ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ
Team Udayavani, May 6, 2021, 3:47 PM IST
ಮುಂಬೈ: ಕೋವಿಡ್ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ಅಮಾನತಾಗಿದೆ. ಮುಂದೆ ನಡೆಯೂವುದು ಅನಮಾನ ಎನ್ನಲಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೇ ಮೊದಲ ಬಾರಿಗೆ ಈ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.
ಐಪಿಎಲ್ ಆಟಗಾರರ ಕಠಿಣ ಬಯೋ ಬಬಲ್ ನ ಒಳಗೆ ಇದ್ದರೂ ಕೋವಿಡ್ ವೈರಸ್ ಹೇಗೆ ಹೊಕ್ಕಿತೆನ್ನುವುದನ್ನು ಹೇಳುವುದೇ ಕಷ್ಟ. ನಮಗೆ ಬಂದಿರುವ ಪ್ರಾಥಮಿಕ ವರದಿಯ ಪ್ರಕಾರ ಬಬಲ್ ಉಲ್ಲಂಘನೆ ಮಾಡಿರುವು ಯವುದೇ ಪ್ರಸಂಗ ನಡೆದಿಲ್ಲ ಎಂದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ವೃದ್ಧಮಾನ್ ಸಾಹ ಅವರಿಗೆ ಕೋವಿಡ್ ಪಾಸಿಟಿವ್ ದೃಢವಾದ ಕೆಲವೇ ಗಂಟೆಗಳ ಬಳಿಕ ಕೂಟವನ್ನು ಅಮಾನತು ಮಾಡುವ ನಿರ್ಧಾರ ಪ್ರಕಟಿಸಲಾಗಿದೆ.
ಇದಕ್ಕೂ ಮೊದಲು ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸಿಎಸ್ ಕೆ ಕೋಚ್ ಬಾಲಾಜಿ ಗೆ ಕೋವಿಡ್ ಪಾಸಿಟಿವ್ ಆಗಿತ್ತು.
ಮುಂದೆ ಐಪಿಎಲ್ ಮುಂದುವರಿಸುವ ಬಗ್ಗೆ ಮಾತನಾಡಿದ ಗಂಗೂಲಿ, ಇದರ ಬಗ್ಗೆ ಮುಂದೆ ಯೋಚನೆ ಮಾಡುತ್ತೇವೆ, ಈಗಲೇ ಹೇಳುವುದು ಕಷ್ಟ ಎಂದರು.