ಒಂದು ವೇಳೆ Delhi Capitals ನಾಯಕತ್ವ ಕೊಡುತ್ತಿದ್ದರೂ ನಾನು ಬೇಡ ಎನ್ನುತ್ತಿದ್ದೆ: ಅಕ್ಷರ್
Team Udayavani, May 20, 2023, 5:56 PM IST
ಹೊಸದಿಲ್ಲಿ: ಈ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಕೇವಲ ಹತ್ತು ಅಂಕ ಪಡೆದಿರುವ ಡೆಲ್ಲಿ ತಂಡವು ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆಡುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್ ನ ಉಪ ನಾಯಕ ಅಕ್ಷರ್ ಪಟೇಲ್ ಅವರು ಈ ಬಾರಿಯೂ ಆಲ್ ರೌಂಡ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ 13 ಪಂದ್ಯಗಳಲ್ಲಿ ಅಕ್ಷರ್ ಪಟೇಲ್ 268 ರನ್ ಗಳಿಸಿದ್ದು, 11 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ನಡುವೆ ಇಂಡಿಯನ್ ಎಕ್ಸ್ ಪ್ರೆಸ್ ಜತೆಗೆ ಮಾತನಾಡಿದ ಅಕ್ಷರ್ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಈ ಋತುವಿನಲ್ಲಿ ಹೆಣಗಾಡುತ್ತಿರುವಾಗ ನಾಯಕತ್ವದ ಬಗ್ಗೆ ನೀವು ಎಂದಾದರೂ ಪಾಂಟಿಂಗ್ ಅವರೊಂದಿಗೆ ಮಾತನಾಡಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಋತುವಿನ ಮಧ್ಯದಲ್ಲಿ ನಾನು ಹೆಚ್ಚು ಹೇಳುವುದಿಲ್ಲ. ಅವರು ನನಗೆ ನಾಯಕತ್ವ ನೀಡಿದ್ದರೂ, ನಾನು ಅದನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದರು.
ಇದನ್ನೂ ಓದಿ:ದಾಂಡೇಲಿ: ಫಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ಹೋದ ವಾಹನ ಪಲ್ಟಿ
ನಿಮ್ಮ ತಂಡವು ಇಂತಹ ಕೆಟ್ಟ ಋತುವಿನಲ್ಲಿ ಸಾಗುತ್ತಿರುವಾಗ, ಈ ರೀತಿಯ ವಿಷಯಗಳು ಅದನ್ನು ಇನ್ನಷ್ಟು ಹದಗೆಡಿಸುತ್ತವೆ. ಆಟಗಾರರು ನಾಯಕನನ್ನು ಬೆಂಬಲಿಸಬೇಕು. ಋತುವಿನ ಮಧ್ಯದಲ್ಲಿ ನೀವು ನಾಯಕತ್ವವನ್ನು ಬದಲಾಯಿಸಿದರೆ ಅದು ಉತ್ತಮ ಸಂದೇಶವನ್ನು ನೀಡುವುದಿಲ್ಲ ಎಂದು ಅಕ್ಷರ್ ಪಟೇಲ್ ಹೇಳಿದರು.
ನಾನು ನಾಯಕನಾಗಿದ್ದರೂ ಪರಿಸ್ಥಿತಿ ಹಾಗೆಯೇ ಇರಬಹುದಿತ್ತು. ನಾವು ತಂಡವಾಗಿ ಸಾಮೂಹಿಕವಾಗಿ ವಿಫಲರಾಗಿದ್ದೇವೆ. ಕೇವಲ ನೀವು ನಾಯಕನನ್ನು ದೂಷಿಸಲು ಸಾಧ್ಯವಿಲ್ಲ ಎಂದರು.
ನಾನು ನಾಯಕತ್ವದ ಬಗ್ಗೆ ಎಂದಿಗೂ ಚಾಟ್ ಮಾಡಿಲ್ಲ, ಆದರೆ ನಾನು ನಾಯಕನಾದರೆ, ಋತುವಿನ ಮಧ್ಯದಲ್ಲಿ ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಹಾಳುಮಾಡಲು ನಾನು ಬಯಸುವುದಿಲ್ಲ ಎಂದು ಅಕ್ಷರ್ ಪಟೇಲ್ ಸ್ಪಷ್ಟವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ