ಪ್ರಣಯ್ಗೆ ಪ್ರಶಸ್ತಿ: ಪಿ. ಗೋಪಿಚಂದ್ ಶಿಫಾರಸು
Team Udayavani, Jun 22, 2020, 6:15 AM IST
ಹೊಸದಿಲ್ಲಿ: ಶಟ್ಲರ್ ಎಚ್.ಎಸ್. ಪ್ರಣಯ್ ಅವರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸುವಂತೆ ಪ್ರಧಾನ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್ ಶಿಫಾರಸು ಮಾಡಿದ್ದಾರೆ. ಪ್ರಣಯ್ ಅವರನ್ನು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ಸತತ ಎರಡನೇ ವರ್ಷವೂ ಕಡೆಗಣಿಸಿದ ಬಳಿಕ ಗೋಪಿಚಂದ್ ಈ ಹೆಜ್ಜೆ ಇರಿಸಿದ್ದಾರೆ.
ಜೂನ್ ಎರಡರಂದು ಬಿಎಐ ಮೂವರು ಬ್ಯಾಡ್ಮಿಂಟನ್ ಆಟ ಗಾರರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಆದರೆ ಎಚ್.ಎಸ್. ಪ್ರಣಯ್ ಅವರನ್ನು ಕಡೆಗಣಿಸಿತ್ತು. ಇದರ ವಿರುದ್ಧ ಪ್ರಣಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಮರುದಿನವೇ ಗೋಪಿಚಂದ್ ಸ್ವಂತ ಸಾಮರ್ಥ್ಯದ ಬಲದಿಂದ ಅರ್ಜುನ ಪ್ರಶಸ್ತಿಗೆ ಪ್ರಣಯ್ ಹೆಸರನ್ನು ಶಿಫಾರಸು ಮಾಡಿದ್ದರು ಎನ್ನಲಾಗಿದೆ.
ಪ್ರತಿಕ್ರಿಯೆ ಇಲ್ಲ
“ಪಿ. ಗೋಪಿಚಂದ್ ಅವರು ಪ್ರಣಯ್ ಹೆಸರನ್ನು ಶಿಫಾರಸು ಮಾಡಿರುವುದು ನಿಜ. ಆದರೆ ಅವರು ಖೇಲ್ರತ್ನ ಗೆದ್ದ ಸಾಧಕನಾಗಿ ಈ ಶಿಫಾರಸು ಮಾಡಿದ್ದಾರೆಯೇ ಹೊರತು ಭಾರತದ ಪ್ರಧಾನ ಬ್ಯಾಡ್ಮಿಂಟನ್ ಕೋಚ್ ಆಗಿ ಅಲ್ಲ’ ಎಂಬುದಾಗಿ ಬಿಎಐ ಮೂಲವೊಂದು ಪಿಟಿಐಗೆ ತಿಳಿಸಿದೆ. ಇದಕ್ಕೆ ಪ್ರತಿ ಕ್ರಿಯಿಸಲು ಪಿ. ಗೋಪಿಚಂದ್ ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ