ಆಸ್ಟ್ರೇಲಿಯ ಸರಣಿಗೆ ತಯಾರಾಗಲು ಅವಕಾಶ: ರಾಹುಲ್ ದ್ರಾವಿಡ್
Team Udayavani, Nov 14, 2018, 8:23 AM IST
ಹೊಸದಿಲ್ಲಿ: ಭಾರತ “ಎ’ ತಂಡದ ಮುಂಬರುವ ನ್ಯೂಜಿಲ್ಯಾಂಡ್ ಪ್ರವಾಸ ಹಿರಿಯ ಆಟಗಾರರಿಗೆ ಆಸ್ಟ್ರೇಲಿಯದ ವಿರುದ್ಧದ ಕಠಿನ ಸರಣಿಗೆ ಸಿದ್ಧರಾಗಲು ದೊರಕಿರುವ ಒಂದು ಉತ್ತಮ ಅವಕಾಶ ಎಂದು ಮಾಜಿ ನಾಯಕ ಹಾಗೂ ಸದ್ಯ ಭಾರತ “ಎ’ ತಂಡದ ಕೋಚ್ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ನವೆಂಬರ್ 16ರಂದ ಆರಂಭವಾಗಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಯಲ್ಲಿ ಮುರಳಿ ವಿಜಯ್, ಪೃಥ್ವಿ ಶಾ, ಹನುಮ ವಿಹಾರಿ, ರೋಹಿತ್ ಶರ್ಮ ಹಾಗೂ ಅಜಿಂಕ್ಯ ರಹಾನೆ ಭಾರತ “ಎ’ ತಂಡದಲ್ಲಿ ಆಡಲಿದ್ದಾರೆ. “ಭಾರತ ತಂಡ ವಿದೇಶಿ ಸರಣಿಗೆ ತೆರಳುವ ಮುನ್ನ ಇಂತಹ ಪ್ರವಾಸವನ್ನಿಡುವುದು ಉತ್ತಮ ವಿಚಾರ. ಕೆಲವೊಂದು ಆಟಗಾರರು ಹಿರಿಯ ಆಟಗಾರರ ನಿರ್ವಹಣ ಮಂಡಳಿ ಬಳಿ ಬಂದು ಭಾರತ “ಎ’ ತಂಡದಲ್ಲಿ ಆಡಲು ಮನವಿ ಸಲ್ಲಿಸಿರುವುದರಿಂದ ಇದು ಅವರಿಗೆ ಸಿಕ್ಕಿರುವ ಒಂದು ಉತ್ತಮ ಅವಕಾಶವಾಗಿದೆ. ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ನಲ್ಲಿ ಒಂದೇ ರೀತಿಯ ವಾತಾವರಣವಿಲ್ಲದಿದ್ದರೂ, ಸರಣಿಗೂ ಮುನ್ನ ಹೆಚ್ಚಿನ ಅನುಭವ ಪಡೆಯಲು ನೆರವಾಗಬಹುದು’ ಎಂದು ದ್ರಾವಿಡ್ ತಿಳಿಸಿದ್ದಾರೆ.
ಭಾರತ “ಎ’ ತಂಡ ನ್ಯೂಜಿಲ್ಯಾಂಡ್ ವಿರುದ್ಧ 3 ಏಕದಿನ ಹಾಗೂ 4 ದಿನಗಳ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಭಾರತ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಹಾಗೂ ಕೆಲವೊಂದು ಟೆಸ್ಟ್ ಪಂದ್ಯದ ನಾಯಕತ್ವವನ್ನು ಕರುಣ್ ನಾಯರ್ ನಿರ್ವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ