ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಭಾರತ ಸೆಮಿಫೈನಲಿಗೆ


Team Udayavani, Jul 16, 2017, 3:55 AM IST

semifinal.jpg

ಡರ್ಬಿ: ನಿರ್ಣಾಯಕ ಲೀಗ್‌ ಪಂದ್ಯದಲ್ಲಿ ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತವು ನ್ಯೂಜಿಲ್ಯಾಂಡ್‌ ತಂಡವನ್ನು 186 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಸೆಮಿಫೈನಲ್‌ ಹಂತಕ್ಕೇರಿದೆ. 
ಮಿಥಾಲಿ ರಾಜ್‌ ಅವರ ಶತಕ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಅವರ ಅರ್ಧಶತಕದಿಂದಾಗಿ ಭಾರತ 7 ವಿಕೆಟಿಗೆ 265 ರನ್ನುಗಳ ಉತ್ತಮ ಮೊತ್ತ ಪೇರಿಸಿದರೆ ರಾಜೇಶ್ವರಿ ಗಾಯಕ್‌ವಾಡ್‌ ದಾಳಿಗೆ ನೆಲಕಚ್ಚಿದ ನ್ಯೂಜಿಲ್ಯಾಂಡ್‌ 25.3 ಓವರ್‌ಗಳಲ್ಲಿ ಕೇವಲ 79 ರನ್ನಿಗೆ ಆಲೌಟಾಗಿ ಶರಣಾಯಿತು. ಈ ಗೆಲುವಿನಿಂದ ಭಾರತ ಒಟ್ಟು 10 ಅಂಕ ಗಳಿಸಿ ಸೆಮಿಫೈನಲಿಗೇರಿತು. ತನ್ನ 7.3 ಓವರ್‌ಗಳ ದಾಳಿಯಲ್ಲಿ ಗಾಯಕ್‌ವಾಡ್‌ 15 ರನ್ನಿಗೆ 5 ವಿಕೆಟ್‌ ಕಿತ್ತು ಭಾರತದ ಬೃಹತ್‌ ಅಂತರದ ಗೆಲುವಿಗೆ ಕಾರಣರಾದರು.

ಮಿಥಾಲಿ ರಾಜ್‌ ಶತಕ
ಭಾರತದ ಬೃಹತ್‌ ಮೊತ್ತಕ್ಕೆ ಕಾರಣವಾದದ್ದು ನಾಯಕಿ ಮಿಥಾಲಿ ರಾಜ್‌ ಅವರ ಆಕರ್ಷಕ ಶತಕ, ವೇದಾ ಕೃಷ್ಣಮೂರ್ತಿ ಅವರ ಬಿರುಸಿನ ಬ್ಯಾಟಿಂಗ್‌ ಹಾಗೂ ಉಪನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರ ಜವಾಬ್ದಾರಿಯುತ ಆಟ. 

184ನೇ ಏಕದಿನ ಪಂದ್ಯ ಆಡಲಿಳಿದ ಮಿಥಾಲಿ ರಾಜ್‌ 109 ರನ್‌ ಬಾರಿಸಿ (123 ಎಸೆತ, 11 ಬೌಂಡರಿ) “ನಾಯಕಿಯ ಆಟ’ಕ್ಕೆ ಅಮೋಘ ದೃಷ್ಟಾಂತ ಒದಗಿಸಿದರು. ಇದು ಮಿಥಾಲಿ ದಾಖಲಿಸಿದ 6ನೇ ಶತಕ. 2014ರ ಬಳಿಕ ಮೊದಲನೆಯದು. ಹರ್ಮನ್‌ಪ್ರೀತ್‌ ಕೌರ್‌ 90 ಎಸೆತಗಳಿಂದ 70 ರನ್‌ ಹೊಡೆದರು (7 ಬೌಂಡರಿ). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 132 ರನ್‌ ಒಟ್ಟುಗೂಡಿತು. 

ಕೌರ್‌ ಹಾಗೂ ದೀಪ್ತಿ ಶರ್ಮ (0) ಒಟ್ಟೊಟ್ಟಿಗೇ ನಿರ್ಗಮಿಸಿದ ಬಳಿಕ ಕ್ರೀಸ್‌ ಇಳಿದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಸಿಡಿಲಬ್ಬರದ ಆಟಕ್ಕೆ ಮುಂದಾದರು. ಕೇವಲ 45 ಎಸೆತಗಳಿಂದ 70 ರನ್‌ ಸಿಡಿಸಿ ಭಾರತದ ಮೊತ್ತವನ್ನು 265ಕ್ಕೆ ಏರಿಸಿದರು. ವೇದಾ ಬ್ಯಾಟಿಂಗ್‌ ವೇಳೆ 7 ಬೌಂಡರಿ ಹಾಗೂ 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಮಿಥಾಲಿ-ವೇದಾ 5ನೇ ವಿಕೆಟ್‌ ಜತೆಯಾಟದಲ್ಲಿ ಕೇವಲ 13 ಓವರ್‌ಗಳಿಂದ 108 ರನ್‌ ಸೂರೆಗೈದದ್ದು ಭಾರತದ ಸರದಿಯ ಆಕರ್ಷಣೀಯ ಹಂತವಾಗಿತ್ತು.

ಎಂದಿನಂತೆ ಈ ಮಹತ್ವದ ಪಂದ್ಯದಲ್ಲೂ ಭಾರತದ ಆರಂಭ ಕೈಕೊಟ್ಟಿತ್ತು. ಸ್ಮತಿ ಮಂಧನಾ (4) ಅವರ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪೂನಂ ರಾವತ್‌ 13 ರನ್ನಿಗೆ ಆಟ ಮುಗಿಸಿದ್ದರು. ಹೀಗೆ ಆರಂಭಿಕರಿಬ್ಬರೂ 21 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಾಗ ಭಾರತದ ಮೇಲೆ ಆತಂಕದ ಕಾರ್ಮೋಡ ಆವರಿಸಿತು. ಆದರೆ ಪಂದ್ಯದ ನಡುವೆ ಸುರಿದ ಮಳೆ ಕೂಡಲೇ ನಿಂತಂತೆ ಈ ಆತಂಕ ಕೂಡ ಬಿಟ್ಟುಹೋಯಿತು. ಅಂತಿಮ ಓವರಿನಲ್ಲಿ 3 ವಿಕೆಟ್‌ ಬಿದ್ದರೂ ಇದರಿಂದ ಭಾರೀ ಹಾನಿ ಆಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌ 
ಭಾರತ-7 ವಿಕೆಟಿಗೆ 265 (ಮಿಥಾಲಿ 109, ವೇದಾ 70, ಹರ್ಮನ್‌ಪ್ರೀತ್‌ 60, ಕಾಸ್ಪೆರೆಕ್‌ 45ಕ್ಕೆ 3, ರೋವ್‌ 30ಕ್ಕೆ 2). ನ್ಯೂಜಿಲ್ಯಾಂಡ್‌-25.3 ಓವರ್‌ಗಳಲ್ಲಿ 79 ಆಲೌಟ್‌ (ಆ್ಯಮಿ ಸ್ಯಾಟರ್‌ವೆàಟ್‌ 26, ರಾಜೇಶ್ವರಿ ಗಾಯಕ್‌ವಾಡ್‌ 15ಕ್ಕೆ 5, ದೀಪ್ತಿ ಶರ್ಮ 26ಕ್ಕೆ 2).

ಟಾಪ್ ನ್ಯೂಸ್

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewq

Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.