ಕಿವೀಸ್‌ ಕಟ್ಟಿಹಾಕಿದ ಭಾರತ


Team Udayavani, Oct 26, 2017, 10:24 AM IST

26-24.jpg

ಪುಣೆ: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಭಾರತ ತಂಡವು ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಬೌಲರ್‌ಗಳ ನಿಖರ ದಾಳಿಯಿಂದ ನ್ಯೂಜಿಲ್ಯಾಂಡ್‌ ಮೊತ್ತವನ್ನು 9 ವಿಕೆಟಿಗೆ 230 ರನ್ನಿಗೆ ನಿಯಂತ್ರಿಸಿದ ಭಾರತವು ಆಬಳಿಕ ಶಿಖರ್‌ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರ ಆಕರ್ಷಕ ಅರ್ಧಶತಕದಿಂದಾಗಿ 46 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 232 ರನ್‌ ಪೇರಿಸಿ ಜಯಭೇರಿ ಬಾರಿಸಿತು.ಈ ಗೆಲುವಿನಿಂದ ಭಾರತ ಮತ್ತು ನ್ಯೂಜಿಲ್ಯಾಂಡ್‌ ನಡುವಣ ಮೂರು ಪಂದ್ಯಗಳ ಸರಣಿ 1-1 ಅಂತರದಿಂದ ಸಮಬಲದಲ್ಲಿ ನಿಂತಿದೆ. ಸರಣಿ ನಿರ್ಣಾಯಕ ಪಂದ್ಯ ಕಾನ್ಪುರದಲ್ಲಿ ಅ. 29ರಂದು ನಡೆಯಲಿದೆ. 

ರೋಹಿತ್‌ ಶರ್ಮ ಅವರನ್ನು ಬೇಗನೇ ಕಳೆದುಕೊಂಡರೂ ಧವನ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ಬಹಳ ಎಚ್ಚರಿಕೆಯಿಂದ ಕಿವೀಸ್‌ ದಾಳಿಯನ್ನು ಎದುರಿಸಿದರು. ದ್ವಿತೀಯ ವಿಕೆಟಿಗೆ 57 ರನ್ನುಗಳ ಜತೆ ಯಾಟದಲ್ಲಿ ಪಾಲ್ಗೊಂಡ ಅವರಿಬ್ಬರು ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊಹ್ಲಿ 29 ರನ್‌ ಗಳಿಸಿ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್‌ ಒಪ್ಪಿಸಿದರು. 

ಕೊಹ್ಲಿ ಪತನದ ಬಳಿಕ ಧವನ್‌ ಮತ್ತು ದಿನೇಶ್‌ ಕಾರ್ತಿಕ್‌ ಇನ್ನಷ್ಟು ಜವಾಬ್ದಾರಿ ಯಿಂದ ಆಡಲು ಪ್ರಯತ್ನಿಸಿದರು. ಒಂಟಿ ರನ್ನಿಗೆ ಹೆಚ್ಚಿನ ಮಹಣ್ತೀ ನೀಡಿ ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ಮೂರನೇ ವಿಕೆಟಿಗೆ 66 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ತಂಡದ ಗೆಲುವಿನ ಸಾಧ್ಯತೆ ಯನ್ನು ಹೆಚ್ಚಿಸಿದರು. ಉತ್ತಮವಾಗಿ ಆಡುತ್ತಿದ್ದ ಧವನ್‌ ಭರ್ಜರಿ ಹೊಡೆತಕ್ಕೆ ಪ್ರಯತ್ನಿಸಿ ಮಿಲೆ°ಗೆ ವಿಕೆಟ್‌ ಒಪ್ಪಿಸಿದರು. 84 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 68 ರನ್‌ ಗಳಿಸಿದರು.

ಆಬಳಿಕ ದಿನೇಶ್‌ ಕಾರ್ತಿಕ್‌ ಅವರು ಹಾರ್ದಿಕ್‌ ಪಾಂಡ್ಯ ಮತ್ತು ನಾಯಕ ಧೋನಿ ಜತೆಗೆ ಉತ್ತಮ ಜತೆಯಾಟ ನಡೆಸಿ ತಂಡಕ್ಕೆ ಅರ್ಹ ಜಯ ತಂದಕೊಡುವಲ್ಲಿ ಯಶಸ್ವಿಯಾದರು. 92 ಎಸೆತ ಎದುರಿಸಿದ ಅವು 4 ಬೌಂಡರಿ ನೆರವಿನಿಂದ 64 ರನ್‌ ಗಳಿಸಿ ಅಜೇಯರಾಗಿ ಉಳಿದರು. 

ಭುವನೇಶ್ವರ್‌ ನಿಯಂತ್ರಣ
ವೇಗಿ ಭುವನೇಶ್ವರ್‌ ಸಹಿತ ಭಾರತೀಯ ಬೌಲರ್‌ಗಳ ಉತ್ತಮ ಪ್ರಯತ್ನದ ಫ‌ಲವಾಗಿ ನ್ಯೂಜಿಲ್ಯಾಂಡ್‌ ಸಾಧಾರಣ ಮೊತ್ತ ಪೇರಿಸುವಂತಾಯಿತು. ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ಆರಂಭದಲ್ಲಿಯೇ ಎಡವಿತು. ಭುವನೇಶ್ವವರ್‌, ಬುಮ್ರಾ ಮತ್ತು ಚಾಹಲ್‌ ಅವರ ನಿಖರ ದಾಳಿಯಿಂದಾಗಿ ರನ್‌ ಗಳಿಸಲು ಒದ್ದಾಡಿದ ಕಿವೀಸ್‌ ಆಟಗಾರರು 27 ರನ್ನಿಗೆ 3 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದರು. ಮೊದಲ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದ ರಾಸ್‌ ಟಯ್ಲರ್‌ ಮತ್ತು ಟಾಮ್‌ ಲಾಥಂ ಮತ್ತೆ ತಂಡವನ್ನು ಆಧರಿಸುವ ಸೂಚನೆ ಇತ್ತರು. ಆದರೆ ಅವರಿಬ್ಬರ ಜತೆಯಾಟ ಹೆಚ್ಚು ಹೊತ್ತು ನಿಲ್ಲಲಿಲ್ಲ. 

ಟಯ್ಲರ್‌ ಮತ್ತು ಲಾಥಂ ನಾಲ್ಕನೇ ವಿಕೆಟಿಗೆ 31 ರನ್‌ ಪೇರಿಸಿದ ಬಳಿಕ ಬೇರ್ಪಟ್ಟರು. ಉತ್ತಮವಾಗಿ ಆಡುತ್ತಿದ್ದ ಟಯ್ಲರ್‌ 21 ರನ್‌ ಗಳಿಸಿದ ವೇಳೆ ಪಾಂಡ್ಯ ಬೌಲಿಂಗ್‌ನಲ್ಲಿ ಔಟಾದರು. ಆಬಳಿಕ ಲಾಥಂ ಮತ್ತು ಹೆನ್ರಿ ನಿಕೋಲ್ಸ್‌ ತಾಳ್ಮೆಯ ಆಟವಾಡಿ ಐದನೇ ವಿಕೆಟಿಗೆ 60 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಈ ಹಂತದಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಲಾಥಂ ಅಕ್ಷರ್‌ ಪಟೇಲ್‌ ಎಸೆತವನ್ನು ತಿಳಿಯಲು ವಿಫ‌ಲರಾಗಿ ಕ್ಲೀನ್‌ಬೌಲ್ಡ್‌ ಆದರು. ಅವರು 62 ಎಸೆತ ಎದುರಿಸಿ ಕೇವಲ 2 ಬೌಂಡರಿ ನೆರವಿನಿಂದ 38  ರನ್‌ ಹೊಡೆದಿದ್ದರು.

ಹೆನ್ನಿ ನಿಕೋಲ್ಸ್‌ ಮತ್ತು ಗ್ರ್ಯಾಂಡ್‌ಹೋಮ್‌ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಆರನೇ ವಿಕೆಟಿಗೆ ಮತ್ತೆ 47 ರನ್ನುಗಳ ಜತೆಯಾಟ ದಾಖಲಾಯಿತು. ಇದರಿಂದ ನ್ಯೂಜಿಲ್ಯಾಂಡ್‌ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿತು. ನಿಕೋಲ್ಸ್‌ 62 ಎಸೆತಗಳಿಂದ 42 ರನ್‌ ಹೊಡೆದರು. ಇದು ನ್ಯೂಜಿಲ್ಯಾಂಡ್‌ ಆಟಗಾರನೋರ್ವನ ಶ್ರೇಷ್ಠ  ಇನ್ನಿಂಗ್ಸ್‌ ಆಗಿದೆ. ಗ್ರ್ಯಾಂಡ್‌ಹೋಮ್‌ ಕೇವಲ 40 ಎಸೆತಗಳಲ್ಲಿ 41 ರನ್‌ ಸಿಡಿಸಿ ಜಾಹಲ್‌ಗೆ ವಿಕೆಟ್‌ ಒಪ್ಪಿಸಿದರು. ಬಿಗು ದಾಳಿ ಸಂಘಟಿಸಿದ ಭುವನೇಶ್ವರ್‌ 45 ರನ್ನಿಗೆ 3 ವಿಕೆಟ್‌ ಕಿತ್ತರೆ ಬುಮ್ರಾ ಮತ್ತು ಚಾಹಲ್‌ ತಲಾ ಎರಡು ವಿಕೆಟ್‌  ಪಡೆದರು.

ಸ್ಕೋರ್‌ಪಟ್ಟಿ
ನ್ಯೂಜಿಲ್ಯಾಂಡ್‌
ಮಾರ್ಟಿನ್‌ ಗಪ್ಟಿಲ್‌    ಸಿ ಧೋನಿ ಬಿ ಕುಮಾರ್‌    11
ಕಾಲಿನ್‌ ಮುನ್ರೊ    ಬಿ ಕುಮಾರ್‌    10
ಕೇನ್‌ ವಿಲಿಯಮ್ಸನ್‌    ಎಲ್‌ಬಿಡಬ್ಲ್ಯು ಬಿ ಬುಮ್ರಾ    3
ರಾಸ್‌ ಟಯ್ಲರ್‌    ಸಿ ಧೋನಿ ಬಿ ಪಾಂಡ್ಯ    21
ಟಾಮ್‌ ಲಾಥಂ    ಬಿ ಅಕ್ಷರ್‌    38
ಹೆನ್ರಿ ನಿಕೋಲ್ಸ್‌    ಬಿ ಕುಮಾರ್‌    42
ಗ್ರ್ಯಾಂಡ್‌ಹೋಮ್‌    ಸಿ  ಬುಮ್ರಾ ಬಿ ಚಾಹಲ್‌    41
ಮೈಕಲ್‌ ಸ್ಯಾಂಟ್ನರ್‌    ಸಿ ಕೊಹ್ಲಿ ಬಿ ಬುಮ್ರಾ    29 
ಆ್ಯಡಂ ಮಿಲೆ°    ಎಲ್‌ಬಿಡಬ್ಲ್ಯು ಬಿ ಚಾಹಲ್‌    0
ಟಿಮ್‌ ಸೌಥಿ    ಔಟಾಗದೆ    25
ಟ್ರೆಂಟ್‌ ಬೌಲ್ಟ್    ಔಟಾಗದೆ    2

ಇತರ:        8
ಒಟ್ಟು ( 50 ಓವರ್‌ಗಳಲ್ಲಿ 9 ವಿಕೆಟಿಗೆ)    230
ವಿಕೆಟ್‌ ಪತನ: 1-20, 2-25, 3-27, 4-58, 5-118, 6-165, 7-188, 8-188, 9-220

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌    10-0-45-3
ಜಸ್‌ಪ್ರೀತ್‌ ಬುಮ್ರಾ        10-2-38-2
ಕೇದಾರ್‌ ಜಾಧವ್‌        8-0-31-0
ಹಾರ್ದಿಕ್‌ ಪಾಂಡ್ಯ        4-0-23-1
ಅಕ್ಷರ್‌ ಪಟೇಲ್‌        10-1-54-1
ಯುಜ್ವೇಂದ್ರ ಚಾಹಲ್‌        8-1-36-2

ಭಾರತ
ರೋಹಿತ್‌ ಶರ್ಮ ಸಿ ಮುನ್ರೊ ಬಿ ಸೌಥಿ    7
ಶಿಖರ್‌ ಧವನ್‌     ಸಿ ಟಯ್ಲರ್‌ ಬಿ ಮಿಲೆ°    68
ವಿರಾಟ್‌ ಕೊಹ್ಲಿ     ಸಿ ಲಾಥಂ ಬಿ ಗ್ರ್ಯಾಂಡ್‌ಹೋಮ್‌    29
ದಿನೇಶ್‌ ಕಾರ್ತಿಕ್‌    ಔಟಾಗದೆ    64
ಹಾರ್ದಿಕ್‌ ಪಾಂಡ್ಯ     ಸಿ ಮಿಲೆ° ಬಿ ಸ್ಯಾಂಟ್ನರ್‌    30
ಎಂಎಸ್‌  ಧೋನಿ     ಔಟಾಗದೆ    18

ಇತರ        16
ಒಟ್ಟು (46 ಓವರ್‌ಗಳಲ್ಲಿ 4 ವಿಕೆಟಿಗೆ)    232
ವಿಕೆಟ್‌ ಪತನ: 1-22, 2-79, 3-145. 4-204

ಬೌಲಿಂಗ್‌: 
ಟಿಮ್‌ ಸೌಥಿ        9-1-60-1
ಟ್ರೆಂಟ್‌ ಬೌಲ್ಟ್        10-0-54-0 
ಆ್ಯಡಂ ಮಿಲೆ°        8-1-21-1 
ಮೈಕಲ್‌ ಸ್ಯಾಂಟ್ನರ್‌        10-0-38-1 
ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌    7-0-40-1
ಕಾಲಿನ್‌ ಮುನ್ರೊ        2-0-12-0 
ಪಂದ್ಯಶ್ರೇಷ್ಠ: ಭುವನೇಶ್ವರ್‌ ಕುಮಾರ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.