ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ವಿರಾಟ್‌ ಕೊಹ್ಲಿ ನಂ.1


Team Udayavani, Aug 6, 2018, 6:00 AM IST

icc-ranking-vk.jpg

ಹೊಸದಿಲ್ಲಿ: ಎಜ್‌ಬಾಸ್ಟನ್‌ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಮೊದಲ ಬಾರಿಗೆ ವಿಶ್ವದ ನಂಬರ್‌ ವನ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಮೂಡಿಬಂದಿದ್ದಾರೆ. 2011ರಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಈ ಎತ್ತರ ತಲುಪಿದ ಬಳಿಕ ಭಾರತೀಯ ಬ್ಯಾಟ್ಸ್‌ಮನ್‌ ಓರ್ವ ವಿಶ್ವದ ಅಗ್ರಮಾನ್ಯ ಟೆಸ್ಟ್‌ ಬ್ಯಾಟ್ಸ್‌ಮನ್‌ ಎನಿಸಿದ್ದು ಇದೇ ಮೊದಲು. ಕೊಹ್ಲಿ ಈ ರೇಸ್‌ನಲ್ಲಿ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರನ್ನು ಹಿಂದಿಕ್ಕಿದರು.

ನೂತನ ರ್‍ಯಾಂಕಿಂಗ್‌ ಯಾದಿಯನ್ನು ಐಸಿಸಿ ರವಿವಾರ ಬಿಡುಗಡೆಗೊಳಿಸಿತು. ಇದರಲ್ಲಿ ಕೊಹ್ಲಿ 934 ಅಂಕ ಹೊಂದಿದ್ದರೆ, ಸ್ಮಿತ್‌ 929ರಲ್ಲಿದ್ದಾರೆ. ಕೊಹ್ಲಿ ನಂ.1 ಟೆಸ್ಟ್‌ ಬ್ಯಾಟ್ಸ್‌ಮನ್‌ ಗೌರವ ಒಲಿಸಿಕೊಂಡ ಭಾರತದ 7ನೇ ಕ್ರಿಕೆಟಿಗ. ಉಳಿದವರೆಂದರೆ ಸುನೀಲ್‌ ಗಾವಸ್ಕರ್‌, ದಿಲೀಪ್‌ ವೆಂಗ್‌ಸರ್ಕಾರ್‌, ಸಚಿನ್‌ ತೆಂಡುಲ್ಕರ್‌, ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹವಾಗ್‌ ಮತ್ತು ಗೌತಮ್‌ ಗಂಭೀರ್‌.ಸ್ಟೀವನ್‌ ಸ್ಮಿತ್‌ 2015ರ ಡಿಸೆಂಬರ್‌ ಬಳಿಕ ವಿಶ್ವದ ಟಾಪ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಆಗಿ ಉಳಿದಿದ್ದರು. ಸದ್ಯ ಬಾಲ್‌ ಟ್ಯಾಂಪರಿಂಗ್‌ ಹಗರಣದಲ್ಲಿ ಸಿಲುಕಿಕೊಂಡು ನಿಷೇಧಕ್ಕೊಳಗಾಗಿದ್ದಾರೆ.

ಕೊಹ್ಲಿ ಮುಂದೆ ಇನ್ನಷ್ಟು ಅವಕಾಶ
ಎಜ್‌ಬಾಸ್ಟನ್‌ ಟೆಸ್ಟ್‌ನಲ್ಲಿ ಒಂದು ಶತಕ ಹಾಗೂ ಅರ್ಧ ಶತಕ ಸಹಿತ ಒಟ್ಟು 200 ರನ್‌ ಪೇರಿಸಿದ್ದು ವಿರಾಟ್‌ ಕೊಹ್ಲಿಗೆ ಲಾಭವಾಗಿ ಪರಿಣಮಿಸಿತು. ಈ ಟೆಸ್ಟ್‌ ಪಂದ್ಯಕ್ಕೂ ಮೊದಲು 903 ಅಂಕ ಗಳಿಸಿದ್ದರು. ಅಂದರೆ ಗಾವಸ್ಕರ್‌ಗಿಂತ 13 ಅಂಕ ಹಿಂದಿದ್ದರು. ಈಗ ಗಾವಸ್ಕರ್‌ಗಿಂತ 18 ಅಂಕಗಳ ಮುನ್ನಡೆಯಲ್ಲಿದ್ದಾರೆ.

ಉಳಿದ 4 ಟೆಸ್ಟ್‌ಗಳಲ್ಲಿ ಇದೇ ಫಾರ್ಮ್ ಮುಂದುವರಿಸಿದರೆ ಕೊಹ್ಲಿ ಇನ್ನಷ್ಟು ಮೈಲಿಗಲ್ಲು ನೆಡುವ ಅವಕಾಶ ಹೊಂದಿದ್ದಾರೆ. ಸದ್ಯ ಕೊಹ್ಲಿ 934 ಅಂಕ ಹೊಂದಿದ್ದಾರೆ. ಇದು ಭಾರತೀಯ ಬ್ಯಾಟ್ಸ್‌ಮನ್‌ ಓರ್ವ ಗಳಿಸಿದ ಸರ್ವಾಧಿಕ ಅಂಕವಾದರೆ, ವಿಶ್ವ ಮಟ್ಟದ 14ನೇ ಅತ್ಯುತ್ತಮ ಸಾಧನೆ. ಲಾರ್ಡ್ಸ್‌ನಲ್ಲೂ ಮಿಂಚಿದರೆ ಒಟ್ಟು ಅಂಕ ಗಳಿಕೆಯಲ್ಲಿ ಟಾಪ್‌-10 ಯಾದಿಯನ್ನು ಪ್ರವೇಶಿಸುವ ಉಜ್ವಲ ಅವಕಾಶವೊಂದು ಕೊಹ್ಲಿ ಮುಂದಿದೆ. ಆಗ ಅವರು ಮ್ಯಾಥ್ಯೂ ಹೇಡನ್‌, ಜಾಕ್‌ ಕ್ಯಾಲಿಸ್‌, ಎಬಿ ಡಿ ವಿಲಿಯರ್ ಅವರನ್ನೆಲ್ಲ ಹಿಂದಿಕ್ಕಬಹುದು. ಇವರೆಲ್ಲರೂ ತಮ್ಮ ಟೆಸ್ಟ್‌ ಪಾರಮದ್ಯದ ವೇಳೆ ಗರಿಷ್ಠ 935 ಅಂಕ ಸಂಪಾದಿಸಿದ್ದರು. ಈ ಯಾದಿಯ ಅಗ್ರಸ್ಥಾನದಲ್ಲಿರುವ ಇಬ್ಬರು ಬ್ಯಾಟ್ಸ್‌ಮನ್‌ಗಳೆಂದರೆ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ (961) ಮತ್ತು ಸ್ಟೀವನ್‌ ಸ್ಮಿತ್‌ (947).

ಟಾಪ್‌-10 ಬ್ಯಾಟ್ಸ್‌ಮನ್‌
1. ವಿರಾಟ್‌ ಕೊಹ್ಲಿ    934
2. ಸ್ಟೀವನ್‌ ಸ್ಮಿತ್‌    929
3. ಜೋ ರೂಟ್‌    865
4. ಕೇನ್‌ ವಿಲಿಯಮ್ಸನ್‌    847
5. ಡೇವಿಡ್‌ ವಾರ್ನರ್‌    820
6. ಚೇತೇಶ್ವರ್‌ ಪೂಜಾರ    791
7. ದಿಮುತ್‌ ಕರುಣರತ್ನೆ    754
8. ದಿನೇಶ್‌ ಚಂಡಿಮಾಲ್‌    733
9. ಡೀನ್‌ ಎಲ್ಗರ್‌    724
10. ಐಡನ್‌ ಮಾರ್ಕ್‌ರಮ್‌    703

ಟಾಪ್‌-10 ಬೌಲರ್
1. ಜೇಮ್ಸ್‌ ಆ್ಯಂಡರ್ಸನ್‌    884
2. ಕಾಗಿಸೊ ರಬಾಡ    882
3. ರವೀಂದ್ರ ಜಡೇಜ    857
4. ವೆರ್ನನ್‌ ಫಿಲಾಂಡರ್‌    826
5. ಆರ್‌. ಅಶ್ವಿ‌ನ್‌    825
6. ಪ್ಯಾಟ್‌ ಕಮಿನ್ಸ್‌    800
7. ಟ್ರೆಂಟ್‌ ಬೌಲ್ಟ್    795
8. ರಂಗನ ಹೆರಾತ್‌    791
9. ನೀಲ್‌ ವ್ಯಾಗ್ನರ್‌    765
10. ಜೋಶ್‌ ಹ್ಯಾಝಲ್‌ವುಡ್‌    759

ಟಾಪ್ ನ್ಯೂಸ್

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.