ಇನ್ನೂ ಆರಂಭವಾಗಿಲ್ಲ ಹಾರ್ದಿಕ್, ರಾಹುಲ್ ವಿಚಾರಣೆ!
Team Udayavani, Mar 7, 2019, 12:45 AM IST
ಮುಂಬಯಿ: ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದಾರೆಂಬ ಹಿನ್ನೆಲೆಯಲ್ಲಿ, ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ಗೆ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಲಾಗಿತ್ತು.
ಈ ಇಬ್ಬರು ಕ್ಷಮೆ ಕೇಳಿದ್ದರೂ, ವಿಚಾರಣೆ ನಡೆಸಲು ಬಿಸಿಸಿಐನ ಬೇಡಿಕೆಯಂತೆ ಸರ್ವೋಚ್ಚ ನ್ಯಾಯಾಲಯ ವಿಶೇಷ ತನಿಖಾಧಿಕಾರಿಯನ್ನು ನೇಮಿಸಿತ್ತು. ಇದಾಗಿ ಎರಡು ವಾರಗಳು ಕಳೆದಿದ್ದರೂ, ಈ ಪ್ರಕರಣವನ್ನು ಬಿಸಿಸಿಐ ಇನ್ನೂ ವಿಚಾರಣೆಗೆ ಒಪ್ಪಿಸಿಲ್ಲ! ಈ ವಿಷಯವನ್ನು ತನಿಖಾಧಿಕಾರಿ ಡಿ.ಕೆ.ಜೈನ್ ಹೇಳಿಕೊಂಡಿದ್ದಾರೆ.
ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್, ಸಹ ಆಡಳಿತಾಧಿಕಾರಿ ಡಯಾನ ಎಡುಲ್ಜಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಈ ಪ್ರಕರಣಕ್ಕೆ ಶಿಕ್ಷೆ ನೀಡುವುದು ಬಿಸಿಸಿಐ ನೀತಿ ಸಂಹಿತೆಯಲ್ಲಿಲ್ಲ ಎಂದು ಗೊತ್ತಾಗಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇಬ್ಬರೂ ಕ್ರಿಕೆಟಿಗರು ಬೇಷರತ್ ಈ ಪ್ರಕರಣದ ಕುರಿತು ಕ್ಷಮೆ ಕೇಳಿದ್ದರು. ಇದಾದ ಬಳಿಕ ಕೆಲವು ಪಂದ್ಯಗಳ ನಿಷೇಧ ವಿಧಿಸಿಯೋ, ಎಚ್ಚರಿಕೆ ನೀಡಿಯೋ ಕೈಬಿಡಬೇಕಾಗಿದ್ದ ಪ್ರಕರಣವನ್ನು ಅತಿಯಾಗಿ ಎಳೆದಾಡಿ, ಕಡೆಗೆ ತನಿಖೆ ನಡೆಯಬೇಕು ಎಂಬ ಮಟ್ಟಕ್ಕೆ ಎಳೆದುಕೊಂಡು ಹೋಗಿದ್ದಾರೆ. ಇಷ್ಟಾದ ಮೇಲೆ ಈ ವಿಷಯದ ಕುರಿತು ಒಂದು ತಾರ್ಕಿಕ ಅಂತ್ಯಕ್ಕೆ ಬಿಸಿಸಿಐ ಏಕೆ ಒಯ್ಯುತ್ತಿಲ್ಲ ಎಂದು ಪ್ರಶ್ನೆ ಹಲವರಲ್ಲಿ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ