ಭಾರತ 78; ಆಪತ್ತು ಎದುರಿಗುಂಟು


Team Udayavani, Aug 26, 2021, 6:15 AM IST

ಭಾರತ 78; ಆಪತ್ತು ಎದುರಿಗುಂಟು

ಲೀಡ್ಸ್‌: ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್‌ ಇಂಡಿಯಾದ ಸಂಭ್ರಮವೆಲ್ಲ ಲೀಡ್ಸ್‌ ನಲ್ಲಿ ಒಂದೊಪ್ಪತ್ತಿನೊಳಗೆ ಜರ್ರನೆ ಇಳಿದು ಹೋಗಿದೆ. ಇಂಗ್ಲೆಂಡ್‌ ವೇಗಿಗಳ ಘಾತಕ ಬೌಲಿಂಗ್‌ ಆಕ್ರಮಣಕ್ಕೆ ತಮ್ಮಲ್ಲಿ ಉತ್ತರವಿಲ್ಲ ಎಂಬ ರೀತಿಯಲ್ಲಿ ಬ್ಯಾಟಿಂಗ್‌ ನಡೆಸಿದ ಕೊಹ್ಲಿ ಪಡೆ ಕೇವಲ 40.4 ಓವರ್‌ಗಳಲ್ಲಿ 78 ರನ್ನುಗಳ ಅಲ್ಪ ಮೊತ್ತಕ್ಕೆ ಮೊದಲ ಇನ್ನಿಂಗ್ಸ್‌ ಮುಗಿಸಿದೆ. ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್‌ ವಿಕೆಟ್‌ ನಷ್ಟವಿಲ್ಲದೆ 86 ರನ್‌ ಗಳಿಸಿ ಆಟವಾಡುತ್ತಿದೆ.

ಇಂಗ್ಲೆಂಡ್‌ನ‌ಲ್ಲಿ ಮೊದಲ ಸಲ ಟಾಸ್‌ ಗೆದ್ದ ಖುಷಿಯಲ್ಲಿದ್ದ ವಿರಾಟ್‌ ಕೊಹ್ಲಿ, ಸ್ವಲ್ಪವೇ ಹೊತ್ತಿನಲ್ಲಿ ತಾನೇಕೆ ಮೊದಲು ಬ್ಯಾಟಿಂಗ್‌ ಆಯ್ದುಕೊಂಡೆ ಎಂದು ಪಶ್ಚಾತ್ತಾಪ ಪಡುವಂತಾಯಿತು. ಅಷ್ಟೊಂದು ಕ್ಷಿಪ್ರಗತಿಯಲ್ಲಿ ಭಾರತದ ವಿಕೆಟ್‌ಗಳು ಉರುಳುತ್ತ ಹೋದವು. ಆರಂಭದಲ್ಲಿ ಆ್ಯಂಡರ್ಸನ್‌, ನಡುವಲ್ಲಿ ರಾಬಿನ್ಸನ್‌, ಕೊನೆಯಲ್ಲಿ ಸ್ಯಾಮ್‌ ಕರನ್‌ ಮತ್ತು ಓವರ್ಟನ್‌ ಸೇರಿಕೊಂಡು ಪ್ರವಾಸಿಗರಿಗೆ ಮುಖ ಎತ್ತದಂತೆ ಮಾಡಿಬಿಟ್ಟರು.

ಮೊದಲ ಅವಧಿಯಲ್ಲೇ 56 ರನ್ನಿಗೆ 4 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದ್ದ ಭಾರತದ ಸ್ಥಿತಿ ದ್ವಿತೀಯ ಅವಧಿಯಲ್ಲಿ ಇನ್ನಷ್ಟು ಬಿಗಡಾಯಿಸಿತು. 22 ರನ್‌ ಒಟ್ಟುಗೂಡುವಷ್ಟರಲ್ಲಿ ಉಳಿದ 6 ವಿಕೆಟ್‌ ಕಣ್ಣಿಗೆ ಕಾಣದ ರೀತಿಯಲ್ಲಿ ಮಾಯವಾಗಿತ್ತು!

ಆ್ಯಂಡರ್ಸನ್‌ ಘಾತಕ ದಾಳಿ:

ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮೊದಲ ಓವರ್‌ನಿಂದಲೇ ಭಾರತಕ್ಕೆ ಬಿಸಿ ಮುಟ್ಟಿಸತೊಡಗಿದರು. 5ನೇ ಎಸೆತದಲ್ಲಿ ಕೆ.ಎಲ್‌. ರಾಹುಲ್‌ ಅವರನ್ನು ಪೆವಿಲಿಯನ್ನಿಗೆ ರವಾನಿಸಿ ಕುಸಿತಕ್ಕೆ ಚಾಲನೆ ನೀಡಿದರು. ಲಾರ್ಡ್ಸ್‌ ಸೆಂಚುರಿ ಹೀರೋ ರಾಹುಲ್‌ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ. ಬಳಿಕ ಚೇತೇಶ್ವರ್‌ ಪೂಜಾರ ಮತ್ತು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಕೂಡ “ಆ್ಯಂಡಿ’ ಮೋಡಿಗೆ ಸಿಲುಕಿದರು. ವೈಸ್‌ ಕ್ಯಾಪ್ಟನ್‌ ಅಜಿಂಕ್ಯ ರಹಾನೆಗೆ ಓಲೀ ರಾಬಿನ್ಸನ್‌ ಪೆವಿಲಿಯನ್‌ ಹಾದಿ ತೋರಿಸಿದರು. ಈ ನಾಲ್ಕೂ ಕ್ಯಾಚ್‌ಗಳು ಕೀಪರ್‌ ಬಟ್ಲರ್‌ ಅವರ ಸುರಕ್ಷಿತ ಬೊಗಸೆಯನ್ನು ಸೇರಿದ್ದವು.

ಲಂಚ್‌ ವೇಳೆ ಭಾರತ 56ಕ್ಕೆ 4 ವಿಕೆಟ್‌ ಕಳೆದುಕೊಂಡು ಚಡಪಡಿಸುತ್ತಿತ್ತು. ಆಗ ಆ್ಯಂಡರ್ಸನ್‌ ಬೌಲಿಂಗ್‌ ಇಷ್ಟೊಂದು ಆಕರ್ಷಕವಾಗಿತ್ತು: 8-5-6-3. ಅವರ ನಿಖರ ಹಾಗೂ ಅಷ್ಟೇ ಅಪಾಯಕಾರಿ ಔಟ್‌ಸ್ವಿಂಗ್‌ ಎಸೆತಗಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಉತ್ತರವೇ ಇರಲಿಲ್ಲ.

ತನ್ನ ಟೆಸ್ಟ್‌ ಬಾಳ್ವೆಯಲ್ಲೇ ಅತ್ಯಂತ ಕಳಪೆ ಫಾರ್ಮ್ ನಲ್ಲಿರುವ ಪೂಜಾರ (1) ಎದುರಿಸಿದ್ದು ಕೇವಲ 9 ಎಸೆತ. ಅವರನ್ನೂ ಆ್ಯಂಡಿಯ ಔಟ್‌ ಸ್ವಿಂಗರ್‌ ವಂಚಿಸಿತು. ಕ್ಯಾಪ್ಟನ್‌ ಕೊಹ್ಲಿಯ ತಾಂತ್ರಿಕತೆ ಮತ್ತು ಮನಸ್ಥಿತಿ ಎರಡೂ ಪಕ್ವವಾಗಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾಯಿತು. ಕೇವಲ 7 ರನ್‌ ಮಾಡಿದ ಅವರು ಮತ್ತೂಮ್ಮೆ ಆ್ಯಂಡರ್ಸನ್‌ಗೆ ವಿಕೆಟ್‌ ಒಪ್ಪಿಸಿದರು.

ಒಂದೆಡೆ ರೋಹಿತ್‌ ಕ್ರೀಸ್‌ನಲ್ಲಿ ನಿಂತಿದ್ದರೂ ಪ್ರಯೋ ಜನವಾಗಲಿಲ್ಲ. 5 ವಿಕೆಟ್‌ ಕಣ್ಣಾರೆ ಉರುಳಿದ್ದನ್ನು ನೋಡಿದ ಬಳಿಕ ಅವರೂ ವಾಪಸಾದರು. 105 ಎಸೆತಗಳಲ್ಲಿ 19 ರನ್‌ ಮಾಡಿದ ರೋಹಿತ್‌ ಅವರೇ ಭಾರತದ ಟಾಪ್‌ ಸ್ಕೋರರ್‌.

ಬದಲಾಗದ ಭಾರತ ತಂಡ :

ನಿರೀಕ್ಷೆಯಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ಲಾರ್ಡ್ಸ್‌ನಲ್ಲಿ ಗೆದ್ದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತು. ಇದರೊಂದಿಗೆ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ 4ನೇ ಸಲ ಸತತ ಎರಡು ಟೆಸ್ಟ್‌ಗಳಲ್ಲಿ ಒಂದೇ ತಂಡವನ್ನು ಆಡಿಸಿದಂತಾಯಿತು.

ಇದಕ್ಕೂ ಮೊದಲು 2018ರ ಇಂಗ್ಲೆಂಡ್‌ ಪ್ರವಾಸದ ವೇಳೆ ಟ್ರೆಂಟ್‌ಬ್ರಿಜ್‌ ಮತ್ತು ಸೌತಾಂಪ್ಟನ್‌; 2019ರ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ನಾರ್ತ್‌ಸೌಂಡ್‌ ಮತ್ತು ಕಿಂಗ್‌ಸ್ಟನ್‌; 2019-20ರ ಬಾಂಗ್ಲಾದೇಶ ಸರಣಿಯ ವೇಳೆ ಇಂದೋರ್‌ ಮತ್ತು ಕೋಲ್ಕತಾದಲ್ಲಿ ಟೀಮ್‌ ಇಂಡಿಯಾದಲ್ಲಿ ಯಾವುದೇ ಪರಿವರ್ತನೆ ಆಗಿರಲಿಲ್ಲ. ಇಂಗ್ಲೆಂಡ್‌ ತಂಡದಲ್ಲಿ ಎರಡು ಬದಲಾವಣೆ ಸಂಭವಿಸಿತು.

ಫ‌ಸ್ಟ್‌ ಬ್ಯಾಟಿಂಗ್‌ ವೇಳೆ ಕನಿಷ್ಠ ಮೊತ್ತ :

ವಿದೇಶಿ ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೇಳೆ ಭಾರತ ಕನಿಷ್ಠ ಮೊತ್ತ ದಾಖಲಿಸಿತು (78). ಒಟ್ಟಾರೆಯಾಗಿ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಗಳಿಸಿದ 3ನೇ ಕನಿಷ್ಠ ಸ್ಕೋರ್‌ ಇದಾಗಿದೆ. 1978-79ರಲ್ಲಿ ವೆಸ್ಟ್‌ ಇಂಡೀಸ್‌ ಎದುರಿನ ಹೊಸದಿಲ್ಲಿ ಟೆಸ್ಟ್‌ನಲ್ಲಿ 75 ರನ್ನಿಗೆ ಆಲೌಟಾದದ್ದು ದಾಖಲೆ.

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.