುತ್ತಿದೆ. ಜತೆಗೆ ಅಲ್ಲಿನ ಒಲಿಂಪಿಕ್ಸ್‌ ಕೋಚ್‌ಗಳಿಂದಲೂ ಸಲಹೆಗಳು ದೊರೆಯುತ್ತಿವೆ. 2016ರಲ್ಲಿ 
40ಕ್ಕೂ ಹೆಚ್ಚಿನ ಮಕ್ಕಳನ್ನು ಯೋಜನೆ ಮೂಲಕ ಯು ಡ್ರೀಮ್‌ ಜರ್ಮನಿಗೆ ಕಳುಹಿಸಿಕೊಟ್ಟಿದೆ. 

ದೇಶದಲ್ಲಿ ಫ‌ುಟ್‌ಬಾಲ್‌ ಕೇಂದ್ರ ಸ್ಥಾಪಿಸುವ ಕನಸು:
ಯು ಡ್ರೀಮ್‌ಗೆ ಸದ್ಯ ದೇಶದಲ್ಲಿ ಮಿಜೋರಾಮ್‌, ಹರ್ಯಾಣ, ಮಣಿಪುರದಲ್ಲಿ ಯು ಡ್ರೀಮ್‌ ಫ‌ುಟ್‌ಬಾಲ್‌ ಅಕಾಡೆಮಿ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆ 2017-18ರಲ್ಲಿ 7 ಕೇಂದ್ರವನ್ನು ಸ್ಥಾಪಿಸುವ ಗುರಿ ನೀಡಲಾಗಿದೆ. ಇದು 3 ವರ್ಷದ 
ಯೋಜನೆಯಾಗಿದೆ. ಒಟ್ಟು 600 ಕ್ರೀಡಾಪಟುಗಳು ಡ್ರೀಮ್‌ ಸೌಲಭ್ಯ ಪಡೆಯಲಿದ್ದಾರೆ. ಸುಮಾರು 70-100 ಮಂದಿ ಕೋಚ್‌ಗಳು ಇಲ್ಲಿ ತರಬೇತಿ ನೀಡಲಿದ್ದಾರೆ. ಯುವ ಆಟಗಾರರನ್ನು ಒಂದು ಹಂತದಲ್ಲಿ ತಯಾರಿ ಮಾಡಿ ಹೆಚ್ಚಿನ ಕೋಚಿಂಗ್‌ಗಾಗಿ ಇಲ್ಲಿಂದ ಜರ್ಮನಿಗೆ ಕಳುಹಿಸಲಾಗುತ್ತದೆ.

ಕಬಡ್ಡಿ ಮಾತ್ರವಲ್ಲ ಫ‌ುಟ್‌ಬಾಲ್‌ನತ್ತಲೂ ಯು ಮುಂಬಾ ಗಮನ ಹರಿಸುತ್ತಿರುವುದು ಕ್ರೀಡೆಯ ಹಿತ ದೃಷ್ಟಿಯಿಂದ ಒಳ್ಳೆಯದು.
ಯು ಮುಂಬಾ ತಂಡದ ಫ್ರಾಂಚೈಸಿ ಇಂತಹದೊಂದು ಕೆಲಸ ಮಾಡುತ್ತಿರುವುದು ಶ್ಲಾಘನೀಯ.

ರವಿ ಶೆಟ್ಟಿ, ಯು ಮುಂಬಾ ಕೋಚ್‌ 

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.