ಇಂದಿನಿಂದ ಗ್ರೇಟರ್‌ ನೋಯ್ಡಾ ಹಣಾಹಣಿ

ಪ್ಲೇ-ಆಫ್ ತಲುಪಲು ಯುಪಿ ಯೋಧಾಗೆ ಒಂದೇ ಮೆಟ್ಟಿಲು

Team Udayavani, Oct 5, 2019, 4:31 AM IST

z-7

ಗ್ರೇಟರ್‌ ನೋಯ್ಡಾ (ಯುಪಿ): ಪ್ರೊ ಕಬಡ್ಡಿ 7ನೇ ಆವೃತಿಯ ಕೊನೆಯ ಲೀಗ್‌ ಚರಣಕ್ಕೆ ಗ್ರೇಟರ್‌ ನೋಯ್ಡಾ ಸಜ್ಜಾಗಿದೆ. ಶನಿವಾರದಿಂದ ಇಲ್ಲಿ ಕಬಡ್ಡಿ ಹಣಾಹಣಿ ತೀವ್ರಗೊಳ್ಳಲಿದೆ. ಇದು ಪ್ಲೇ-ಆಫ್ ಹೊಸ್ತಿಲಲ್ಲಿ ನಿಂತಿರುವ ಯುಪಿ ಯೋಧಾಗೆ ತವರು ಮುಖಾಮುಖೀ ಆಗಿರುವುದು ವಿಶೇಷ. ಇಲ್ಲಿ ಯುಪಿ 4 ಪಂದ್ಯಗಳನ್ನು ಆಡಲಿದ್ದು, ಒಂದರಲ್ಲಿ ಗೆದ್ದರೂ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ. ಮೊದಲ ಪಂದ್ಯದಲ್ಲಿ ಯುಪಿ ಎದುರಾಳಿ ಅಂಕಪಟ್ಟಿಯ ಅಗ್ರಸ್ಥಾನಿ ದಬಾಂಗ್‌ ಡೆಲ್ಲಿ.

ಈಗಾಗಲೇ ಡೆಲ್ಲಿ, ಬೆಂಗಾಲ್‌, ಹರ್ಯಾಣ, ಬೆಂಗಳೂರು, ಮುಂಬಾ ತಂಡಗಳು ಪ್ಲೇ-ಆಫ್ ಸುತ್ತಿಗೆ ಏರಿವೆ. ಉಳಿದ ಒಂದು ಸ್ಥಾನಕ್ಕೆ ಜೈಪುರ ಮತ್ತು ಯೋಧಾ ತಂಡಗಳ ನಡುವೆ ಪೈಪೋಟಿ ಇದ್ದಂತೆ ಕಂಡುಬರುತ್ತದೆ. ಆದರೆ ಯೋಧಾ ತವರಿನಲ್ಲಿಯೇ ಆಡುವುದರಿಂದ ಗರಿಷ್ಠ ಅವಕಾಶ ಹೊಂದಿದೆ. ಜೈಪುರ ಮುಂದಿರುವುದು 2 ಪಂದ್ಯ ಮಾತ್ರ. ಇತ್ತಂಡಗಳ ನಡುವೆ 6 ಅಂಕಗಳ ಅಂತರವಿದೆ. ಜೈಪುರ ಒಂದು ಪಂದ್ಯದಲ್ಲಿ ಸೋತರೂ ಕೂಟದಿಂದ ಹೊರಬೀಳಲಿದೆ.

ಡೆಲ್ಲಿ ದಬಾಂಗ್‌ ಬಲಿಷ್ಠ
ಡೆಲ್ಲಿ ತಂಡ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದೆ. ಆಡಿದ 20 ಪಂದ್ಯಗಳಲ್ಲಿ ಕೇವಲ ಮೂರನ್ನಷ್ಟೆ ಸೋತಿದೆ. ಕ್ವಿಕ್‌ ರೈಡಿಂಗ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದ ನವೀನ್‌ ಕುಮಾರ್‌ ಡೆಲ್ಲಿ ತಂಡದ ಶಕ್ತಿ ಆಗಿದ್ದಾರೆ. ನವೀನ್‌ಗೆ ಬೆಂಬಲವಾಗಿ ಚಂದ್ರನ್‌ ರಂಜೀತ್‌ ಕೂಡ ರೈಡಿಂಗ್‌ನಲ್ಲಿ ಸಾಥ್‌ ನೀಡುತ್ತಿದ್ದಾರೆ. ಹೀಗಾಗಿ ಡೆಲ್ಲಿ ರೈಡಿಂಗ್‌ ವಿಭಾಗ ಹೆಚ್ಚು ಬಲಿಷ್ಠ. ರಕ್ಷಣಾ ವಿಭಾಗದಲ್ಲಿ ಅನುಭವಿ ಆಟಗಾರರಾದ ಜೋಗಿಂದರ್‌ ಸಿಂಗ್‌, ವಿಶಾಲ್‌ ಮಾನೆ, ರವೀಂದ್ರ ಪೆಹಲ್‌ ಎದುರಾಳಿಗನ್ನು ಕಟ್ಟಿಹಾಕುವಲ್ಲಿ ಸಮರ್ಥರಾಗಿದ್ದಾರೆ.

ಯುಪಿ ಯೋಧಾಗೆ ತವರಿನ ಲಾಭ
ಯುಪಿ ಯೋಧಾದಲ್ಲಿ ಸ್ಟಾರ್‌ ಆಟಗಾರ ದಂಡೇ ಇದೆ. ಆದರೆ ಯಾರೂ ನಿರ್ದಿಷ್ಟವಾಗಿ ಗುರುತಿಸಿಕೊಳ್ಳಲಿಲ್ಲ. ಸೀಸನ್‌ನ ಆರಂಭದಲ್ಲಿ ಹೇಳಿಕೊಳ್ಳುವಂತ ಆಟವನ್ನೂ ಪ್ರದರ್ಶಿಸಿರಲಿಲ್ಲ. ಆದರೀಗ ಸುಸ್ಥಿತಿಯಲ್ಲಿದೆ. ಶನಿವಾರ ಡೆಲ್ಲಿ ಸವಾಲು ಯುಪಿಗೆ ಕಠಿನವಾಗಿರುವುದರಲ್ಲಿ ಅನುಮಾನವಿಲ್ಲ. ಆದರೆ ತವರಿನ ಲಾಭವೆತ್ತುವ ಅವಕಾಶ ಯುಪಿ ಪಾಲಿಗಿದೆ.

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.