ಹಸೆಮಣೆ ಏರಿದ ಹಾಕಿಪಟು ಸುನೀಲ್
Team Udayavani, Mar 5, 2018, 6:30 AM IST
ಮಂಗಳೂರು: ಭಾರತ ಹಾಕಿ ತಂಡದ ಮಾಜಿ ಉಪನಾಯಕ, ಅರ್ಜುನ ಪ್ರಶಸ್ತಿ ಪುರಸ್ಕೃತ ಕೊಡಗಿನ ಎಸ್.ವಿ. ಸುನೀಲ್ ಮತ್ತು ಮಂಗಳೂರಿನ ನಿಶಾ ಅವರ ವಿವಾಹ ರವಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನೆರವೇರಿತು.
ಮಂಗಳೂರಿನ ಕೊಂಚಾಡಿಯ ತಾರಾನಾಥ-ಸುನೀತಾ ದಂಪತಿಯ ಪುತ್ರಿ ನಿಶಾ ಅವರೊಂದಿಗೆ 3 ತಿಂಗಳ ಹಿಂದೆ ಸುನೀಲ್ ಅವರಿಗೆ ನಿಶ್ಚಿತಾರ್ಥ ನಡೆದಿತ್ತು. ವಿಶ್ವಕರ್ಮ ಸಮಾಜದ ಸಂಪ್ರದಾಯದಂತೆ ವಿವಾಹ ನಡೆದಿದೆ. ವಿವಾಹ ಸಮಾರಂಭಕ್ಕೆ ಭಾರತ ಹಾಕಿ ತಂಡದ ಗೋಲ್ಕೀಪರ್ ಶ್ರೀಜೇಶ್, ಆಟಗಾರರಾದ ಧೀರೇಂದ್ರ ಲಾಕ್ರಾ, ಲಲಿತ್ ಉಪಾಧ್ಯಾಯ, ಭರತ್ ಚೇತ್ರಿ, ತುಷಾರ್, ದೇವೇಂದರ್ ಮತ್ತಿತರರು ಸಾಕ್ಷಿಯಾದರು.
ಮಾ. 5ರಂದು ಸುನಿಲ್-ನಿಶಾ ದಂಪತಿಯ ವಿವಾಹ ಸಮಾರಂಭದ ಆರತಕ್ಷತೆ ಮಡಿಕೇರಿಯ ಕಾವೇರಿ ಹಾಲ…ನಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಹಾಕಿ ತಂಡದ ಆಟಗಾರರು, ಮಾಜಿ ಆಟಗಾರರಾದ ಅರ್ಜುನ್ ಹಾಲಪ್ಪ, ಧನರಾಜ್ ಪಿಳ್ಳೆ, ಎ.ಬಿ. ಸುಬ್ಬಯ್ಯ ಸೇರಿದಂತೆ ಹಲವರು ಪಾಲ್ಗೊಳ್ಳುವ ನಿರೀಕ್ಷೆ ಇದೆ.