ಗೆಲುವಿನ ಬಾಗಿಲಲ್ಲಿ ಭಾರತ


Team Udayavani, Dec 6, 2017, 10:20 AM IST

06-13.jpg

ಹೊಸದಿಲ್ಲಿ: ಕೋಟ್ಲಾ ಅಂಗಳದಲ್ಲಿ ಬುಧವಾರ ಭಾರತದ ಗೆಲುವಿನ ಬಾವುಟ ಹಾರಾಡುವುದು ಬಹುತೇಕ ಖಾತ್ರಿಯಾಗಿದೆ. ಇದರೊಂದಿಗೆ ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಟೀಮ್‌ ಇಂಡಿಯಾ 2-0 ಅಂತರದಿಂದ ವಶಪಡಿಸಿಕೊಳ್ಳಲಿದ್ದು, ಸತತ 9ನೇ ಸರಣಿ ಗೆಲುವಿನ ಸಂಭ್ರಮವನ್ನು ಆಚರಿಸಲಿದೆ. ಶ್ರೀಲಂಕಾ ಈ ಪಂದ್ಯವನ್ನು ಉಳಿಸಿಕೊಂಡರೆ ಅದೊಂದು ಕ್ರಿಕೆಟ್‌ ಪವಾಡವಾಗಲಿದೆ!

ಪ್ರವಾಸಿ ಲಂಕೆಗೆ 410 ರನ್ನುಗಳ ಗೆಲುವಿನ ಗುರಿ ನೀಡಿರುವ ಭಾರತ, 4ನೇ ದಿನದಾಟದ ಅಂತ್ಯಕ್ಕೆ 31 ರನ್ನಿಗೆ 3 ವಿಕೆಟ್‌ ಕೀಳುವಲ್ಲಿ ಯಶಸ್ವಿಯಾಗಿದೆ. ಬುಧವಾರ ಪಂದ್ಯದ ಅಂತಿಮ ದಿನ. ಉಳಿದ 7 ವಿಕೆಟ್‌ಗಳಿಂದ 379 ರನ್‌ ಪೇರಿ ಸಲು ಚಂಡಿಮಾಲ್‌ ಪಡೆಗೆ ಖಂಡಿತ ಸಾಧ್ಯವಿಲ್ಲ. ಆದರೆ ಈ ಏಳರಲ್ಲಿ ಕೆಲವು ವಿಕೆಟ್‌ಗಳನ್ನಾ ದರೂ ಉಳಿಸಿಕೊಂಡು ಪಂದ್ಯವನ್ನು ಡ್ರಾ ಗೊಳಿಸಲು ಪ್ರಯತ್ನಿಸಬಹುದು. ಆದರೆ ಇದು ಸುಲಭವಲ್ಲ. “ವಾಯು ಮಾಲಿನ್ಯ’ವಾದರೂ ಲಂಕೆಯ ನೆರವಿಗೆ ಬರಬಹುದೆಂಬುದು ಕ್ರಿಕೆಟ್‌ ವಲಯ ದಲ್ಲಿ ಹರಿದಾಡುತ್ತಿರುವ ಜೋಕ್‌!

ಮಂಗಳವಾರದ ಕೊನೆಯ ಅವಧಿಯ 85 ನಿಮಿಷಗಳ ಆಟದಲ್ಲಿ 16 ಓವರ್‌ ಎದುರಿಸಿದ ಶ್ರೀಲಂಕಾ, ಆರಂಭಿಕರಾದ ದಿಮುತ್‌ ಕರುಣರತ್ನೆ (13), ಸದೀರ ಸಮರವಿಕ್ರಮ (5) ಮತ್ತು ನೈಟ್‌ ವಾಚ್‌ಮನ್‌ ಸುರಂಗ ಲಕ್ಮಲ್‌ (0) ಅವರ ವಿಕೆಟನ್ನು ಉದುರಿಸಿಕೊಂಡಿದೆ. ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜ ಹೆಚ್ಚು ಅಪಾಯಕಾರಿಯಾಗಿ ಗೋಚರಿಸಿದ್ದು, ಒಂದೇ ಓವರಿನಲ್ಲಿ ಕರುಣರತ್ನೆ ಮತ್ತು ಲಕ್ಮಲ್‌ ವಿಕೆಟ್‌ ಕಿತ್ತು ಲಂಕೆಗೆ “ಲಕ್‌’ ಇಲ್ಲ ಎಂಬುದನ್ನು ಸಾಬೀತುಪಡಿಸಿದರು. ಇನ್ನೊಂದು ವಿಕೆಟ್‌ ಶಮಿ ಪಾಲಾಗಿದೆ. ಧನಂಜಯ ಡಿ’ಸಿಲ್ವ (13) ಮತ್ತು ಏಂಜೆಲೊ ಮ್ಯಾಥ್ಯೂಸ್‌ (0) ಕ್ರೀಸಿನಲ್ಲಿದ್ದಾರೆ.

ಚಂಡಿಮಾಲ್‌ ಜೀವನಶ್ರೇಷ್ಠ ಆಟ
ಶ್ರೀಲಂಕಾ 9 ವಿಕೆಟಿಗೆ 356 ರನ್‌ ಮಾಡಿದಲ್ಲಿಂದ ಪ್ರಥಮ ಇನ್ನಿಂಗ್ಸ್‌ ಬ್ಯಾಟಿಂಗ್‌ ಮುಂದುವರಿಸಿ 373ಕ್ಕೆ ಆಲೌಟ್‌ ಆಯಿತು. 147ರಲ್ಲಿದ್ದ ದಿನೇಶ್‌ ಚಂಡಿಮಾಲ್‌ ಕಪ್ತಾನನ ಆಟ ಮುಂದುವರಿಸಿ 164ರ ತನಕ ಬೆಳೆದರು (361 ಎಸೆತ, 21 ಬೌಂಡರಿ, 1 ಸಿಕ್ಸರ್‌). ದಿನದ 6ನೇ ಓವರಿನಲ್ಲಿ ಇಶಾಂತ್‌ ಶರ್ಮ ಲಂಕಾ ಕಪ್ತಾನನಿಗೆ ಪೆವಿಲಿಯನ್‌ ಹಾದಿ ತೋರಿಸುವುದರೊಂದಿಗೆ ಲಂಕಾ ಇನ್ನಿಂಗ್ಸಿಗೆ ತೆರೆ ಬಿತ್ತು. ಇದು ದಿನೇಶ್‌ ಚಂಡಿಮಾಲ್‌ ಅವರ ಜೀವನಶ್ರೇಷ್ಠ ಬ್ಯಾಟಿಂಗ್‌ ಆಗಿದೆ. ಭಾರತದ ವಿರುದ್ಧವೇ, 2015ರ ಗಾಲೆ ಟೆಸ್ಟ್‌ ಪಂದ್ಯದಲ್ಲಿ ಅಜೇಯ 162 ರನ್‌ ಹೊಡೆದದ್ದು ಚಂಡಿಮಾಲ್‌ ಅವರ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿತ್ತು.

ರಹಾನೆ ಒಟ್ಟು 17 ರನ್‌!
163 ರನ್‌ ಮುನ್ನಡೆ ಸಂಪಾ ದಿಸಿದ ಭಾರತ ಬಿರುಸಿನ ಆಟಕ್ಕಿಳಿದು 52.2 ಓವರ್‌ಗಳಲ್ಲಿ 5ಕ್ಕೆ 246 ರನ್‌ ಗಳಿಸಿ ತನ್ನ ದ್ವಿತೀಯ ಸರದಿಯನ್ನು ಡಿಕ್ಲೇರ್‌ ಮಾಡಿತು. ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮ ಅವರ ಅರ್ಧ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ಚೇತೇಶ್ವರ್‌ ಪೂಜಾರ ಒಂದು ರನ್‌ ಕೊರತೆಯಿಂದ “ಫಿಫ್ಟಿ’ ತಪ್ಪಿಸಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 155 ರನ್‌ ಬಾರಿಸಿದ್ದ ಮುರಳಿ ವಿಜಯ್‌ ಈ ಬಾರಿ ಕೇವಲ 9 ರನ್ನಿಗೆ ಔಟಾದರು. ಭಾರತ ಆಗ 10 ರನ್‌ ಮಾಡಿತ್ತು. 
ಅಜಿಂಕ್ಯ ರಹಾನೆ ಅವರಿಗೆ ಭಡ್ತಿ ನೀಡಿ ಒನ್‌ಡೌನ್‌ನಲ್ಲಿ ಕಳುಹಿಸಲಾಯಿತಾದರೂ ಹತ್ತೇ ರನ್ನಿಗೆ ಔಟಾಗಿ ವಾಪಸಾದರು. 29 ರನ್ನಿಗೆ ಭಾರತದ 2ನೇ ವಿಕೆಟ್‌ ಉರುಳಿತು. ರಹಾನೆ ಪಾಲಿಗೆ ಇದೊಂದು “ದುರಂತ ಸರಣಿ’ ಎನಿಸಿತು. ಉಪನಾಯಕನೂ ಆಗಿರುವ ಅವರು 5 ಇನ್ನಿಂಗ್ಸ್‌ಗಳಲ್ಲಿ ಗಳಿಸಿದ್ದು ಕೇವಲ 17 ರನ್‌ (4, 0, 2, 1, 10).  ಭಾರತದ ದ್ವಿತೀಯ ಸರದಿಯಲ್ಲಿ ಶಿಖರ್‌ ಧವನ್‌ ಸರ್ವಾಧಿಕ 67 ರನ್‌ ಬಾರಿಸಿದರು. 91 ಎಸೆತಗಳ ಈ ಸೊಗಸಾದ ಆಟದಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಪೂಜಾರ 66 ಎಸೆತ ಎದುರಿಸಿ 49 ರನ್‌ ಹೊಡೆದರು (5 ಬೌಂಡರಿ). ಪೂಜಾರ-ಧವನ್‌ ಜೋಡಿಯ 17.2 ಓವರ್‌ಗಳ ಆಟದಲ್ಲಿ 3ನೇ ವಿಕೆಟಿಗೆ 77 ರನ್‌ ಒಟ್ಟುಗೂಡಿತು.

ಕೊಹ್ಲಿ 610 ರನ್‌ ಸಾಧನೆ
ಪ್ರಚಂಡ ಫಾರ್ಮ್ನಲ್ಲಿರುವ ವಿರಾಟ್‌ ಕೊಹ್ಲಿ 50 ರನ್‌ ಬಾರಿಸಿ ಮತ್ತೂಮ್ಮೆ ತವರಿನ ಅಭಿಮಾನಿಗಳನ್ನು ರಂಜಿಸಿದರು. ಅವರ ಈ 58 ಎಸೆತಗಳ ಬ್ಯಾಟಿಂಗಿನಲ್ಲಿ ಕೇವಲ 3 ಬೌಂಡರಿ ಸೇರಿತ್ತು. ಇದು ಅವರ 15ನೇ ಅರ್ಧ ಶತಕ. ಇದರೊಂದಿಗೆ ಈ ಸರಣಿಯಲ್ಲಿ ಕೊಹ್ಲಿ ಗಳಿಕೆ 610 ರನ್ನಿಗೆ ಏರಿತು. ಇದು 3 ಪಂದ್ಯಗಳ ಸರಣಿಯೊಂದರಲ್ಲಿ ದಾಖಲಾದ 4ನೇ ಅತ್ಯಧಿಕ ರನ್‌ ಆಗಿದೆ. ಮತ್ತೂಮ್ಮೆ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ ರೋಹಿತ್‌ ಶರ್ಮ ಅಜೇಯ 50 ರನ್‌ ಮಾಡಿ ಮಿಂಚಿದರು (49 ಎಸೆತ, 5 ಬೌಂಡರಿ). ಕೊಹ್ಲಿ-ರೋಹಿತ್‌ 4ನೇ ವಿಕೆಟಿಗೆ 15.2 ಓವರ್‌ಗಳಿಂದ 90 ರನ್‌ ಪೇರಿಸಿದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌    
        7 ವಿಕೆಟಿಗೆ ಡಿಕ್ಲೇರ್‌ 536
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್‌    373
ಭಾರತ ದ್ವಿತೀಯ ಇನ್ನಿಂಗ್ಸ್‌

ಮುರಳಿ ವಿಜಯ್‌    ಸಿ ಡಿಕ್ವೆಲ್ಲ ಬಿ ಲಕ್ಮಲ್‌    9
ಶಿಖರ್‌ ಧವನ್‌    ಸ್ಟಂಪ್ಡ್ ಡಿಕ್ವೆಲ್ಲ ಬಿ ಸಂದಕನ್‌    67
ಅಜಿಂಕ್ಯ ರಹಾನೆ    ಸಿ ಸಂದಕನ್‌ ಬಿ ಪೆರೆರ    10
ಚೇತೇಶ್ವರ್‌ ಪೂಜಾರ    ಸಿ ಮ್ಯಾಥ್ಯೂಸ್‌ ಬಿ ಡಿ’ಸಿಲ್ವ    49
ವಿರಾಟ್‌ ಕೊಹ್ಲಿ    ಸಿ ಲಕ್ಮಲ್‌ ಬಿ ಗಾಮಗೆ    50
ರೋಹಿತ್‌ ಶರ್ಮ    ಔಟಾಗದೆ    50
ರವೀಂದ್ರ ಜಡೇಜ    ಔಟಾಗದೆ    4

ಇತರ        7
ಒಟ್ಟು  (5 ವಿಕೆಟಿಗೆ ಡಿಕ್ಲೇರ್‌)    246
ವಿಕೆಟ್‌ ಪತನ: 1-10, 2-29, 3-106, 4-144, 5-234. 

ಬೌಲಿಂಗ್‌: 
ಸುರಂಗ ಲಕ್ಮಲ್‌        14-3-60-1
ಲಹಿರು ಗಾಮಗೆ        12.2-1-48-1
ದಿಲುವಾನ್‌ ಪೆರೆರ        11-0-54-1
ಧನಂಜಯ ಡಿ’ಸಿಲ್ವ        5-0-31-1
ಲಕ್ಷಣ ಸಂದಕನ್‌        10-0-50-1

ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್‌ 
(ಗೆಲುವಿನ ಗುರಿ 410 ರನ್‌)

ದಿಮುತ್‌ ಕರುಣರತ್ನೆ    ಸಿ ಸಾಹಾ ಬಿ ಜಡೇಜ    13
ಸದೀರ ಸಮರವಿಕ್ರಮ    ಸಿ ರಹಾನೆ ಬಿ ಶಮಿ    5
ಧನಂಜಯ ಡಿ’ಸಿಲ್ವ    ಬ್ಯಾಟಿಂಗ್‌    13
ಸುರಂಗ ಲಕ್ಮಲ್‌    ಬಿ ಜಡೇಜ    0
ಏಂಜೆಲೊ ಮ್ಯಾಥ್ಯೂಸ್‌    ಬ್ಯಾಟಿಂಗ್‌    0

ಇತರ        0
ಒಟ್ಟು (3 ವಿಕೆಟಿಗೆ)        31
ವಿಕೆಟ್‌ ಪತನ: 1-14, 2-31, 3-31. 

ಬೌಲಿಂಗ್‌: 
ಇಶಾಂತ್‌ ಶರ್ಮ        3-0-6-0
ಮೊಹಮ್ಮದ್‌ ಶಮಿ        3-1-8-1
ಆರ್‌. ಅಶ್ವಿ‌ನ್‌        5-2-12-0
ರವೀಂದ್ರ ಜಡೇಜ        5-2-2-2

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.