ಹೆಟ್‌ಮೇಯರ್‌ ಆಕರ್ಷಕ ಶತಕ ವಿಂಡೀಸ್‌ನ 3 ರನ್‌ ರೋಜಕ ಗೆಲುವು


Team Udayavani, Jul 27, 2018, 6:35 AM IST

shimron-hetmyer.jpg

ಪ್ರೊವಿಡೆನ್ಸ್‌: ಶಿಮ್ರಾನ್‌ ಹೆಟ್‌ಮೇಯರ್‌ ಅವರ ಆಕರ್ಷಕ ಶತಕ ಮತ್ತು ಕೊನೆಕ್ಷಣದಲ್ಲಿ ಬಿಗು ದಾಳಿ ಸಂಘಟಿಸಿದ್ದರಿಂದ ವೆಸ್ಟ್‌ಇಂಡೀಸ್‌ ತಂಡವು ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಮೂರು ರನ್ನುಗಳ ರೋಚಕ ಜಯ ಕಾಣುವಂತಾಯಿತು. ಈ ಗೆಲುವಿನಿಂದ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲದಲ್ಲಿ ನಿಂತಿದೆ.

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್‌ ತಂಡವು ಹೆಟ್‌ಮೇಯರ್‌ ಅವರ ಸಾಹಸದ ಬ್ಯಾಟಿಂಗಿನಿಂದಾಗಿ 49.3 ಓವರ್‌ಗಳಲ್ಲಿ 271 ರನ್‌ ಗಳಿಸಿ ಆಲೌಟಾಯಿತು. ಇದಕ್ಕುತ್ತರವಾಗಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದ ಬಾಂಗ್ಲಾದೇಶ ಸರಣಿ ಗೆಲುವಿನತ್ತ ಸಾಗಿತ್ತು. ಆದರೆ ಅಂತಿಮ ಓವರಿನಲ್ಲಿ ಅನುಭವಿ ಮುಶ್ಫಿಕರ್‌ ರಹೀಮ್‌ ಅವರನ್ನು ಕಳೆದುಕೊಂಡ ಬಾಂಗ್ಲಾ ಅಂತಿಮವಾಗಿ 3 ರನ್ನಿನಿಂದ ಪಂದ್ಯ ಕಳೆದುಕೊಂಡು ನಿರಾಶೆ ಅನುಭವಿಸಿತು.

ಅಂತಿಮ ಓವರ್‌ ಗೆಲುವಿಗೆ 7 ರನ್‌
ಅಂತಿಮ ಓವರಿನಲ್ಲಿ ಬಾಂಗ್ಲಾ ಗೆಲುವಿನ 7 ರನ್‌ ಬೇಕಾಗಿತ್ತು. ಆದರೆ ಜಾಸನ್‌ ಹೋಲ್ಡರ್‌ ಕೇವಲ ನಾಲ್ಕು ರನ್‌ ಬಿಟ್ಟುಕೊಟ್ಟು ವಿಂಡೀಸ್‌ನ ಸ್ಮರಣೀಯ ಗೆಲುವಿಗೆ ಕಾರಣರಾದರು. ಇತ್ತೀಚೆಗಿನ ದಿನಗಳಲ್ಲಿ ಇದು ನಾಯಕ ಹೋಲ್ಡರ್‌ ಅವರ ಶ್ರೇಷ್ಠ ಅಂತಿಮ ಓವರ್‌ ದಾಳಿಗಳಲ್ಲಿ ಒಂದಾಗಿದೆ. ಮೊದಲ ಏಸತದಲ್ಲಿ ಹೋಲ್ಡರ್‌ ಅನುಭವಿ ಮುಶ್ಫಿಕರ್‌ ರಹೀಮ್‌ ಅವರ ವಿಕೆಟನ್ನು ಹಾರಿಸಿದ್ದರು. ಮುಂದಿನ ಐದು ಎಸೆತಗಳಲ್ಲಿ ಮೊಸಡೆಕ್‌ ಹೊಸೇನ್‌ ಮು¤ ಮುಶ್ರಫೆ ಮೊರ್ತಜ ಕೇವಲ 4 ರನ್‌ ತೆಗೆಯಲಷ್ಟೇ ಶಕ್ತರಾದರು. ಹೋಲ್ಡರ್‌ ಆರಂಭದ 9 ಓವರ್‌ಗಳಲ್ಲಿ 62 ರನ್‌ ಬಿಟ್ಟುಕೊಟ್ಟಿದ್ದರು.

ಅಗ್ರ ಕ್ರಮಾಂಕದ ಐವರು ಆಟಗಾರರು ಉತ್ತಮ ಆಟ ಪ್ರದರ್ಶಿಸಿದ್ದರಿಂದ ಬಾಂಗ್ಲಾದೇಶ ಗೆಲುವಿನ ಉತ್ಸಾಹದಲ್ಲಿತ್ತು. ಇವರಲ್ಲಿ ಆರಂಭಿಕ ತಮಿಮ್‌ ಇಕ್ಬಾಲ್‌, ಶಕಿಬ್‌ ಅಲ್‌ ಹಸನ್‌ ಮತ್ತು ಮುಶ್ಫಿಕರ್‌ ರಹೀಮ್‌ ಅರ್ಧಶತಕ ದಾಖಲಿಸಿದ್ದರು. 68 ರನ್‌ ಗಳಿಸಿದ ಮುಶ್ಫಿಕರ್‌ ಅಂತಿಮ ಓವರ್‌ನಲ್ಲಿ ಔಟಾದ ಕಾರಣ ಬಾಂಗ್ಲಾ ಒತ್ತಡಕ್ಕೆ ಸಿಲುಕಿತು.

ಹೆಟ್‌ಮೇಯರ್‌ ಶತಕ
ವಿಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಕ್ರಿಸ್‌ ಗೇಲ್‌ ತಂಡದಲ್ಲಿದ್ದರೂ ಸ್ಫೋಟಕ ಆಟ ಅವರಿಂದ ಬಂದಿಲ್ಲ. 14ನೇ ಓವರಿನಲ್ಲಿ ಗೇಲ್‌ ಔಟ್‌ ಆದಾಗ ತಂಡ ಕೇವಲ 55 ರನ್‌ ಗಳಿಸಿ ಒದ್ದಾಡುತ್ತಿತ್ತು. ಹೆಟ್‌ಮೇಯರ್‌ ಮತ್ತು ಪೊವೆಲ್‌ ಅವರು ಒಂಟಿ ರನ್‌ ಗಳಿಸುವುದರತ್ತ ಹೆಚ್ಚಿನ ಗಮನ ಹರಿಸಿದರು. 20ರಿಂದ 30ರ ನಡುವಣ ಓವರ್‌ ವೇಳೆ ವಿಂಡೀಸ್‌ ಕೇವಲ ಒಂದು ಬೌಂಡರಿ ಬಾರಿಸಿತ್ತು. ಆಬಳಿಕ ಹೆಟ್‌ಮೇಯರ್‌ ಸಿಡಿಯಲು ಮುಂದಾದರು. ಇದರಿಂದಾಗಿ ವಿಂಡೀಸ್‌ ಉತ್ತಮ ಮೊತ್ತ ಪೇರಿಸುವಂತಾಯಿತು. 93 ಎಸೆತ ಎದುರಿಸಿದ ಅವರು 3 ಬೌಂಡರಿ ಮತ್ತು 7 ಸಿಕ್ಸರ್‌ ನೆರವಿನಿಂದ 125 ರನ್‌ ಗಳಿಸಿ ಕೊನೆಯವರಾಗಿ ಔಟಾದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ಇಂಡೀಸ್‌ (49.3 ಓವರ್‌ಗಳಲ್ಲಿ 271 (ಕ್ರಿಸ್‌ ಗೇಲ್‌ 29, ಹೋಪ್‌ 25, ಹೆಟ್‌ಮೇಯರ್‌ 125, ಪೊವೆಲ್‌ 44, ಮುಶ್ಫಿಕರ್‌ ರೆಹಮಾನ್‌ 44ಕ್ಕೆ 2, ಶಕಿಬ್‌ 45ಕ್ಕೆ 2, ರುಬೆಲ್‌ ಹೊಸೇನ್‌ 61ಕ್ಕೆ 3); ಬಾಂಗ್ಲಾದೇಶ (50 ಓವರ್‌ಗಳಲ್ಲಿ 268 (ತಮಿಮ್‌ ಇಕ್ಬಾಲ್‌ 54, ಅನಾಮುಲ್‌ ಹಕ್‌ 23, ಶಕಿಬ್‌ ಅಲ್‌ ಹಸನ್‌ 56,  ಮುಶ್ಫಿಕರ್‌ ರಹೀಮ್‌ 68, ಮಹಮುದುಲ್ಲ 39). ಶ್ರಿಮ್ರಾನ್‌ ಹೆಟ್‌ಮೇಯರ್‌ ಪಂದ್ಯಶ್ರೇಷ್ಠ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.