ಸಚಿನ್ನಿಂದಲೂ ಬೈಗುಳ ಕೇಳಿಸಿಕೊಂಡಿದ್ದೆ : ಗ್ಲೆನ್ ಮೆಕ್ ಗ್ರಾಥ್
Team Udayavani, Jan 21, 2017, 4:26 PM IST
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ರಂಗದ ದಂತ ಕಥೆ ಎನಿಸಿಕೊಂಡಿರುವ “ಕ್ರಿಕೆಟ್ ದೇವರು’ ಸಚಿನ್ ತೆಂಡುಲ್ಕರ್ ಸೌಮ್ಯ ಸ್ವಭಾವಕ್ಕೆ, ಸಭ್ಯ ಕ್ರಿಕೆಟ್ ವರ್ತನೆಗೆ ವಿಶ್ವದಲ್ಲೇ ಹೆಸರಾದವರು. ಆದರೂ ಆತನಿಂದ ನಾನು ಕ್ರಿಕೆಟ್ ಅಂಗಣದಲ್ಲಿ ವ್ಯಂಗ್ಯದ, ಅವಹೇಳನಕಾರಿ ಬೈಗುಳಗಳನ್ನು, ಚಾಟೂಕ್ತಿಗಳನ್ನು ಕೇಳಿಸಿಕೊಂಡಿದ್ದೆ ಎಂದು ಆಸ್ಟ್ರೇಲಿಯನ್ ಕ್ರಿಕೆಟ್ನ ದಂತ ಕಥೆ ಎನಿಸಿರುವ ವೇಗದ ಎಸೆಗಾರ ಗ್ಲೆನ್ ಮೆಕ್ ಗ್ರಾಥ್ ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮೆಕ್ ಗ್ರಾಥ್ ಹೇಳಿದ್ದು ಹೀಗೆ :
1990 ಮತ್ತು 2000 ದಶಕದ ಆಸ್ಟ್ರೇಲಿಯ ಕ್ರಿಕೆಟ್ ತಂಡಗಳು ಆಟದ ಮೈದಾನದಲ್ಲಿ ಎದುರಾಳಿಗಳ ಧೈರ್ಯ ಸ್ಥೈರ್ಯವನ್ನು ಕುಗ್ಗಿಸಲು ಬೈಗುಳ ಸುರಿಮಳೆ ಗೈಯುವ ತಂತ್ರ ನಡೆಸುತ್ತಿದ್ದರು. ಹಾಗೆ ನೋಡಿದರೆ ವಿಶ್ವದ ಎಲ್ಲ ಕ್ರಿಕೆಟ್ ತಂಡಗಳು ಈ ತಂತ್ರವನ್ನು ಅನುಸರಿಸುತ್ತವೆ; ಆದರೆ ಆಸ್ಟ್ರೇಲಿಯನ್ ಕ್ರಿಕೆಟಿಗರು ಇದನ್ನು ಮಾಡಿದಾಗ ಭಾರೀ ದೊಡ್ಡ ವಿವಾದಕ್ಕೆ ಕಾರಣವಾಗುತ್ತಾರೆ. ನಿಜಕ್ಕಾದರೆ ಇತರ ತಂಡದವರು ಬೈಗುಳ ನಡೆಸಿದಾಗ ಆಸೀಸ್ ಆಟಗಾರರು ಸುಮ್ಮಗಿರುತ್ತಾರೆ.
ಕ್ರಿಕೆಟ್ ಆಟಗಾರರು ನಡೆಸುವ ಈ ಸ್ಲೆಜ್ಜಿಂಗ್ ದಾಳಿಗೆ ಆಗಿನ ಕ್ರಿಕೆಟ್ ಕಪ್ತಾನ ಸ್ಟೀವ್ ವೋ ಅವರು “ಗೇಮ್ಸ್ಮ್ಯಾನ್ಶಿಪ್’ ಎಂಬ ಸಭ್ಯ ನಾಮಕಕರಣ ಮಾಡಿದರು.
ಆಸೀಸ್ ಕ್ರಿಕೆಟಿಗರಲ್ಲಿ ಅತ್ಯಂತ ನಿಷ್ಠುರ ಸ್ಲೆಜ್ಜರ್ ಎಂದರೆ ಮ್ಯಾಥ್ಯೂ ಹೇಡನ್. ಗಿಲ್ ಕ್ರಿಸ್ಟ್ ಜತೆಗೆ ಆರಂಭಿಕ ದಾಂಡಿಗನಾಗಿ ಬರುತ್ತಿದ್ದ ಈ ಕ್ರಿಕೆಟ್ ಸೈಂಧವ ಅನಗತ್ಯ ಸ್ಲೆಜ್ಜಿಂಗ್ ವಿವಾದ ಸೃಷ್ಟಿಸುವುದನ್ನು ತಪ್ಪಿಸಲು ಆತನನ್ನು ಗಲೀ ಕ್ಷೇತ್ರದಲ್ಲಿ ಫೀಲ್ಡಿಂಗ್ಗೆ ನಿಲ್ಲಿಸುತ್ತಿದ್ದರು.
ಆಸ್ಟ್ರೇಲಿಯ ಕಂಡಿರುವ ಶ್ರೇಷ್ಠ ನಾಯಕ ಶೇನ್ ವಾರ್ನ್. ಆತನ ಮನೋ ತಂತ್ರಗಾರಿಕೆ ಸರ್ವಶ್ರೇಷ್ಠ. ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಆತ ಒಬ್ಬ ಶೋ ಮ್ಯಾನ್ ಕೂಡ ಆಗಿದ್ದ ಮತ್ತು ಮಹೋನ್ನತ ಕ್ಷಣಗಳನ್ನು ತುಂಬಾ ಪ್ರೀತಿಸುತ್ತಿದ್ದ ಎಂದು ಮೆಕ್ ಗ್ರಾಥ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ