ಟಿ20: ಲಂಕೆಯನ್ನು ಕೆಡವಿದ ಭಾರತ 


Team Udayavani, Jun 23, 2022, 10:18 PM IST

ಟಿ20: ಲಂಕೆಯನ್ನು ಕೆಡವಿದ ಭಾರತ 

ಡಂಬುಲ: ಸಾಮಾನ್ಯ ಬ್ಯಾಟಿಂಗ್‌ ಹಾಗೂ ಅಸಾಮಾನ್ಯ ಬೌಲಿಂಗ್‌ ಸಾಹಸದಿಂದ ಆತಿಥೇಯ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯವನ್ನು ಭಾರತ 34 ರನ್ನುಗಳಿಂದ ಜಯಿಸಿದೆ.

ಗುರುವಾರದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಗಳಿಸಿದ್ದು 6 ವಿಕೆಟಿಗೆ 138 ರನ್‌ ಮಾತ್ರ. ಶ್ರೀಲಂಕಾ ಆರಂಭದಿಂದಲೇ ಪ್ರವಾಸಿಗರ ಬೌಲಿಂಗ್‌ ದಾಳಿಗೆ ಚಡಪಡಿಸಿ 5 ವಿಕೆಟ್‌ ನಷ್ಟಕ್ಕೆ 104 ರನ್‌ ಗಳಿಸಿ ಶರಣಾಯಿತು.

ಸಿಡಿದು ನಿಂತ ಜೆಮಿಮಾ :

ಡೆತ್‌ ಓವರ್‌ ತನಕ ಭಾರತದ ಬ್ಯಾಟಿಂಗ್‌ ಕೂಡ ಆಮೆಗತಿಯಲ್ಲಿ ಸಾಗಿತ್ತು. ಆದರೆ ಜೆಮಿಮಾ ರೋಡ್ರಿಗಸ್‌ ಕೊನೆಯ ಹಂತದಲ್ಲಿ ಸಿಡಿದು ನಿಂತ ಪರಿಣಾಮ ಅಲ್ಪ ಮೊತ್ತದ ಸಂಕಟದಿಂದ ಪಾರಾಯಿತು. 134 ರನ್ನಿನಲ್ಲಿ 53 ರನ್‌ ಬಂದದ್ದು ಅಂತಿಮ 5 ಓವರ್‌ಗಳಲ್ಲಿ. ಇದರಲ್ಲಿ 20 ರನ್‌ ಕೊನೆಯ ಓವರ್‌ ಒಂದರಲ್ಲೇ ಸಿಡಿಯಲ್ಪಟ್ಟಿತು.

ಜೆಮಿಮಾ 27 ಎಸೆತಗಳಿಂದ 36 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಇದರಲ್ಲಿ 3 ಬೌಂಡರಿ ಹಾಗೂ ಪಂದ್ಯದ ಏಕೈಕ ಸಿಕ್ಸರ್‌ ಒಳಗೊಂಡಿತ್ತು. ದೀಪ್ತಿ ಶರ್ಮ 8 ಎಸೆತಗಳಿಂದ ಅಜೇಯ 17 ರನ್‌ ಮಾಡಿದರು (3 ಬೌಂಡರಿ). ಈ ಜೋಡಿಯಿಂದ 18 ಎಸೆತಗಳಲ್ಲಿ 32 ರನ್‌ ಒಟ್ಟುಗೂಡಿತು.

ಓಪನರ್‌ ಶಫಾಲಿ ವರ್ಮ ಎಸೆತಕ್ಕೊಂದರಂತೆ 31 ರನ್‌ ಮಾಡಿದರು (4). ಮಿಥಾಲಿ ರಾಜ್‌ ನಿವೃತ್ತಿ ಬಳಿಕ ತಂಡದ ಚುಕ್ಕಾಣಿ ಹಿಡಿದ ಹರ್ಮನ್‌ಪ್ರೀತ್‌ ಕೌರ್‌ ಗಳಿಕೆ 20 ಎಸೆತಗಳಿಂದ 22 ರನ್‌ (3 ಬೌಂಡರಿ). ಆದರೆ ಸ್ಮತಿ ಮಂಧನಾ (1), ಎಸ್‌. ಮೇಘನಾ (0) ಕ್ಲಿಕ್‌ ಆಗಲಿಲ್ಲ. ಇವರಿಬ್ಬರನ್ನು ರಣಸಿಂಘೆ ಸತತ ಎಸೆತಗಳಲ್ಲಿ ಕೆಡವಿ ಭಾರತದ ಸ್ಥಿತಿಯನ್ನು ಬಿಗಡಾಯಿಸುವಂತೆ ಮಾಡಿದರು.

ಬಿಗಿ ಬೌಲಿಂಗ್‌ ದಾಳಿ :

ಭಾರತದ ಬೌಲಿಂಗ್‌ ಬೊಂಬಾಟ್‌ ಆಗಿತ್ತು. ದೀಪ್ತಿ ಶರ್ಮ ಮತ್ತು ಪೂಜಾ ವಸ್ತ್ರಾಕರ್‌ ಒಂದೊಂದು ಮೇಡನ್‌ ಓವರ್‌ ಎಸೆದು ಲಂಕೆಗೆ ಕಡಿವಾಣ ಹಾಕಿದರು. ಮಧ್ಯಮ ವೇಗಿ ಪೂಜಾ ಅವರ ಬೌಲಿಂಗ್‌ ಫಿಗರ್‌ ಇಷ್ಟೊಂದು ಆಕರ್ಷಕವಾಗಿತ್ತು: 4-1-13-1. ರಾಧಾ ಯಾದವ್‌ 22ಕ್ಕೆ 2 ವಿಕೆಟ್‌ ಕಿತ್ತು ಹೆಚ್ಚಿನ ಯಶಸ್ಸು ಕಂಡರು.

ಮಧ್ಯಮ ಸರದಿಯ ಆಟಗಾರ್ತಿ ಕವಿಶಾ ದಿಲ್ಹಾರಿ ಹೊರತುಪಡಿಸಿದರೆ ಲಂಕೆಯ ಉಳಿದ ಬ್ಯಾಟರ್‌ಗಳಿಗೆ ಭಾರತದ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ. ಕವಿಶಾ ಪಂದ್ಯದಲ್ಲೇ ಸರ್ವಾಧಿಕ 47 ರನ್‌ ಮಾಡಿ ಅಜೇಯರಾಗಿ ಉಳಿದರು (49 ಎಸೆತ, 5 ಬೌಂಡರಿ). ದ್ವಿತೀಯ ಪಂದ್ಯ ಶನಿವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌ :

ಭಾರತ-6 ವಿಕೆಟಿಗೆ 138 (ಜೆಮಿಮಾ ಔಟಾಗದೆ 36, ಶಫಾಲಿ 31, ಕೌರ್‌ 22, ದೀಪ್ತಿ ಔಟಾಗದೆ 17, ಪೂಜಾ 14, ರಿಚಾ 11). ಶ್ರೀಲಂಕಾ-5 ವಿಕೆಟಿಗೆ 104 (ಕವಿಶಾ ಔಟಾಗದೆ 47, ಅತಪಟ್ಟು 16, ಕಾಂಚನಾ 11, ರಾಧಾ 22ಕ್ಕೆ 2, ದೀಪ್ತಿ 9ಕ್ಕೆ 1, ಶಫಾಲಿ 10ಕ್ಕೆ 1, ಪೂಜಾ 13ಕ್ಕೆ 1). ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್‌.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.