ಭಜ್ಜಿ ಎಂದು ನಾಮಕರಣ ಮಾಡಿದವರು ನಯನ್‌ ಮೊಂಗಿಯ!


Team Udayavani, Dec 25, 2021, 7:05 AM IST

ಭಜ್ಜಿ ಎಂದು ನಾಮಕರಣ ಮಾಡಿದವರು ನಯನ್‌ ಮೊಂಗಿಯ!

ಹೊಸದಿಲ್ಲಿ: ಹರ್ಭಜನ್‌ ಸಿಂಗ್‌ ಅವರನ್ನು “ಭಜ್ಜಿ’ ಎಂದು ಮೊದಲ ಸಲ ಕರೆದವರು ಕೀಪರ್‌ ನಯನ್‌ ಮೊಂಗಿಯ. ಅವರಿಗೆ ಹರ್ಭಜನ್‌ ಸಿಂಗ್‌ ಹೆಸರನ್ನು ಕರೆಯಲು ಕಷ್ಟವಾಗುತ್ತಿದ್ದುದೇ ಇದಕ್ಕೆ ಕಾರಣ! ಬಳಿಕ ಹರ್ಭಜನ್‌ ಇದರ ಪೇಟೆಂಟ್‌ ಕೂಡ ಪಡೆದರು. ಅವರ ಸ್ಪೋರ್ಟ್ಸ್ ಲೈಫ್ಸ್ಟೈಲ್‌ ಬ್ರ್ಯಾಂಡ್‌ ಉತ್ಪನ್ನ “ಭಜ್ಜಿ’ ಹೆಸರಲ್ಲೇ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಭಜ್ಜಿ ಅವರ ಮೊದಲ ಕೋಚ್‌ ಚರಣ್‌ಜೀತ್‌ ಸಿಂಗ್‌. ಇವರಿಂದ ಹರ್ಭಜನ್‌ ಬ್ಯಾಟಿಂಗ್‌ ತರಬೇತಿ ಪಡೆದಿದ್ದರು. ಇವರ ಅಕಾಲಿಕ ನಿಧನದ ಬಳಿಕ ನೂತನ ಕೋಚ್‌ ದೇವಿಂದರ್‌ ಅರೋರಾ ಅವರ ಸೂಚನೆ ಮೇರೆಗೆ ಹರ್ಭಜನ್‌ ಸ್ಪಿನ್ನರ್‌ ಆಗಿ ರೂಪುಗೊಂಡರು.

ಜುಲೈ ಮೂರರಂದು ಹುಟ್ಟಿದ ಕಾರಣ “3′ ಹರ್ಭಜನ್‌ ಅವರ ಲಕ್ಕಿ ನಂಬರ್‌ ಆಗಿದೆ. ಇವರ ಜೆರ್ಸಿ ನಂಬರ್‌ ಕೂಡ 3.

2003ರಲ್ಲಿ ಅರ್ಜುನ ಪ್ರಶಸ್ತಿ, 2009ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಹರ್ಭಜನ್‌ ಭಾಜನರಾಗಿದ್ದರು.

2002ರಲ್ಲಿ ಅಂದಿನ ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಹರ್ಭಜನ್‌ಗೆ
ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆ ನೀಡಿದ್ದರು. ಆದರೆ 2001ರಲ್ಲಿ ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಪ್ರದರ್ಶಿಸಿದ ಐತಿಹಾಸಿಕ ಸಾಧನೆಯಿಂದ ಪ್ರೇರಿತರಾಗಿ ಕ್ರಿಕೆಟ್‌ನಲ್ಲೇ ಮುಂದುವರಿಯಲು ಬಯಸಿದ್ದರಿಂದ ಆ ಹುದ್ದೆ ನಿರಾಕರಿಸಿದ್ದರು.

ಇದನ್ನೂ ಓದಿ:ಎಲ್ಲಾ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ ಟರ್ಬನೇಟರ್ ಹರ್ಭಜನ್ ಸಿಂಗ್

ಹರ್ಭಜನ್‌ ಸಿಂಗ್‌ ಟೆಸ್ಟ್‌ ಇತಿಹಾಸದಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಭಾರತದ ಮೊದಲ ಬೌಲರ್‌. ಅದು ಆಸ್ಟ್ರೇಲಿಯ ಎದುರಿನ 2001ರ “ಫಾಲೋಆನ್‌ ಟೆಸ್ಟ್‌’ ಆಗಿತ್ತು. ಭಜ್ಜಿ ಕ್ರಮವಾಗಿ 123ಕ್ಕೆ 7 ಹಾಗೂ 73ಕ್ಕೆ 6 ವಿಕೆಟ್‌ ಕೆಡವಿದ್ದರು. ಮೊದಲ ಸರದಿಯಲ್ಲಿ ಪಾಂಟಿಂಗ್‌, ಗಿಲ್‌ಕ್ರಿಸ್ಟ್‌ ಮತ್ತು ವಾರ್ನ್ ಅವರನ್ನು ಸತತ 3 ಎಸೆತಗಳಲ್ಲಿ ಕೆಡವಿದ್ದರು.

ಹರ್ಭಜನ್‌ 8ನೇ ಕ್ರಮಾಂಕದಲ್ಲಿ ಆಡಲಿಳಿದು ಸತತ 2 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ. ಇದನ್ನು ನ್ಯೂಜಿಲ್ಯಾಂಡ್‌ ವಿರುದ್ಧ ಸಾಧಿಸಿದ್ದರು.

ಬೆಳ್ಳಿಪರದೆಗೂ ಬಂದ ಭಜ್ಜಿ, “ಮುಜ್‌ಸೆ ಶಾದಿ ಕರೋಗಿ’ (2004), “ಭಜ್ಜಿ ಇನ್‌ ಪ್ರಾಬ್ಲೆಮ್‌’ (2013), “ಸೆಕೆಂಡ್‌ ಹ್ಯಾಂಡ್‌ ಹಸ್ಬೆಂಡ್‌’ (2015) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಹರ್ಭಜನ್‌ ಸಿಂಗ್‌ 2 ವಿವಾದಗಳ ಮೂಲಕವೂ ಸುದ್ದಿಯಾಗಿದ್ದರು. ಇದರಲ್ಲಿ ಪ್ರಮುಖವಾದದ್ದು “ಮಂಕಿಗೇಟ್‌’ ಪ್ರಕರಣ. ಆ್ಯಂಡ್ರೂ ಸೈಮಂಡ್ಸ್‌ಗೆ

ಮಂಕಿ ಎಂದು ಹೀಯಾಳಿಸಿದ್ದು ದೊಡ್ಡ ಮಟ್ಟದ ವಿವಾದವಾಗಿತ್ತು. ಇನ್ನೊಂದು ಪ್ರಕರಣವೆಂದರೆ, ಅಂಗಳದಲ್ಲೇ ಶ್ರೀಶಾಂತ್‌ ಕೆನ್ನೆಗೆ ಬಿಗಿದದ್ದು!

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.