ಸರ್ವಾಂಗೀಣ ಆಟದ ಪ್ರದರ್ಶನ : ಭಾರತ ಸೆಮಿಫೈನಲಿಗೆ


Team Udayavani, Jun 12, 2017, 12:56 AM IST

India-Win-11-6.jpg

ಲಂಡನ್‌: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಭಾರತ ತಂಡವು ರವಿವಾರ ನಡೆದ ನಿರ್ಣಾಯಕ ಹೋರಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‌ಗಳಿಂದ ಅಧಿಕಾರಯುತವಾಗಿ ಸೋಲಿಸಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಸೆಮಿಫೈನಲಿಗೇರಿತು. ಗುರುವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ. ಶಿಸ್ತುಬದ್ಧವಾದ ಬೌಲಿಂಗ್‌ ನಿರ್ವಹಣೆಯ ಜತೆ ಅಮೋಘ ಫೀಲ್ಡಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತವು ಪಂದ್ಯದ ಪ್ರತಿಯೊಂದು ವಿಭಾಗದಲ್ಲಿ ಮೇಲುಗೈ ಸಾಧಿಸಿ ಗೆಲುವಿನ ಸಂಭ್ರಮ ಆಚರಿಸಿತು. ದಕ್ಷಿಣ ಆಫ್ರಿಕಾ ಉತ್ತಮ ಆರಂಭ ಪಡೆದರೂ ಭಾರತದ ನಿಖರ ದಾಳಿಗೆ ತುತ್ತಾಗಿ 44.3 ಓವರ್‌ಗಳಲ್ಲಿ 191 ರನ್ನಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಎಚ್ಚರಿಕೆಯ ಆಟವಾಡಿದ ಭಾರತವು ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಅವರ ಶತಕದ ಜತೆಯಾಟದಿಂದಾಗಿ 38 ಓವರ್‌ಗಳಲ್ಲಿಯೇ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. 

ಹರಿಣಗಳ ದಾಳಿಯನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದ ಧವನ್‌ ಮತ್ತು ಕೊಹ್ಲಿ ನಿಧಾನವಾಗಿ ರನ್‌ ಪೇರಿಸತೊಡಗಿದರು. ಮತ್ತೆ ಬಿರುಸಿನಿಂದ ಆಡಿ ರನ್‌ ವೇಗ ಹೆಚ್ಚಿಸಿದರು. ದ್ವಿತೀಯ ವಿಕೆಟಿಗೆ 128 ರನ್ನುಗಳ ಜತೆಯಾಟ ನಡೆಸಿ ಗೆಲುವು ಖಚಿತಪಡಿಸಿದರು. 83 ಎಸೆತ ಎದುರಿಸಿದ ಅವರು 12 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 78 ರನ್‌ ಗಳಿಸಿ ಔಟಾದರು. ಆಬಳಿಕ ಕೊಹ್ಲಿ ಮತ್ತು ಯುವರಾಜ್‌ ಬಿರುಸಿನ ಆಟವಾಡಿ ಬೇಗನೇ ಗೆಲುವು ಸಾರಿದರು. 101 ಎಸೆತ ಎದುರಿಸಿದ ಕೊಹ್ಲಿ 7 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 76 ರನ್‌ ಗಳಿಸಿ ಅಜೇಯರಾಗಿ ಉಳಿದರೆ ಯುವರಾಜ್‌ 25 ಎಸೆತಗಳಿಂದ 23 ರನ್‌ ಹೊಡೆದರು.

ಹಠಾತ್‌ ಕುಸಿತ

ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌ ಮತ್ತು ಹಾಶಿಮ್‌ ಆಮ್ಲ ಅವರು ತಾಳ್ಮೆಯಿಂದ ಆಡಿ 17.3 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 76 ರನ್‌ ಪೇರಿಸಿದರು. ಈ ಹಂತದಲ್ಲಿ 35 ರನ್‌ ಗಳಿಸಿದ ಆಮ್ಲ ಅವರು ಅಶ್ವಿ‌ನ್‌ಗೆ ಬಲಿಯಾದರು. ಕಾಕ್‌ ಮತ್ತು ಪ್ಲೆಸಿಸ್‌ ಕೂಡ ಉತ್ತಮ ಜತೆಯಾಟದ ಆಟಕ್ಕೆ ಪ್ರಯತ್ನಿಸಿದರು. ದ್ವಿತೀಯ ವಿಕೆಟಿಗೆ ಅವರಿಬ್ಬರು 40 ರನ್‌ ಒಟ್ಟುಗೂಡಿಸಿದರು. 

ವಿಶ್ವದ ನಂಬರ್‌ ವನ್‌ ತಂಡವೆನಿಸಿದ ದಕ್ಷಿಣ ಆಫ್ರಿಕಾ 51 ರನ್‌ ಅಂತರದಲ್ಲಿ ಅಂತಿಮ ಎಂಟು ವಿಕೆಟ್‌ ಕಳೆದುಕೊಂಡು ಒದ್ದಾಡಿತು. ಒಂದು ಹಂತದಲ್ಲಿ ಒಂದು ವಿಕೆಟಿಗೆ 116 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ದಕ್ಷಿಣ ಆಫ್ರಿಕಾ 44.3 ಓವರ್‌ಗಳಲ್ಲಿ ಸರ್ವಪತನ ಕಂಡಿತು. ನಿರ್ಣಾಯಕ ಹಂತದಲ್ಲಿ ಕುಸಿಯುವ ಪರಿಪಾಠವನ್ನು ಇಲ್ಲಿಯೂ ಮುಂದುವರಿಸಿತು. ಆರು ಎಸೆತಗಳ ಅಂತರದಲ್ಲಿ ನಾಯಕ ಎಬಿ ಡಿ’ವಿಲಿಯರ್ ಮತ್ತು ಡೇವಿಡ್‌ ಮಿಲ್ಲರ್‌ ರನೌಟ್‌ ಆಗಿರುವುದು ತಂಡದ ಕುಸಿತಕ್ಕೆ ಪ್ರಮುಖ ಕಾರಣವಾಯಿತು. ಆ ಬಳಿಕ ಕುಸಿಯುತ್ತಲೇ ಹೋದ ತಂಡ 191 ರನ್ನಿಗೆ ಆಲೌಟಾಯಿತು. 141 ರನ್‌ ನೀಡದ ಎಸೆತ ಎಸೆದ ಭಾರತ ದಕ್ಷಿಣ ಆಫ್ರಿಕಾದ ರನ್‌ ಕುಸಿತಕ್ಕೆ ಕಾರಣವಾಯಿತು. ಇದು 23.3 ಮೇಡನ್‌ ಓವರ್‌ಗೆ ಸಮವಾಗಿದೆ. 11ರಿಂದ 40 ಓವರ್‌ ನಡುವಣ ದ್ವಿತೀಯ ಪವರ್‌ಪ್ಲೇ ವೇಳೆ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಆರು ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. 

ಸ್ಕೋರ್‌ಪಟ್ಟಿ
ದಕ್ಷಿಣ ಆಫ್ರಿಕಾ

ಕ್ವಿಂಟನ್‌ ಡಿ ಕಾಕ್‌    ಬಿ ಜಡೇಜ    53
ಹಾಶಿಮ್‌ ಆಮ್ಲ    ಸಿ ಧೋನಿ ಬಿ ಅಶ್ವಿ‌ನ್‌    35
ಫಾ ಡು ಪ್ಲೆಸಿಸ್‌    ಬಿ ಪಾಂಡ್ಯ    36
ಎಬಿ ಡಿ’ವಿಲಿಯರ್    ರನೌಟ್‌    16
ಡೇವಿಡ್‌ ಮಿಲ್ಲರ್‌    ರನೌಟ್‌    1
ಜಿಪಿ ಡ್ಯುಮಿನಿ    ಔಟಾಗದೆ    20
ಕ್ರಿಸ್‌ ಮೊರಿಸ್‌    ಸಿ ಕುಮಾರ್‌ ಬಿ ಬುಮ್ರಾ    4
ಎ. ಪೆಹ್ಲುಕ್ವಾಯೊ    ಎಲ್‌ಬಿಡಬ್ಲ್ಯು ಬಿ ಬುಮ್ರಾ    4
ಕಾಗಿಸೊ ರಬಾಡ    ಸಿ ಧೋನಿ ಬಿ ಕುಮಾರ್‌    5
ಮಾರ್ನೆ ಮಾರ್ಕೆಲ್‌    ಸಿ ಕೊಹ್ಲಿ ಬಿ ಕುಮಾರ್‌    0
ಇಮ್ರಾನ್‌ ತಾಹಿರ್‌    ರನೌಟ್‌    1

ಇತರ:    16
ಒಟ್ಟು (44.3 ಓವರ್‌ಗಳಲ್ಲಿ ಆಲೌಟ್‌)    191

ವಿಕೆಟ್‌ ಪತನ: 1-76, 2-116, 3-140, 4-142, 5-157, 6-167, 7-178, 8-184, 9-184

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    7.3-0-23-2
ಜಸ್‌ಪ್ರೀತ್‌ ಬುಮ್ರಾ    8-0-28-2
ಆರ್‌. ಅಶ್ವಿ‌ನ್‌        9-0-43-1
ಹಾರ್ದಿಕ್‌ ಪಾಂಡ್ಯ        10-0-52-1
ರವೀಂದ್ರ ಜಡೇಜ        10-0-39-1

ಭಾರತ
ರೋಹಿತ್‌ ಶರ್ಮ    ಸಿ ಕಾಕ್‌ ಬಿ ಮಾರ್ಕೆಲ್‌    12
ಶಿಖರ್‌ ಧವನ್‌    ಸಿ ಪ್ಲೆಸಿಸ್‌ ಬಿ ತಾಹಿರ್‌    78
ವಿರಾಟ್‌ ಕೊಹ್ಲಿ    ಔಟಾಗದೆ    76
ಯುವರಾಜ್‌ ಸಿಂಗ್‌    ಔಟಾಗದೆ    23

ಇತರ:    4
ಒಟ್ಟು (38 ಓವರ್‌ಗಳಲ್ಲಿ 2 ವಿಕೆಟಿಗೆ)    193

ವಿಕೆಟ್‌ ಪತನ: 1-23, 2-151

ಬೌಲಿಂಗ್‌:
ಕಾಗಿಸೊ ರಬಾಡ        9-2-34-0
ಮಾರ್ನೆ ಮಾರ್ಕೆಲ್‌    7-1-38-1
ಆ್ಯಂಡಿಲೆ ಪೆಹ್ಲುಕ್ವಾಯೊ    5-0-25-0
ಕ್ರಿಸ್‌ ಮೊರಿಸ್‌        8-0-40-0
ಇಮ್ರಾನ್‌ ತಾಹಿರ್‌        6-0-37-1
ಜೀನ್‌ಪಾಲ್‌ ಡ್ಯುಮಿನಿ    3-0-17-0

ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.