ಆಸೀಸ್ಗಳ ಮೇಲೆ ಕಲ್ಲೆಸೆತ: ಕ್ರಿಕೆಟ್ ಪ್ರೇಮಿಗಳಿಂದ ಕ್ಷಮೆಯಾಚನೆ
Team Udayavani, Oct 12, 2017, 3:59 PM IST
ಹೊಸದಿಲ್ಲಿ : ಗುವಾಹಟಿಯಲ್ಲಿ ಕಳೆದ ಅ.10ರಂದು ನಡೆದಿದ್ದ ಟಿ-20 ಪಂದ್ಯವನ್ನು ಗೆಲ್ಲುವ ಮೂಲಕ ಮೂರು ಪಂದ್ಯಗಳ ಹಾಲಿ ಸರಣಿಯಲ್ಲಿ 1-1ರ ವೀರೋಚಿತ ಸಮಬಲವನ್ನು ಸಾಧಿಸಿದ ಪ್ರವಾಸಿ ಆಸ್ಟ್ರೇಲಿಯ ಕ್ರಿಕೆಟ್ ತಂಡ, ಪಂದ್ಯ ಮುಗಿದ ಬಳಿಕ ತಮ್ಮ ವಾಸ್ತವ್ಯದ ಹೊಟೇಲಿಗೆ ಮರಳುತ್ತಿದ್ದ ವೇಳೆ ಅವರ ಬಸ್ಸಿನ ಮೇಲೆ ಕಲ್ಲೆಸೆಯಲಾದ ಅತ್ಯಂತ ನಾಚಿಕೆಗೇಡಿನ ವಿದ್ಯಮಾನಕ್ಕೆ ಗುವಾಹಟಿಯ ಅನೇಕ ಕ್ರಿಕೆಟ್ ಅಭಿಮಾನಿಗಳು ಪ್ರವಾಸಿಗರಲ್ಲಿ ಕ್ಷಮೆಯಾಚಿಸುವುದಕ್ಕಾಗಿ ಅವರ ವಾಸ್ತವ್ಯದ ಹೊಟೇಲ್ ಮುಂದೆ ಕ್ಷಮಾ ಫಲಕಗಳನ್ನು ಹಿಡಿದು ಸಾಲುಗಟ್ಟಿ ನಿಂತು ಕ್ರೀಡಾ ಸದ್ಭಾವನೆಯನ್ನು ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯ ಕ್ರಿಕೆಟಿಗಳು ಎರಡೇ ತಿಂಗಳಲ್ಲಿ ಅನುಭವಿಸಿರುವ ಎರಡನೇ ಕಲ್ಲೆಸೆತದ ಪ್ರಕರಣ ಇದಾಗಿದೆ. ಕಳೆದ ಸೆಪ್ಟಂಬರ್ನಲ್ಲಿ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಆಟಗಾರರ ಮೇಲೆ ಕಲ್ಲೆಸೆಯಲಾಗತ್ತು. ಗುವಾಹಟಿಯಲ್ಲಿ ಆಸೀಸ್ ಆಟಗಾರರ ಬಸ್ಸಿನ ಮೇಲೆ ಎಸೆಯಲಾದ ಕಲ್ಲು ಕ್ರಿಕೆಟ್ ಚೆಂಡಿನ ಗಾತ್ರದ್ದಾಗಿತ್ತು. ಬಸ್ಸಿನ ಕಿಟಕಿ ಗಾಜು ಕಲ್ಲೆಸತಕ್ಕೆ ಹಾನಿಗೊಂಡು ಆಟಗಾರರಲ್ಲಿ ತೀವ್ರ ಭಯ, ಆತಂಕ ಸೃಷ್ಟಿಸಿತಾದರೂ ಯಾವೊಬ್ಬ ಆಟಗಾರನೂ ಗಾಯಗೊಂಡಿರಲಿಲ್ಲ.
ಎರಡನೇ ಟಿ-20 ಪಂದ್ಯದಲ್ಲಿ ಧೋನಿ ಮತ್ತು ಕೇದಾರ್ ಜಾಧವ್ ಅವರ ವಿಕೆಟನ್ನು ಕಿತ್ತಿದ್ದ ಲೆಗ್ ಸ್ಪಿನ್ನರ್ ಆ್ಯಡಂ ಝಂಪಾ ಅವರು, “ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನಿರಾಶಾದಾಯಕ ಪ್ರಕರಣ’ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ
D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್