19 ವರ್ಷದ ಹಿಂದೆ ಸಿಕ್ಕಿದ್ದ ಅಭಿಮಾನಿಯನ್ನು ನೆನೆದ ಸಚಿನ್‌ ತೆಂಡುಲ್ಕರ್‌

ಮೊಳಕೈ ಗಾರ್ಡ್‌ ವಿನ್ಯಾಸ ಬದಲಾಯಿಸಲು ಸೂಚಿಸಿದ್ದ ಗುರುಪ್ರಸಾದ್‌ ಭೇಟಿಗೆ ಕ್ರಿಕೆಟ್‌ ದೇವರ ಕಾತುರ

Team Udayavani, Dec 17, 2019, 12:33 PM IST

guruprasad

ಸಚಿನ್‌ ತೆಂಡುಲ್ಕರ್‌ರನ್ನು ಕ್ರಿಕೆಟ್‌ ದೇವರು ಎಂದು ಕರೆಯಲಾಗುತ್ತದೆ. ಇಂದು ಕೊಹ್ಲಿ, ರೋಹಿತ್‌, ಸ್ಟೀವ್‌ ಸ್ಮಿತ್‌ರಂತಹ ಆಟಗಾರರೆಲ್ಲರೂ ಸೇರಿ ಮುರಿಯುತ್ತಿರುವ ದಾಖಲೆಗಳು ಈ ಒಬ್ಬನೇ ಕ್ರಿಕೆಟಿಗನಿಗೆ ಸೇರಿದ್ದು ಎನ್ನುವುದು ಅವರ ಸಾಧನೆಯ ಮೌಲ್ಯವನ್ನು ಹೇಳುತ್ತದೆ. ಅಂತಹ ತೆಂಡುಲ್ಕರ್‌ 19 ವರ್ಷದ ಹಿಂದೆ ಕೆಲವು ನಿಮಿಷಗಳ ಮಟ್ಟಿಗೆ ಭೇಟಿಯಾಗಿದ್ದ, ಗುರುಪ್ರಸಾದ್‌ ಎಂಬ ಅಭಿಮಾನಿಯನ್ನು ತಾವಾಗಿಯೇ ನೆನಪಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಅವರನ್ನು ಭೇಟಿಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಅದಾದ ನಂತರ ಅದುವರೆಗೆ ಅನಾಮಿಕರಾಗಿದ್ದ ಆ ಅಭಿಮಾನಿ, ರಾತ್ರೋರಾತ್ರಿ ಜನಪ್ರಿಯರಾಗಿದ್ದಾರೆ. ಅವರ ಮನೆಮುಂದೆ ಟೀವಿವಾಹಿನಿಗಳು ಸಾಲುಗಟ್ಟಿವೆ. ಈ ವೇಳೆ ರೋಚಕ ಕಥೆಯೊಂದು ತೆರೆದುಕೊಂಡಿದೆ.

ಮೊನ್ನೆ 14ನೇ ತಾರೀಕು ಸಚಿನ್‌ ತೆಂಡುಲ್ಕರ್‌ ಮಾಡಿರುವ ಟ್ವೀಟ್‌ ಹೀಗಿದೆ: “ಅದೊಂದು ಭೇಟಿ ಬಹಳ ಸ್ಮರಣೀಯ. ಟೆಸ್ಟ್‌ ಸರಣಿಯೊಂದರ ವೇಳೆ ಚೆನ್ನೈನ ತಾಜ್‌ ಕೊರೊಮಂಡೆಲ್‌ ಹೋಟೆಲ್‌ ಸಿಬ್ಬಂದಿ ಜೊತೆಗೆ ಚರ್ಚೆ ನಡೆಸಿದ್ದೆ. ನನ್ನ ಮೊಳಕೈ ಗಾರ್ಡ್‌ ಬಗ್ಗೆ ಆಗ ನಡೆಸಿದ ಚರ್ಚೆ ಪರಿಣಾಮ, ನಾನು ಗಾರ್ಡ್‌ ವಿನ್ಯಾಸವನ್ನೇ ಬದಲಿಸಿದ್ದೆ.  ಆ ವ್ಯಕ್ತಿ ಎಲ್ಲಿದ್ದಾನೆಂಬ ಕುತೂಹಲ ನನ್ನದು. ಅವರನ್ನು ಭೇಟಿಯಾಗುವ ಉತ್ಸಾಹದಲ್ಲಿದ್ದೇನೆ. ನೆಟಿಜನ್‌ಗಳೇ ಅವರನ್ನು ಹುಡುಕಲು ಸಹಾಯ ಮಾಡುತ್ತೀರಾ?’ ಈ ಮೇಲಿನ ಟ್ವೀಟನ್ನು ನೋಡಿ ಸಾವಿರಾರು ಮಂದಿ ಕುತೂಹಲಪಟ್ಟಿದ್ದಾರೆ. ಅಂತಹ ವ್ಯಕ್ತಿ ಯಾರೆಂದು ಹುಡುಕಲು ಆರಂಭಿಸಿದ್ದಾರೆ. ಆಗ ಗುರುಪ್ರಸಾದ್‌ ಅವರ ಸೋದರಳಿಯ ಎನ್‌.ಶ್ಯಾಮಸುಂದರ್‌ ಎನ್ನುವವರು ಒಂದು ಟ್ವೀಟ್‌ ಮಾಡಿ, ಸಚಿನ್‌ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅದುಹೀಗಿದೆ: “ನೀವು ಹುಡುಕುತ್ತಿರುವ ಆ ವ್ಯಕ್ತಿ ನನ್ನ ಅಂಕಲ್‌. ಆ ವ್ಯಕ್ತಿಯನ್ನು ನೀವು 2ನೇ ಮಹಡಿಯಲ್ಲಿ ಭೇಟಿ ಮಾಡಿದ್ದಿರಿ. ಆಗ ನೀವು ನೆಲಮಹಡಿಗೆ ಹೊರಟಿದ್ದಿರಿ. ಅವರೇ ನಿಮ್ಮ ಮೊಳಕೈ ಗಾರ್ಡ್‌ ಬದಲಿಸಲು ಸಲಹೆ ನೀಡಿದ್ದು. ನೀವು ಅವರಿಗೆ ಹಸ್ತಾಕ್ಷರ ನೀಡಿದ ಹಾಳೆಯನ್ನೂ ಇಲ್ಲಿ ಲಗತ್ತಿಸಿದ್ದೇನೆ’.

ಆ ರೋಚಕ ಕಥೆ: ಈ ವಿಚಾರ ಬಹಿರಂಗವಾಗುತ್ತಲೇ ಚೆನ್ನೈನ ಗುರುಪ್ರಸಾದ್‌ ನಿವಾಸಕ್ಕೆ ಟೀವಿಗಳುದಾಂಗುಡಿಯಿಟ್ಟು ಸರಣಿ ಸಂದರ್ಶನ ನಡೆಸಿವೆ. ಸದ್ಯ ಗುರುಪ್ರಸಾದ್‌ ಅವರು ಬಿಡುವಿಲ್ಲದಷ್ಟು ಕಾರ್ಯ ಮಗ್ನರಾಗಿದ್ದಾರೆ. 19 ವರ್ಷದ ಹಿಂದೆ ತೆಂಡುಲ್ಕರ್‌ರನ್ನು ಭೇಟಿ ಮಾಡಿದ್ದಾಗ ಗುರುಪ್ರಸಾದ್‌ಗೆ 27 ವರ್ಷ. ಈಗ 46 ವರ್ಷ. ಅದಾದ ನಂತರ ಹಲವು ದುರ್ಘ‌ಟನೆಗಳು ಅವರ ಜೀವನದಲ್ಲಿ ನಡೆದಿವೆ. 2003ರಲ್ಲಿ ಅವರು ತಮ್ಮ ತಂದೆತಾಯಿಯನ್ನು ಕಳೆದು ಕೊಂಡಿದ್ದಾರೆ. ಪ್ರಸ್ತುತ ಶೇರು ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ

2001ರಲ್ಲಿ ಸಚಿನ್‌ ತೆಂಡುಲ್ಕರ್‌ ತಾಜ್‌ ಕೊರೊಮಂಡೆಲ್‌ ಹೋಟೆಲ್‌ನಲ್ಲಿ ಉಳಿದು ಕೊಂಡಿದ್ದರು. ಆಗ ಗುರು 2ನೇ ಮಹಡಿಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು. ತೆಂಡುಲ್ಕರ್‌ ಕೊಠಡಿಯಿಂದ ಹೊರಬಂದ ಕೂಡಲೇ ಓಡಿ ಹೋಗಿ, ಹಸ್ತಾಕ್ಷರಕ್ಕೆ ಮನವಿ ಮಾಡಿದರು. ನಿಮ್ಮೊಂದಿಗೆ ತುಸು ಮಾತನಾಡಬಹುದೇ ಎಂದರು. ತೆಂಡುಲ್ಕರ್‌ ಆಯಿತು ಎಂದಾಗ ಮುಂದುವರಿದ ಗುರು, ನಿಮ್ಮ ಮೊಳಕೈ ಗಾರ್ಡ್‌ ವಿನ್ಯಾಸ ಬದಲಿಸಿ. ಅದೇ ನಿಮ್ಮ ಬ್ಯಾಟ್‌ ಚಲನೆಗೆ ಅಡ್ಡಿಯಾಗುತ್ತಿದೆ ಎಂಬ ಸಲಹೆ ನೀಡಿದರು.

ಅದು ಹೇಗೆ ಅಷ್ಟು ನಿಖರವಾಗಿ ಹೇಳುತ್ತೀರಿ ಎಂದು ಸಚಿನ್‌ ಮರುಪ್ರಶ್ನಿಸಿದರು. ನಾನು ನಿಮ್ಮ ಅಪ್ಪಟ ಅಭಿಮಾನಿ. ನಿಮ್ಮ ಪ್ರತಿಯೊಂದು ಚಲನೆಯನ್ನೂ ವೀಕ್ಷಿಸಿದ್ದೇನೆ. ಅದನ್ನು ನೋಡಿಯೇ ಹೇಳುತ್ತಿದ್ದೇನೆ ಎಂದರು. ಮುಂದೆ ಕೆಲವೇ ದಿನಗಳಲ್ಲಿ ತಮ್ಮ ಮೊಳಕೈ ಗಾರ್ಡ್‌ ವಿನ್ಯಾಸ ಬದಲಿಸಿಕೊಂಡಿದ್ದರು. ಈಗ ತೆಂಡುಲ್ಕರ್‌ ತನ್ನನ್ನು ಭೇಟಿ ಮಾಡಿದರೆ, ತನ್ನ ಜೀವನದಲ್ಲಿ ಅದಕ್ಕಿಂತ ಮಹತ್ವದ ಕ್ಷಣ ಇನ್ನೊಂದು ಇರಲಿಕ್ಕಿಲ್ಲ ಎಂದು ಗುರುಪ್ರಸಾದ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.