ಪದಕ ಗೆದ್ದ ಬಾಕ್ಸರ್ಗಳಿಗೆ ಹಸು!
Team Udayavani, Dec 2, 2017, 7:40 AM IST
ರೋಹrಕ್ (ಹರಿಯಾಣ): ಕ್ರೀಡಾಪಟುಗಳು ಪ್ರಶಸ್ತಿ ಗೆದ್ದಾಗ ಹಣ ಕೊಡುವುದು, ಭೂಮಿ ಕೊಡುವುದು, ಮನೆ ಕೊಡುವುದು ಸಾಮಾನ್ಯ. ಹರಿಯಾಣದಲ್ಲೊಂದು ವಿಚಿತ್ರ ನಡೆದಿದೆ. ಅಲ್ಲಿನ ಪಶು ಸಂಗೋಪನೆ ಸಚಿವ ಓಂ ಪ್ರಕಾಶ್ ಧಂಕರ್ ಪದಕ ಗೆದ್ದವರಿಗೆ ಒಂದೊಂದು ಹಸುವನ್ನು ಕೊಡುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ವಿಶ್ವ ಯುವ ಬಾಕ್ಸಿಂಗ್ನಲ್ಲಿ ಪದಕ ಗೆದ್ದ ಹರ್ಯಾಣದ 6 ಬಾಕ್ಸರ್ಗಳು ಈ ವಿಶೇಷ ಘೋಷಣೆಯ ಫಲಾನುಭವಿಗಳು!
ಹೀಗೆ ಘೋಷಣೆ ಮಾಡುವುದರ ಜತೆಗೆ ಕಾರಣವನ್ನೂ ನೀಡಿದ್ದಾರೆ. ಎಮ್ಮೆ ಬಹುತೇಕ ನಿದ್ರೆ ಮಾಡುತ್ತಿರುತ್ತದೆ. ಹಸು ಚುರುಕಾಗಿರುತ್ತದೆ. ಹರಿಯಾಣದಲ್ಲಿ ಒಂದು ಗಾದೆಯೇ ಇದೆ. ಶಕ್ತಿ ಬೇಕೆಂದರೆ ಎಮ್ಮೆ ಹಾಲು ಕುಡಿ, ಬುದ್ಧಿ ಬೇಕು, ಸೌಂದರ್ಯ ಬೇಕೆಂದರೆ ಹಸುವಿನ ಹಾಲು ಕುಡಿ ಎನ್ನುತ್ತಾರೆ. ಹಸುವಿನಲ್ಲಿ ಹಾಲಿನಲ್ಲಿ ಕೊಬ್ಬಿನಂಶವಿರುವುದಿಲ್ಲ. ಆದ್ದರಿಂದ ಬಾಕ್ಸರ್ಗಳಿಗೆ ಇದು ಯೋಗ್ಯ ಎನ್ನುವುದು ಧಂಕರ್ ತರ್ಕ. ಈ ಹಸುವನ್ನು ಕ್ರೀಡಾಪಟುಗಳು ಪಡೆಯಲು ಒಪ್ಪುತ್ತಾರೋ, ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ!