ಹರಿಯಾಣ ಸರಕಾರ-ಕ್ರೀಡಾಪಟುಗಳ ಜಗಳಕ್ಕೆ ಸಮ್ಮಾನ ಬಲಿ
Team Udayavani, Apr 26, 2018, 6:00 AM IST
ಚಂಡೀಗಢ: ಹರಿಯಾಣ ಸರಕಾರ ಮತ್ತು ಅಲ್ಲಿನ ಕ್ರೀಡಾಪಟುಗಳ ನಡುವಿನ ಬಿಕ್ಕಟ್ಟಿನಿಂದ ಗುರುವಾರ ಪಂಚಕುಲದಲ್ಲಿ ನಡೆಯಬೇಕಿದ್ದ ಸಮ್ಮಾನ ಕಾರ್ಯಕ್ರಮವೇ ರದ್ದಾಗಿದೆ. ಈ ಬಾರಿಯ ಕಾಮನ್ವೆಲ್ತ್ನಲ್ಲಿ ಪದಕ ಗೆದ್ದ ರಾಜ್ಯದ 22 ಕ್ರೀಡಾಪಟುಗಳನ್ನು ಸಮ್ಮಾನಿಸಲು ಹರಿಯಾಣ ಮುಂದಾಗಿತ್ತು. ಆದರೆ ರೈಲ್ವೆ, ಸೇನೆಯಂತಹ ಸಂಸ್ಥೆಗಳನ್ನು ಪ್ರತಿನಿಧಿಸುವ ರಾಜ್ಯ ಕ್ರೀಡಾಪಟುಗಳ ಪ್ರಶಸ್ತಿ ಮೊತ್ತದಲ್ಲಿ ಕತ್ತರಿ ಹಾಕುವುದಾಗಿ ಸರಕಾರ ಘೋಷಿಸಿದೆ. ಇದನ್ನು ಕೆಲ ಹಿರಿಯ ಕ್ರೀಡಾಪಟುಗಳು ವಿರೋಧಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪರಿಣಾಮ ಮೇಲಿನ ಬೆಳವಣಿಗೆ ನಡೆದಿದೆ.
ಹರಿಯಾಣ ಸರಕಾರ ದೇಶದಲ್ಲಿ ಗರಿಷ್ಠ ಪ್ರಶಸ್ತಿ ಮೊತ್ತವನ್ನು ಆಟಗಾರರಿಗೆ ನೀಡುತ್ತಿದೆ. ಕಾಮನ್ವೆಲ್ತ್ ಚಿನ್ನ ಗೆದ್ದವರಿಗೆ 1.5 ಕೋಟಿ ರೂ., ಬೆಳ್ಳಿಗೆ 75 ಲಕ್ಷ ರೂ., ಕಂಚಿಗೆ 50 ಲಕ್ಷ ರೂ.ಗಳನ್ನು ಘೋಷಿಸಿದೆ. ಆದರೆ ಸೇನೆ, ರೈಲ್ವೆಯಲ್ಲಿರುವ ರಾಜ್ಯದ ಕ್ರೀಡಾಪಟುಗಳಿಗೆ ಒಂದು ವೇಳೆ ಆ ಸಂಸ್ಥೆಗಳು ನಗದು ನೀಡಿದ್ದರೆ, ಅದನ್ನು ಕಡಿತ ಮಾಡಿಕೊಂಡು ಉಳಿದ ಮೊತ್ತ ಮಾತ್ರ ನೀಡಲಾಗುವುದು ಎಂದು ಹರಿಯಾಣ ಕ್ರೀಡಾಸಚಿವಾಲಯ ಘೋಷಿಸಿದೆ. ಅಂದರೆ ರೈಲ್ವೆ ಉದ್ಯೋಗಿಯಾಗಿರುವ ವಿನೇಶ್ ಫೊಗಾಟ್ಗೆ (ಕುಸ್ತಿ ಚಿನ್ನ) ರೈಲ್ವೆ 50 ಲಕ್ಷ ರೂ. ನೀಡಿದ್ದರೆ, ಹರಿಯಾಣ ಸರಕಾರ ಬಾಕಿ 1 ಕೋಟಿ ರೂ. ಮಾತ್ರ ನೀಡಲಿದೆ. ಇದನ್ನು ಜಾವೆಲಿನ್ ಸ್ಪರ್ಧಿ ನೀರಜ್ ಚೋಪ್ರಾ, ವಿನೇಶ್ ಫೊಗಾಟ್, ಬಾಕ್ಸರ್ ಮನೋಜ್ ಕುಮಾರ್ ವಿರೋಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ