WTC Final;ಹೇಗಿದ್ದೀತು ಓವಲ್‌ ಟ್ರ್ಯಾಕ್‌? ಟೆಸ್ಟ್‌  ಫೈನಲ್‌ ಗೂ ಮುನ್ನ ಒಂದು ಕುತೂಹಲ

ನಾಳೆಯಿಂದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌

Team Udayavani, Jun 6, 2023, 8:00 AM IST

WTC Final 2023;ಹೇಗಿದ್ದೀತು ಓವಲ್‌ ಟ್ರ್ಯಾಕ್‌? ಟೆಸ್ಟ್‌  ಫೈನಲ್‌ ಗೂ  ಮುನ್ನ ಒಂದು ಕುತೂಹಲ

ಲಂಡನ್‌: ಇನ್ನೊಂದೇ ದಿನ ಬಾಕಿ. ಐತಿಹಾಸಿಕವೂ, ಲಂಡನ್‌ನ ಅತ್ಯಂತ ಪುರಾತನವೂ ಆದ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಭಾರತ-ಆಸ್ಟ್ರೇಲಿಯ ತಂಡಗಳು ದ್ವಿತೀಯ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಖಾಮುಖೀ ಆಗಲಿವೆ.

ಎಲ್ಲರ ಕುತೂಹಲವೂ ಒಂದೇ, ಓವಲ್‌ ಪಿಚ್‌ ಹೇಗೆ ವರ್ತಿಸೀತು ಎಂದು. ಏಕೆಂದರೆ 140 ವರ್ಷಗಳ ಇತಿ ಹಾಸವುಳ್ಳ ದಕ್ಷಿಣ ಲಂಡನ್‌ನ ಈ ಓವಲ್‌ ಅಂಗಳದಲ್ಲಿ ಜೂನ್‌ ತಿಂಗಳಲ್ಲಿ ಟೆಸ್ಟ್‌ ಪಂದ್ಯವೊಂದು ನಡೆಯಿತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಇಲ್ಲಿ ಪ್ರವಾಸಿ ತಂಡಗಳಿಗೆ ಸರಣಿಯ ಕೊನೆಯ ಟೆಸ್ಟ್‌ ಪಂದ್ಯವನ್ನು ಇರಿಸುವುದು ವಾಡಿಕೆ. ಇದು ಆಗಸ್ಟ್‌ ಕೊನೆಯಲ್ಲಿ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ನಡೆಯುತ್ತದೆ. ಆಗ ಇಲ್ಲಿನ ಪಿಚ್‌ ಸಂಪೂರ್ಣ ಒಣಗಿರುತ್ತದೆ. ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

ಟೀಮ್‌ ಇಂಡಿಯಾ ಆಟಗಾರರು ಇಲ್ಲಿಗೆ ಕಾಲಿಟ್ಟಾಗ ಸ್ವಾಗತಿಸಿದ್ದು ಹಸಿರು ಹುಲ್ಲಿನ ತಾಜಾ ಪಿಚ್‌. ಇದು ಹೇಗೆ ವರ್ತಿಸಬಹುದೆಂಬುದು ಸದ್ಯಕ್ಕೆ ಸಸ್ಪೆನ್ಸ್‌. ಈಗಿನ ಲೆಕ್ಕಾಚಾರದ ಪ್ರಕಾರ ಇದೊಂದು “ಮಿಸ್ಟರಿ ಪಿಚ್‌’. ಇಂಗ್ಲೆಂಡ್‌ ನ‌ಲ್ಲಿ ಸ್ಪಿನ್‌ ದಾಳಿಗೆ ಸಹಕರಿಸುವ ಏಕೈಕ ಪಿಚ್‌ ಕೂಡ ಹೌದು.

ಅವಳಿ ಸ್ಪಿನ್‌ ದಾಳಿ
ಇದನ್ನು ಗಮನಿಸಿಯೇ ಇಂಗ್ಲೆಂಡ್‌ನ‌ ಮಾಜಿ ಸ್ಪಿನ್ನರ್‌, ಭಾರತೀಯ ಮೂಲದ ಮಾಂಟಿ ಪನೆಸರ್‌, ಭಾರತವಿಲ್ಲಿ ಅವಳಿ ಸ್ಪಿನ್ನರ್‌ಗಳನ್ನು ಆಡಿಸುವುದು ಉತ್ತಮ ಎಂದಿದ್ದಾರೆ. ಈ ಸ್ಪಿನ್ನರ್‌ಗಳನ್ನೂ ಅವರಿಲ್ಲಿ ಹೆಸರಿಸಿದ್ದಾರೆ-ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ.

“ಇಂಗ್ಲೆಂಡ್‌ನ‌ಲ್ಲಿ ಸ್ಪಿನ್ನಿಗೆ ಹೆಚ್ಚಿನ ನೆರವು ನೀಡುವ ಏಕೈಕ ಅಂಗಳ ವೆಂದರೆ ಅದು ಓವಲ್‌. ನನ್ನ ಪ್ರಕಾರ ಇದೊಂದು ಫ್ಲ್ಯಾಟ್‌ ಟ್ರ್ಯಾಕ್‌. ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಿದ್ದೇ ಆದರೆ ಭಾರತಕ್ಕೆ ಈ ಪಿಚ್‌ ಲಾಭ ತರಲಿದೆ. ಆಸ್ಟ್ರೇಲಿಯ ಆಟಗಾರರು ಸ್ಪಿನ್ನರ್‌ಗಳಿಗೆ, ಅದರಲ್ಲೂ ಭಾರತದ ಸ್ಪಿನ್ನರ್‌ಗಳಿಗೆ ಪರದಾಡುವುದನ್ನು ನೋಡಿದ್ದೇವೆ’ ಎಂಬುದಾಗಿ ಮಾಂಟಿ ಪನೆಸರ್‌ ಪಿಟಿಐಗೆ ನೀಡಿದ ಸಂದರ್ಶನ
ದಲ್ಲಿ ಹೇಳಿದ್ದಾರೆ.

ಆದರೆ ಎರಡು ವರ್ಷಗಳ ಹಿಂದಿನ ವಿಶ್ವಕಪ್‌ ಟೆಸ್ಟ್‌ ಫೈನಲ್‌ನಲ್ಲಿ ಭಾರತದ ಅವಳಿ ಸ್ಪಿನ್‌ ಪ್ರಯೋಗ ಯಶಸ್ಸು ಕಾಣಲಿಲ್ಲ ಎಂದೂ ಪನೆಸರ್‌ಗೆ ನೆನಪಿಸಲಾಯಿತು. “ಅದು ನಿಜ, ಆದರೆ ಓವಲ್‌ ವಾತಾವರಣದಲ್ಲಿ ಇದು ಯಶಸ್ವಿಯಾಗಲಿದೆ’ ಎಂದರು.

“ಓವಲ್‌ ವಾತಾವರಣ ಅತ್ಯಂತ ಬಿಸಿಯಾಗಿದೆ. ಕಳೆದ ಟಿ20 ಬ್ಲಾಸ್ಟ್‌ ಟೂರ್ನಿಯ ವೇಳೆ ಇಲ್ಲಿ ಚೆಂಡು ತಿರುವು ಪಡೆದುದನ್ನು ಗಮನಿಸಿದ್ದೇವೆ. ಆದರೆ ಈ ಬಾರಿ ಹುಲ್ಲನ್ನು ಕತ್ತರಿಸಿಲ್ಲ. ಬಹುಶಃ ಟೆಸ್ಟ್‌ ಫೈನಲ್‌ ನಾಲ್ಕೇ ದಿನದಲ್ಲಿ ಮುಗಿಯಬಾರದು ಎಂಬುದು ಇದರ ಉದ್ದೇಶ ಆಗಿರಬಹುದು’ ಎಂಬುದಾಗಿ ಪನೆಸರ್‌ ಹೇಳಿದರು.

ಭಾರತದ ಸೀಮ್‌ ಬೌಲಿಂಗ್‌ ಕಾಂಬಿನೇಶನ್‌ ಬಗ್ಗೆ ಮಾತಾಡಿದ ಪನೆಸರ್‌, ಶಾದೂìಲ್‌ ಠಾಕೂರ್‌ಗಿಂತ ಉಮೇಶ್‌ ಯಾದವ್‌ ಅತ್ಯುತ್ತಮ ಆಯ್ಕೆ ಆಗಬಲ್ಲದು ಎಂದರು. ಜಡೇಜ ಮತ್ತು ಅಶ್ವಿ‌ನ್‌ ಬ್ಯಾಟಿಂಗ್‌ ಕೂಡ ಮಾಡುವುದರಿಂದ ಠಾಕೂರ್‌ ಅಗತ್ಯ ಕಂಡುಬರದು. ಇಲ್ಲಿ ಯಾದವ್‌ ಅವರ ಅನುಭವ ನೆರವಿಗೆ ಬರಲಿದೆ ಎಂದರು. ಮೊಹಮ್ಮದ್‌ ಶಮಿ ಮತ್ತು ಮೊಹಮ್ಮದ್‌ ಸಿರಾಜ್‌ ಉಳಿದಿಬ್ಬರು ವೇಗಿಗಳು.

ಬ್ಯಾಟಿಂಗ್‌ ಕಾಂಬಿನೇಶನ್‌
ಓವಲ್‌ ಬ್ಯಾಟಿಂಗ್‌ ವಿಷಯಕ್ಕೆ ಬರುವುದಾದರೆ, ಇಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ರನ್‌ 269. ದ್ವಿತೀಯ ಇನ್ನಿಂಗ್ಸ್‌ ವೇಳೆ ಇದು 280ಕ್ಕೆ ಏರುತ್ತದೆ. 3ನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ 326ಕ್ಕೆ ತಲುಪುತ್ತದೆ. ಇದನ್ನು ಗಮನಿಸುವಾಗ, ದಿನಗಳೆದಂತೆ ಓವಲ್‌ ಅಂಗಳದಲ್ಲಿ ಬ್ಯಾಟಿಂಗ್‌ ಸುಲಭ ಎಂಬುದು ಅರಿವಾಗುತ್ತದೆ.

“ಭಾರತದ ಟಾಪ್‌ ಆರ್ಡರ್‌ ಲೈನಪ್‌ ಉತ್ತಮ ಫಾರ್ಮ್ನಲ್ಲಿದೆ. ಇಂಗ್ಲೆಂಡ್‌ ಕೌಂಟಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತ ಬಂದಿರುವ ಚೇತೇಶ್ವರ್‌ ಪೂಜಾರ ಅವರಿಂದ ಲಾಭ ಖಂಡಿತ. ಇವರು ನಿಂತು ಆಡಿದರೆ, ಉಳಿದವರು ತುಸು ವೇಗದಿಂದ ಬ್ಯಾಟಿಂಗ್‌ ನಡೆಸಬಹುದಾಗಿದೆ’ ಎಂದು ಪನೆಸರ್‌ ಅಭಿಪ್ರಾಯಪಟ್ಟರು.

 

ಟಾಪ್ ನ್ಯೂಸ್

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Sapta Sagaradaache Ello second part release postponed; Side 1 came to OTT

Sapta Sagaradaache Ello ಎರಡನೇ ಭಾಗ ಬಿಡುಗಡೆ ಮುಂದಕ್ಕೆ; ಒಟಿಟಿಗೆ ಬಂತು ಸೈಡ್ 1

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿದ ತಾಯಿ!

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿದ ತಾಯಿ!

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

Karnataka Bandh; ಯಾದಗಿರಿಯಲ್ಲಿ ರೈಲು ತಡೆಯಲು ಯತ್ನ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ

Karnataka Bandh; ‘ನೀರು ನಿಲ್ಲಿಸದಿದ್ದರೆ ಡ್ಯಾಂ ಒಡೆಯುತ್ತೇವೆ’; ರಾಮನಗರದಲ್ಲಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games: Indian shooting team aims for another gold with world record

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023: Ashwin makes entry in to India’s WC squad

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

1-wdsa

Asian Games ವೈಯಕ್ತಿಕ ಡ್ರೆಸ್ಸೇಜ್‌: ಅನುಷ್‌ಗೆ ಕಂಚು

1-qwqwqwe

Asian Games ಟೆನಿಸ್‌: ಬೋಪಣ್ಣ-ಭೋಸಲೆಗೆ ಕಂಚು ಖಚಿತ; ರಾಮ್‌ಕುಮಾರ್‌-ಮೈನೆನಿ ಫೈನಲಿಗೆ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Karnataka Bandh: ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ… 44 ವಿಮಾನಗಳ ಹಾರಾಟ ರದ್ದು

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Teacher: ಹಿಂದೂ ವಿದ್ಯಾರ್ಥಿಗೆ ಮುಸ್ಲಿಂ ವಿದ್ಯಾರ್ಥಿಯಿಂದ ಕಪಾಳಮೋಕ್ಷ… ಶಿಕ್ಷಕಿ ಬಂಧನ

Sapta Sagaradaache Ello second part release postponed; Side 1 came to OTT

Sapta Sagaradaache Ello ಎರಡನೇ ಭಾಗ ಬಿಡುಗಡೆ ಮುಂದಕ್ಕೆ; ಒಟಿಟಿಗೆ ಬಂತು ಸೈಡ್ 1

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿದ ತಾಯಿ!

Pregnant;ವಿವಾಹಕ್ಕೂ ಮುನ್ನ ಗರ್ಭಿಣಿಯಾದ ಮಗಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿಹಚ್ಚಿದ ತಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.