ವಿಶ್ವ ಹಾಕಿ ಲೀಗ್ ಸೆಮಿಫೈನಲ್: ಭಾರತ ದಾಳಿಗೆ ಮತ್ತೆ ಸೋತ ಪಾಕ್
Team Udayavani, Jun 25, 2017, 3:45 AM IST
ಲಂಡನ್: ಈಗಾಗಲೇ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿರುವ ಭಾರತ 5 ಮತ್ತು 8ನೇ ಸ್ಥಾನಕ್ಕಾಗಿ ಪಾಕಿಸ್ತಾನ ವಿರುದ್ಧ ನಡೆದ ಹೋರಾಟದಲ್ಲಿ 6-1 ಗೋಲುಗಳ ಪ್ರಚಂಡ ಗೆಲುವು ಸಾಧಿಸಿದೆ.
ಈ ಮೂಲಕ ಕೂಟದಲ್ಲಿ ಸತತ 2ನೇ ಬಾರಿಗೆ ಪಾಕ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಪಾಕ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 7-1 ಅಂತರದಿಂದ ಗೆದ್ದಿತ್ತು. 2ನೇ ಸಲವೂ ಪಾಕ್ ವಿರುದ್ಧ ಪಾರಮ್ಯ ಸಾಧಿಸುವಲ್ಲಿ ಭಾರತ ಯಶಸ್ವಿಯಾಯಿತು.
ಭಾರತದ ಪರ ರಣದೀಪ್ ಸಿಂಗ್ (8 ಮತ್ತು 28ನೇ ನಿಮಿಷ), ಆಕಾಶ್ದೀಪ್ ಸಿಂಗ್ (12 ಮತ್ತು 27ನೇ ನಿಮಿಷ) ತಲಾ ಎರಡು ಗೋಲು ಬಾರಿಸಿದರೆ, ಹರ್ಮನ್ಪ್ರೀತ್ (36ನೇ ನಿಮಿಷ) ಮತ್ತು ಮನ್ದೀಪ್ ಸಿಂಗ್(59ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಪಾಕಿಸ್ತಾನ ಪರ ಅಜಜ್ ಅಹ್ಮದ್(41ನೇ ನಿಮಿಷ) ಏಕೈಕಗೋಲು ಸಿಡಿಸಿದರು.
ಪಾಕ್ ವಿರುದ್ಧ ಮತ್ತೆ ಸಿಡಿದ ಭಾರತ: ಪಂದ್ಯ ಆರಂಭದಿಂದ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತೀಯ ಆಟಗಾರರು ಪಾಕ್ ಮೇಲೆ ನಿರಂತರ ದಾಳಿ ನಡೆಸಿದರು. ಇದರ ಫಲವಾಗಿ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಗೋಲುಗಳು ಬಂದವು. 8ನೇ ನಿಮಿಷದಲ್ಲಿಯೇ ಭಾರತ ತಂಡದ ಸ್ಟಾರ್ ಆಟಗಾರ ರಣದೀಪ್ ಸಿಂಗ್ ಚೆಂಡನ್ನು ಗೋಲಿನ ಬಲೆಯೊಳಗೆ ಸೇರಿಸಿದರು.
ಈ ಮೂಲಕ ಭಾರತ ಗೋಲಿನ ಖಾತೆ ತೆರೆಯಿತು. ಆನಂತರ 12ನೇ ನಿಮಿಷದಲ್ಲಿ ಆಕಾಶ್ದೀಪ್ ಸಿಂಗ್ ಗೋಲು ಸಿಡಿಸಿ ಭಾರತ 2-0 ಗೋಲುಗಳಿಂದ ಮುನ್ನಡೆ ಪಡೆಯುವಂತೆ ಮಾಡಿದರು. ಮೊದಲನೇ ಅವಧಿ ಅಂತ್ಯದೊಳಗೆ ಭಾರತ 4-0 ಗೋಲುಗಳಿಂದ ಭರ್ಜರಿ ಮುನ್ನಡೆ ಪಡೆಯಿತು. ಎರಡನೇ ಅವಧಿಯಲ್ಲಿ ಪಾಕ್ ಸ್ವಲ್ಪ ಎಚ್ಚರಿಕೆಯಿಂದ ಆಡಿತು. ತನ್ನ ರಕ್ಷಣೆಯನ್ನು ಬಿಗುಗೊಳಿಸಿಕೊಂಡಿತು. 41ನೇ ನಿಮಿಷದಲ್ಲಿ ಪಾಕ್ನ ಅಜಾಜ್ ಅಹ್ಮದ್ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಾಕ್ ಗೋಲಿನ ಖಾತೆ ತೆರೆಯಿತು. ಆದರೆ ಭಾರತ ಪರ 2ನೇ ಅವಧಿಯಲ್ಲಿ ಹರ್ಮನ್ಪ್ರೀತ್ ಮತ್ತು ಮನ್ದೀಪ್ ಸಿಂಗ್ ತಲಾ ಒಂದು ಗೋಲು ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!