ವಿಶ್ವಕಪ್ ಫೈನಲ್‌ಗೂ ಮುನ್ನ ಕೇರಳದಲ್ಲಿ ಆರ್ಜೆಂಟೀನಾಗೆ ಭಾರೀ ಬೆಂಬಲ

ಆರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ರೋಚಕ ಜಿದ್ದಾಜಿದ್ದಿಗೆ ಭಾರಿ ನಿರೀಕ್ಷೆ

Team Udayavani, Dec 18, 2022, 6:51 PM IST

1-ssadsad

ತಿರುವನಂತಪುರಂ : ಭಾನುವಾರ ರಾತ್ರಿ ನಡೆಯುವ ಫಿಫಾ ಫೈನಲ್‌ ರೋಚಕ ಜಿದ್ದಾಜಿದ್ದಿಯ ಕುರಿತು ಕೇರಳದಲ್ಲಿ ಆರ್ಜೆಂಟೀನಾ ಪರ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಕೊಲ್ಲಂ ಜಿಲ್ಲೆಯ ಇಬ್ಬರು ಅಭಿಮಾನಿಗಳು, ದಕ್ಷಿಣ ಅಮೆರಿಕಾದ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಸಜ್ಜಾಗಿದ್ದು, ಒಬ್ಬರು ಆರ್ಜೆಂಟೀನಾ ಬಣ್ಣಗಳಲ್ಲಿ ಉದ್ದನೆಯ ಗಡ್ಡವನ್ನು ಮತ್ತು ಇನ್ನೊಬ್ಬರು ಅವರ ತಲೆಯ ಹಿಂಭಾಗದಲ್ಲಿ ವಿಶ್ವಕಪ್ ಟ್ರೋಫಿ ವಿನ್ಯಾಸದೊಂದಿಗೆ ಕೇಶವಿನ್ಯಾಸವನ್ನು ಮಾಡಿಸಿಕೊಂಡಿದ್ದಾರೆ.

ನವೆಂಬರ್ 20 ರಿಂದ ಇಂದಿನ ಫೈನಲ್‌ವರೆಗೆ ಕತಾರ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಕೇರಳದಲ್ಲಿ ಕಂಡುಬಂದ ಅರ್ಜೆಂಟೀನಾ ಮತ್ತು ಬ್ರೆಜಿಲ್‌ನಂತಹ ದಕ್ಷಿಣ ಅಮೆರಿಕಾದ ತಂಡಗಳ ಪರ ಅಭಿಮಾನ ಮತ್ತು ಬೆಂಬಲಕ್ಕೆ ಇದು ಒಂದು ಉದಾಹರಣೆಯಾಗಿದೆ.

ಕೊಲ್ಲಂನ ಕುಂದ್ರಾ ಪ್ರದೇಶದಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಸನ್ನಿ, ತಮ್ಮ ನೆಚ್ಚಿನ ತಂಡದ ಬಣ್ಣಗಳಲ್ಲಿ ತಮ್ಮ ಉದ್ದನೆಯ ಗಡ್ಡವನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ಲಿಯೋನೆಲ್ ಮೆಸ್ಸಿಗೆ ಬೆಂಬಲವನ್ನು ಸೂಚಿಸುವ ಹಿನ್ನೆಲೆಯಲ್ಲಿ ನೀಲಿ ಬಣ್ಣದಲ್ಲಿ ‘M’ ನಿಂದ ಕೂದಲನ್ನು ವಿನ್ಯಾಸಗೊಳಿಸಿದ್ದಾರೆ.

ತನ್ನ ಗಡ್ಡವನ್ನು ಬ್ಯೂಟಿ ಪಾರ್ಲರ್‌ನ ಮಾಲಕರು ಗಮನಿಸಿ ಅರ್ಜೆಂಟೀನಾದ ಪಟ್ಟೆ ನೀಲಿ ಬಣ್ಣದಲ್ಲಿ ಬಣ್ಣ ಹಾಕಲು ಮುಂದಾದರು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ನೇಹಿತ ರಾವ್ ಜಿ, ಅರ್ಜೆಂಟೀನಾದ ಅಭಿಮಾನಿಯಾಗಿದ್ದು ತಲೆಯ ಹಿಂಭಾಗದಲ್ಲಿ ಹಳದಿ ಬಣ್ಣದಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಕೂದಲನ್ನು ವಿನ್ಯಾಸಗೊಳಿಸಿದ್ದಾರೆ. ಹೊಸ ವಿನ್ಯಾಸದ ಗಡ್ಡ ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲರೂ ಗಮನಿಸುತ್ತಿದ್ದಾರೆ ಎಂದು ಸನ್ನಿ ಹೇಳಿದರು.

“ಮನೆಯಲ್ಲಿ, ನನ್ನ ಮಕ್ಕಳು ಇದನ್ನು ಇಷ್ಟಪಡುತ್ತಾರೆ. ಆದರೆ, ನನ್ನ ಪತ್ನಿ ಮುಜುಗರಕ್ಕೊಳಗಾಗಿದ್ದಾಳೆ ಎಂದೂ ಹೇಳಿದ್ದಾರೆ. ಫೈನಲ್‌ನ ನಂತರ ಅದನ್ನು ತೆಗೆದುಹಾಕಲು ನನ್ನನ್ನು ಕೇಳಿದ್ದಾಳೆ. ಆದರೆ ನನ್ನ ಮಕ್ಕಳು ನೆಚ್ಚಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಿಪಿಐ(ಎಂ) ಮುಖಂಡರಾದ ಎಂ ಬಿ ರಾಜೇಶ್, ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ರಾಜ್ಯ ಸಚಿವರೂ ಆಗಿರುವ ಎಂ.ಎಂ. ಮಣಿ, ಆರ್ಜೆಂಟೀನಾ, ಮೆಸ್ಸಿ ತನ್ನ ತಂಡದೊಂದಿಗೆ  ಈ ವರ್ಷ ಕಪ್ ಗೆಲ್ಲುವ ಭರವಸೆಯಲ್ಲಿದ್ದಾರೆ.

ನಟ, ಕೊಲ್ಲಂ ಶಾಸಕ ಮುಕೇಶ್, ಬ್ರೆಝಿಲ್‌ನ ಅಭಿಮಾನಿಯಾಗಿದ್ದರೂ, ತನ್ನ ನೆಚ್ಚಿನ ತಂಡ ಫೈನಲ್‌ಗೆ ತಲುಪದ ಕಾರಣ, ಮೆಸ್ಸಿಯ ಅಭಿಮಾನಿಯಾಗಿರುವುದರಿಂದ ಆರ್ಜೆಂಟೀನಾ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಮೊದಲ ಪಂದ್ಯದ ಸೋಲು ಅವರಿಗೆ ಮುಂದುವರೆಯಲು ಉತ್ತೇಜನ ನೀಡಿದೆ ಎಂದು ಅವರು ಹೇಳಿದರು.

ಫೈನಲ್ ಪಂದ್ಯವನ್ನು ವೀಕ್ಷಿಸಲು ಕತಾರ್‌ನಲ್ಲಿರುವ ಸೂಪರ್‌ಸ್ಟಾರ್ ಮೋಹನ್‌ಲಾಲ್, ನನಗೆ ಅಂತಹ ಯಾವುದೇ ನೆಚ್ಚಿನ ತಂಡವಿಲ್ಲ, ಆದರೆ ಯಾರು ಗೆಲ್ಲುತ್ತಾರೆ ಎಂದು ನೋಡಲು ಉತ್ಸುಕರಾಗಿದ್ದೇನೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು

Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು

aeroplane

Fraud: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 3.30 ಲಕ್ಷ ರೂ. ವಂಚನೆ

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

ARUN SINGH

BJP: ವಿಪಕ್ಷ ನಾಯಕನ ಆಯ್ಕೆ- ನಾಳೆ ಅರುಣ್‌ ಸಿಂಗ್‌ ಆಗಮನ

accident 2

ನಿಂತಿದ್ದ ಲಾರಿಗೆ ಕ್ರೂಸರ್‌ ಢಿಕ್ಕಿ: ಐವರ ಸಾವು

mobile

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

July-August : ಭಾರತ ಕ್ರಿಕೆಟ್‌ ತಂಡದ ವಿಂಡೀಸ್‌ ಪ್ರವಾಸ

Singapore Open Badminton: ಸಿಂಧು, ಸೈನಾಗೆ ಸೋಲು

Singapore Open Badminton: ಸಿಂಧು, ಸೈನಾಗೆ ಸೋಲು

ಫ್ರೆಂಚ್‌ ಓಪನ್‌: Sabalenka- Muchova ಸೆಮಿ ಸೆಣಸು

ಫ್ರೆಂಚ್‌ ಓಪನ್‌: Sabalenka- Muchova ಸೆಮಿ ಸೆಣಸು

Asian U-20 Athletics Championship: ಸುನೀಲ್‌ ಸ್ವರ್ಣ ಸಾಧನೆ

Asian U-20 Athletics Championship: ಸುನೀಲ್‌ ಸ್ವರ್ಣ ಸಾಧನೆ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

Viral Video: ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಸಪ್ತಪದಿ ವಿಧಾನ ನೆರವೇರಿಸಿದ ಯುವಕ.!

Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು

Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು

aeroplane

Fraud: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 3.30 ಲಕ್ಷ ರೂ. ವಂಚನೆ

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

India-Australia: ಟೆಸ್ಟ್‌  ವಿಶ್ವಕಪ್‌ ಫೈನಲ್‌ ಓವರ್‌ ಟು ಓವಲ್‌…

ARUN SINGH

BJP: ವಿಪಕ್ಷ ನಾಯಕನ ಆಯ್ಕೆ- ನಾಳೆ ಅರುಣ್‌ ಸಿಂಗ್‌ ಆಗಮನ