ತನ್ನದೇ ಕಂಚಿನ ಪ್ರತಿಮೆ ಉದ್ಘಾಟಿಸಿದ ಗಂಗೂಲಿ
Team Udayavani, Jul 16, 2017, 3:50 AM IST
ಕೋಲ್ಕತಾ: ತನ್ನದೇ ಕಂಚಿನ ಪ್ರತಿಮೆಯೊಂದನ್ನು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಶನಿವಾರ ಅನಾವರಣಗೊಳಿಸಿದರು. ಪಶ್ಚಿಮ ಬಂಗಾಲದ ಬಾಲೂರ್ಘಾಟ್ನ “ಬಿಕಾಸ್ ಮೈದಾನ್’ದಲ್ಲಿ ಈ ಸಮಾ ರಂಭ ನೆರವೇರಿತು.
ಇದು 8 ಅಡಿಯ ಕಂಚಿನ ಪ್ರತಿಮೆಯಾಗಿದ್ದು, ಗಂಗೂಲಿ ಶತಕ ಬಾರಿ ಸಿದ ಬಳಿಕ ಬ್ಯಾಟ್ ಮೇಲೆ ಎತ್ತಿ ಸಂಭ್ರಮಿಸಿದ ಮಾದರಿಯಲ್ಲಿದೆ. 7 ಲಕ್ಷ ರೂ. ಮೌಲ್ಯದ ಈ ಪ್ರತಿಮೆಯನ್ನು ನಿರ್ಮಿಸಿದವರು ಸಿಲಿ ಗುರಿಯ ಶಿಲ್ಪಿ ಸುಸಾಂತ್ ಪಾಲ್.
ಈ ಸಮಾರಂಭಕ್ಕಾಗಿ ಗಂಗೂಲಿ ರೈಲಿನಲ್ಲಿ ಆಗಮಿಸಿದ್ದರು. ಸ್ವಲ್ಪ ಹೊತ್ತು ಗೆಸ್ಟ್ಹೌಸ್ನಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ನೇರವಾಗಿ ಸಮಾರಂಭ ಸ್ಥಳಕ್ಕೆ ಬಂದರು.
ಇದು ಪಶ್ಚಿಮ ಬಂಗಾಲದಲ್ಲಿ ನಿರ್ಮಾಣಗೊಂಡ ಗಂಗೂಲಿ ಅವರ 2ನೇ ಪ್ರತಿಮೆ. ಮೊದಲನೆಯದು ಕೋಲ್ಕತಾದಲ್ಲಿದೆ.
ಗಂಗೂಲಿ ಸೀಟಿಗೆ ಲಗ್ಗೆ !
ಈ ಸಮಾರಂಭಕ್ಕೆ ಆಗಮಿಸಲು ಗಂಗೂಲಿ ಸೀಲ್ದಾಹ್ ನಿಲ್ದಾಣದಿಂದ “ಪದಾತಿಕ್ ಎಕ್ಸ್ಪ್ರೆಸ್’ ರೈಲನ್ನೇರಿ ದ್ದರು. 15 ವರ್ಷಗಳ ಬಳಿಕ ರೈಲು ಪ್ರಯಾಣದ ಸಂಭ್ರಮದಲ್ಲಿದ್ದರು ದಾದಾ. ತಮಗಾಗಿ ಕಾದಿರಿಸಲಾಗಿದ್ದ ಎಸಿ ಫಸ್ಟ್ಕ್ಲಾಸ್ ಕಂಪಾರ್ಟ್ ಮೆಂಟ್ಗೆ ಆಗಮಿಸಿದಾಗ ಅಚ್ಚರಿ ಯೊಂದು ಕಾದಿತ್ತು. ಅವರ ಜಾಗ ವನ್ನು ಮತ್ತೂಬ್ಬ ಪ್ರಯಾಣಿಕ ಆಕ್ರ ಮಿಸಿಕೊಂಡಿದ್ದ. ಜಾಗ ಬಿಡುವಂತೆ ವಿನಂತಿಸಿಕೊಂಡರೂ ಆತ ಕೇಳಲಿಲ್ಲ. ಗಂಗೂಲಿ ಜತೆ ಜಗಳಕ್ಕೇ ಇಳಿದ. ಅನ್ಯ ಮಾರ್ಗವಿಲ್ಲದೆ ಗಂಗೂಲಿ ರೈಲಿನಿಂದ ಕೆಳಗಿಳಿದರು.
ಗಂಗೂಲಿಯನ್ನು ಕಂಡೊಡನೆ ಪ್ರಯಾಣಿಕರೆಲ್ಲ ಮುತ್ತಿಕೊಂಡರು. ಇವರಿಂದ ಗಂಗೂಲಿಯನ್ನು ಪಾರು ಮಾಡಲು ಆರ್ಪಿಎಫ್ನವ ರೇನೋ ಯಶಸ್ವಿಯಾದರು, ಆದರೆ ಗಂಗೂಲಿ ಸೀಟಿನ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಕೊನೆಗೆ ಎಸಿ 2-ಟೈರ್ನಲ್ಲಿ ದಾದಾಗೆ ಸೀಟೊಂ ದನ್ನು ವ್ಯವಸ್ಥೆಗೊಳಿಸಲಾಯಿತು. ಹೀಗೆ ಸಾಗಿತ್ತು ಸೌರವ್ ಗಂಗೂಲಿ ರೈಲು ಪ್ರಯಾಣ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು