ಸಿಎಂ ವಿರುದ್ಧವೇ ಎಫ್ಐಆರ್ ದಾಖಲಿಸಿದ ಹಾಕಿ ಅಭಿಮಾನಿ
Team Udayavani, Dec 2, 2018, 6:05 AM IST
ಭುವನೇಶ್ವರ: ವಿಶ್ವಕಪ್ ಹಾಕಿ ಕೂಟಗಳು ಆರಂಭವಾಗಿದ್ದು ಈ ಬೆನ್ನಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಹಾಕಿ ಅಭಿಮಾನಿಯೊಬ್ಬರು ಭುವನೇಶ್ವರದಲ್ಲಿ ಎಫ್ಐಆರ್ ದಾಖಲಿಸಿ ಸುದ್ದಿಯಾಗಿದ್ದಾರೆ.
ಟಿಕೇಟ್ ಮಾರಾಟದಲ್ಲಿ ಭಾರೀ ಅಕ್ರಮವಾಗಿದೆ. ಜತೆಗೆ 100 ರೂ.ವಿನ ಟಿಕೇಟ್ 1 ಸಾವಿರ ರೂ.ಗೆ ಹಾಗೂ 500 ರೂ.ವಿನ ಟಿಕೇಟ್ 4 ಸಾವಿರ ರೂ.ಗೆ ಬ್ಲ್ಯಾಕ್ ಮಾರ್ಕೆಟಿಂಗ್ನಲ್ಲಿ ಮಾರಾಟಗೊಂಡಿದೆ. ಈ ವಿಷಯ ಗೊತ್ತಿದ್ದರೂ ಮುಖ್ಯಮಂತ್ರಿ ಪಟ್ನಾಯಕ್ ಹಾಗೂ ಕ್ರೀಡಾ ಇಲಾಖೆ ಕಾರ್ಯದರ್ಶಿ ವಿಶಾಲ್ ದೇವ್ ಸೂಕ್ರ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಎಫ್ಐಆರ್ನಲ್ಲಿ ಸಾಮಾಜಿಕ ಕಾರ್ಯಕರ್ತ, ಹಾಕಿ ಅಭಿಮಾನಿಯಾಗಿರುವ ಸಂಜುಕ್ತಾ ಪಾಣಿಗ್ರಹಿ ಎನ್ನುವವರು ದೂರಿದ್ದಾರೆ. ಮಾತ್ರವಲ್ಲ ಶೀಘ್ರವೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.