ಮೊದಲ ಟೆಸ್ಟ್‌ ಸರಣಿ ಗೆಲುವಿನ ಸನಿಹ ಭಾರತ


Team Udayavani, Jan 6, 2019, 10:30 PM IST

ap162019000008b.jpg

ಸಿಡ್ನಿ: ಸಿಡ್ನಿಯಲ್ಲಿ ಮಳೆಯ ಕಾರುಬಾರು ಜೋರಾಗಿದೆ. ಇದರಿಂದಾಗಿ ಭಾರತ-ಆಸ್ಟ್ರೇಲಿಯ ನಡುವಿನ ಅಂತಿಮ ಟೆಸ್ಟ್‌ ಪಂದ್ಯದ 4ನೇ ದಿನವಾದ ರವಿವಾರ ಕೇವಲ 25.2 ಓವರ್‌ಗಳ ಆಟವಷ್ಟೇ ಸಾಧ್ಯವಾಗಿದ್ದು, ಆತಿಥೇಯ ಆಸ್ಟ್ರೇಲಿಯ 300 ರನ್ನಿಗೆ ಆಲೌಟಾಗಿ ಫಾಲೋಆನ್‌ ಸಂಕಟಕ್ಕೆ ಸಿಲುಕಿದೆ. ಮರಳಿ ಬ್ಯಾಟಿಂಗಿಗೆ ಇಳಿದು ವಿಕೆಟ್‌ ನಷ್ಟವಿಲ್ಲದೆ 4 ರನ್‌ ಮಾಡಿದೆ.

ಅಂತಿಮ ದಿನವಾದ ಸೋಮವಾರ ಯಾವುದೇ ಅಡೆತಡೆ ಇಲ್ಲದೆ ಆಟ ಸಾಗಿದರೆ ಭಾರತ 3ನೇ ಗೆಲುವನ್ನು ಒಲಿಸಿಕೊಳ್ಳಬಹುದು. ಇಲ್ಲವೇ ಮಳೆ ಆಸ್ಟ್ರೇಲಿಯವನ್ನು ಸೋಲಿನಿಂದ ಬಚಾವ್‌ ಮಾಡಬಹುದು. ಏನೇ ಆದರೂ ಸರಣಿ ಮೇಲೆ ಟೀಮ್‌ ಇಂಡಿಯಾದ ಅಂಕಿತ ಬಿದ್ದಾಗಿದೆ. ಆಸ್ಟ್ರೇಲಿಯ ನೆಲದಲ್ಲಿ 7 ದಶಕಗಳ ಟೆಸ್ಟ್‌ ಇತಿಹಾಸವನ್ನು ಹೊಂದಿರುವ ಭಾರತ ತಂಡ ಮೊದಲ ಬಾರಿಗೆ ಸರಣಿ ವಶಪಡಿಸಿಕೊಂಡು ಮೆರೆದಾಡಲಿದೆ. ಈ ಕ್ಷಣವನ್ನು ವೀಕ್ಷಿಸಲು ದೇಶದ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಮೊದಲ ಅವಧಿಯ ಆಟ ನಷ್ಟ
ಆಸ್ಟ್ರೇಲಿಯ 6 ವಿಕೆಟಿಗೆ 236 ರನ್‌ ಗಳಿಸಿ 3ನೇ ದಿನದಾಟ ಮುಗಿಸಿತ್ತು. ರವಿವಾರದ ಮೊದಲ ಅವಧಿಯ ಆಟ ಸಂಪೂರ್ಣವಾಗಿ ಮಳೆಯ ಪಾಲಾಯಿತು. ಅಪರಾಹ್ನ 1.50ಕ್ಕೆ ಪಂದ್ಯ ಆರಂಭಗೊಂಡಿತು. ಅಲ್ಲಿಯ ತನಕ 230 ನಿಮಿಷಗಳ ಆಟ ನಷ್ಟವಾಗಿತ್ತು. ಕೂಡಲೇ 2ನೇ ಹೊಸ ಚೆಂಡನ್ನು ಕೈಗೆತ್ತಿಕೊಂಡ ಭಾರತ ಭರ್ಜರಿ ಯಶಸ್ಸು ಸಾಧಿಸಿತು. 25 ರನ್‌ ಮಾಡಿ ಆಡುತ್ತಿದ್ದ ಪ್ಯಾಟ್‌ ಕಮಿನ್ಸ್‌ ಅವರನ್ನು ಶಮಿ ಅದೇ ಮೊತ್ತಕ್ಕೆ, ದಿನದ 6ನೇ ಎಸೆತದಲ್ಲೇ ಪೆವಿಲಿಯನ್ನಿಗೆ ಅಟ್ಟಿದರು.

28 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಹ್ಯಾಂಡ್ಸ್‌ಕಾಂಬ್‌ 37ರ ತನಕ ಸಾಗಿ ಬುಮ್ರಾ ಬಲೆಗೆ ಬಿದ್ದರು (111 ಎಸೆತ, 5 ಬೌಂಡರಿ). ಖಾತೆ ತೆರೆಯದ ನಥನ್‌ ಲಿಯೋನ್‌ ಅವರನ್ನು ಕುಲದೀಪ್‌ ಎಲ್‌ಬಿಡಬ್ಲ್ಯು ಮೂಲಕ ವಾಪಸ್‌ ಕಳುಹಿಸಿದರು. ಹೀಗೆ 44 ಎಸೆತಗಳ ಅಂತರದಲ್ಲಿ, 22 ರನ್‌ ಆಗುವಷ್ಟರಲ್ಲಿ ಆಸ್ಟ್ರೇಲಿಯದ 3 ವಿಕೆಟ್‌ ಬಿತ್ತು.

ಹನುಮ ವಿಹಾರಿ ಗಾಯಾಳು
ಅದೇ ಕೂಡಲೇ ಕುಲದೀಪ್‌ 5 ವಿಕೆಟ್‌ ಬೇಟೆಯನ್ನು ಪೂರ್ತಿಗೊಳಿಸುತ್ತಿದ್ದರು. ಆದರೆ ಮಿಡ್‌ ಆನ್‌ನಲ್ಲಿದ್ದ ಹನುಮ ವಿಹಾರಿ ಕ್ಯಾಚ್‌ ಒಂದನ್ನು ಕೈಚೆಲ್ಲಿ ಹ್ಯಾಝಲ್‌ವುಡ್‌ಗೆ ಜೀವದಾನ ನೀಡಿದರು. ಈ ಸಂದರ್ಭದಲ್ಲಿ ಎಡ ಭುಜದ ನೋವಿಗೆ ಸಿಲುಕಿದ ವಿಹಾರಿ ಅನಂತರ ಅಂಗಳದಲ್ಲಿ ಕಾಣಿಸಿಕೊಳ್ಳಲಿಲ್ಲ. ಹಾರ್ದಿಕ್‌ ಪಾಂಡ್ಯ ಬದಲಿ ಕ್ಷೇತ್ರರಕ್ಷಕನಾಗಿ ಬಂದರು.

ಅಂತಿಮ ವಿಕೆಟಿಗೆ ಜತೆಗೂಡಿದ ಸ್ಟಾರ್ಕ್‌ (ಔಟಾಗದೆ 29) ಮತ್ತು ಹ್ಯಾಝಲ್‌ವುಡ್‌ (21) ಭಾರತದ ಬೌಲರ್‌ಗಳನ್ನು ಒಂದಿಷ್ಟು ಸತಾಯಿಸಿದರು. 42 ರನ್‌ ಜತೆಯಾಟದ ಮೂಲಕ ತಂಡದ ಮೊತ್ತವನ್ನು 300ಕ್ಕೆ ಏರಿಸಿದರು. ಮೊದಲು ಕೈತಪ್ಪಿದ್ದ ಹ್ಯಾಝಲ್‌ವುಡ್‌ ವಿಕೆಟ್‌ ಕುಲದೀಪ್‌ ಬುಟ್ಟಿಗೇ ಬಿತ್ತು. ಅಂಪಾಯರ್‌ ನಿರಾಕರಿಸಿದ ಎಲ್‌ಬಿ ಮನವಿ ಡಿಆರ್‌ಎಸ್‌ ಮೂಲಕ ಕುಲದೀಪ್‌ ಪರವಾಗಿ ಬಂತು.ಫಾಲೋಆನ್‌ ಹೇರಲೆಂದೇ ಕಾದು ಕುಳಿತ್ತಿದ್ದ ವಿರಾಟ್‌ ಕೊಹ್ಲಿ ಒಂದು ಕ್ಷಣವೂ ವಿಳಂಬಿಸದೆ ಆತಿಥೇಯರನ್ನು ಮರಳಿ ಬ್ಯಾಟಿಂಗಿಗೆ ಆಹ್ವಾನಿಸಿದರು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌: 7 ವಿಕೆಟಿಗೆ ಡಿಕ್ಲೇರ್‌ 622
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
(ನಿನ್ನೆ 6 ವಿಕೆಟಿಗೆ 236)
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಬಿ ಬುಮ್ರಾ    37
ಪ್ಯಾಟ್‌ ಕಮಿನ್ಸ್‌    ಬಿ ಶಮಿ    25
ಮಿಚೆಲ್‌ ಸ್ಟಾರ್ಕ್‌    ಔಟಾಗದೆ    29
ನಥನ್‌ ಲಿಯೋನ್‌    ಎಲ್‌ಬಿಡಬ್ಲ್ಯು ಕುಲದೀಪ್‌    0
ಜೋಶ್‌ ಹ್ಯಾಝಲ್‌ವುಡ್‌    ಎಲ್‌ಬಿಡಬ್ಲ್ಯು ಕುಲದೀಪ್‌    21
ಇತರ        11
ಒಟ್ಟು  (ಆಲೌಟ್‌)        300
ವಿಕೆಟ್‌ ಪತನ: 7-236, 8-257, 9-258.
ಬೌಲಿಂಗ್‌:
ಮೊಹಮ್ಮದ್‌ ಶಮಿ        19-2-58-2
ಜಸ್‌ಪ್ರೀತ್‌ ಬುಮ್ರಾ        21-5-62-1
ರವೀಂದ್ರ ಜಡೇಜ        32-11-73-2
ಕುಲದೀಪ್‌ ಯಾದವ್‌        31.5-6-99-5
ಹನುಮ ವಿಹಾರಿ        1-0-2-0
* ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌
ಉಸ್ಮಾನ್‌ ಖ್ವಾಜಾ    ಬ್ಯಾಟಿಂಗ್‌    4
ಮಾರ್ಕಸ್‌ ಹ್ಯಾರಿಸ್‌    ಬ್ಯಾಟಿಂಗ್‌    2
ಇತರ        0
ಒಟ್ಟು  (ವಿಕೆಟ್‌ ನಷ್ಟವಿಲ್ಲದೆ)        6
ಬೌಲಿಂಗ್‌:
ಮೊಹಮ್ಮದ್‌ ಶಮಿ        2-1-4-0
ಜಸ್‌ಪ್ರೀತ್‌ ಬುಮ್ರಾ        2-1-2-0

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಭಾರತ ತಂಡ ಆಸ್ಟ್ರೇಲಿಯಕ್ಕೆ 4ನೇ ಸಲ ಫಾಲೋಆನ್‌ ಹೇರಿತು. ಭಾರತದೆದುರು ಆಸೀಸ್‌ ತವರಿನಲ್ಲೇ ಫಾಲೋಆನ್‌ಗೆ ತುತ್ತಾದ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಸಿಡ್ನಿಯಲ್ಲೇ ಆಡಲಾದ 1988ರ ವರ್ಷಾರಂಭದ ಪಂದ್ಯದಲ್ಲಿ ಭಾರತ ಕಾಂಗರೂ ಪಡೆಯನ್ನು ಮರಳಿ ಬ್ಯಾಟಿಂಗಿಗೆ ಇಳಿಸಿತ್ತು.
* ಆಸ್ಟ್ರೇಲಿಯ 1988ರ ಬಳಿಕ ತವರಿನಲ್ಲಿ ಮೊದಲ ಬಾರಿಗೆ ಫಾಲೋಆನ್‌ಗೆ ಗುರಿಯಾಯಿತು. ಫೆಬ್ರವರಿಯಲ್ಲಿ ನಡೆದ ಅಂದಿನ ಆ್ಯಶಸ್‌ ಸರಣಿಯ ಸಿಡ್ನಿ ಟೆಸ್ಟ್‌ನಲ್ಲೇ ಆಸ್ಟ್ರೇಲಿಯ ಈ ಕಂಟಕಕ್ಕೆ ಸಿಲುಕಿತ್ತು.
* ಆಸ್ಟ್ರೇಲಿಯ 2005ರ ಬಳಿಕ ಮೊದಲ ಸಲ ಫಾಲೋಆನ್‌ಗೆ ತುತ್ತಾಯಿತು. ಅಂದಿನ ಆ್ಯಶಸ್‌ ಸರಣಿಯ ನಾಟಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಕೊನೆಯ ಸಲ ಆಸೀಸ್‌ ಮೇಲೆ ಫಾಲೋಆನ್‌ ವಿಧಿಸಲಾಗಿತ್ತು.
* ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ 6ನೇ ಸಲ ಎದುರಾಳಿಗೆ ಫಾಲೋಆನ್‌ ಹೇರಿತು. ಅತೀ ಹೆಚ್ಚು ಸಲ ಫಾಲೋಆನ್‌ ಹೇರಿದ ಭಾರತೀಯ ನಾಯಕನೆಂದರೆ ಮೊಹಮ್ಮದ್‌ ಅಜರುದ್ದೀನ್‌ (7).
* 2015ರ ಬಳಿಕ ವಿರಾಟ್‌ ಕೊಹ್ಲಿ ಅತೀ ಹೆಚ್ಚು 6 ಸಲ ಫಾಲೋಆನ್‌ ಹೇರಿದ ನಾಯಕನಾಗಿ ಮೂಡಿಬಂದರು. ಉಳಿದಂತೆ ಈ ಅವಧಿಯಲ್ಲಿ ಫಾ ಡು ಪ್ಲೆಸಿಸ್‌, ಅಲಸ್ಟೇರ್‌ ಕುಕ್‌ ಮತ್ತು ಸಫ‌ìರಾಜ್‌ ಅಹ್ಮದ್‌ ತಲಾ 2 ಸಲ ಎದುರಾಳಿಗೆ ಫಾಲೋಆನ್‌ ಹೇರಿದ್ದಾರೆ.
* ಕುಲದೀಪ್‌ ಯಾದವ್‌ 2ನೇ ಸಲ ಇನ್ನಿಂಗ್ಸ್‌ ಒಂದರಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದರು. ಇದಕ್ಕೂ ಮುನ್ನ ಕಳೆದ ವರ್ಷ ವೆಸ್ಟ್‌ ಇಂಡೀಸ್‌ ಎದುರಿನ ರಾಜ್‌ಕೋಟ್‌ ಟೆಸ್ಟ್‌ನಲ್ಲಿ 57ಕ್ಕೆ 5 ವಿಕೆಟ್‌ ಉರುಳಿಸಿದ್ದರು.
* ಕುಲದೀಪ್‌ ಆಸ್ಟ್ರೇಲಿಯ ನೆಲದಲ್ಲಿ 2007ರ ಬಳಿಕ 5 ವಿಕೆಟ್‌ ಕಿತ್ತ ಭಾರತದ ಸ್ಪಿನ್ನರ್‌ ಎನಿಸಿದರು. ಅಂದಿನ ಮೆಲ್ಬರ್ನ್ ಟೆಸ್ಟ್‌ನಲ್ಲಿ ಅನಿಲ್‌ ಕುಂಬ್ಳೆ 84ಕ್ಕೆ 5 ವಿಕೆಟ್‌ ಉರುಳಿಸಿದ್ದರು.
* ಕುಲದೀಪ್‌ ಆಸ್ಟ್ರೇಲಿಯ ನೆಲದಲ್ಲಿ 2012ರ ಬಳಿಕ 5 ವಿಕೆಟ್‌ ಉರುಳಿಸಿದ ವಿಶ್ವದ ಮೊದಲ ಸ್ಪಿನ್ನರ್‌. ಅಂದಿನ ಹೋಬರ್ಟ್‌ ಪಂದ್ಯದಲ್ಲಿ ಶ್ರೀಲಂಕಾದ ರಂಗನ ಹೆರಾತ್‌ 95ಕ್ಕೆ 5 ವಿಕೆಟ್‌ ಹಾರಿಸಿದ್ದರು.
* ಆಸ್ಟ್ರೇಲಿಯ ವಿರುದ್ಧ ಭಾರತದ 2ನೇ ಅತೀ ದೊಡ್ಡ ಮೊತ್ತದ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿತು (322 ರನ್‌). 1998ರ ಕೋಲ್ಕತಾ ಟೆಸ್ಟ್‌ನಲ್ಲಿ 400 ರನ್‌ ಲೀಡ್‌ ಗಳಿಸಿದ್ದು ದಾಖಲೆ. ಅಂದು ಭಾರತ 5ಕ್ಕೆ 633 ರನ್‌ ಪೇರಿಸಿದರೆ, ಆಸ್ಟ್ರೇಲಿಯ 233ಕ್ಕೆ ಆಲೌಟ್‌ ಆಗಿತ್ತು.
* ಆಸ್ಟ್ರೇಲಿಯ ನೆಲದಲ್ಲಿ ಭಾರತ ಬೃಹತ್‌ ಮುನ್ನಡೆಯ ದಾಖಲೆ ಸ್ಥಾಪಿಸಿತು. ಹಿಂದಿನ ದಾಖಲೆ 292 ರನ್‌.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.