2ನೇ ಟಿ20: ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ


Team Udayavani, Jul 9, 2022, 10:36 PM IST

2ನೇ ಟಿ20: ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಗೆದ್ದು ಸರಣಿ ವಶಪಡಿಸಿಕೊಂಡ ಭಾರತ

ಬರ್ಮಿಂಗ್‌ಹ್ಯಾಮ್‌: ಸಾಂಘಿಕ ಪ್ರದರ್ಶನದ ಮೂಲಕ ಇಂಗ್ಲೆಂಡನ್ನು ದ್ವಿತೀಯ ಪಂದ್ಯದಲ್ಲೂ ಬಗ್ಗುಬಡಿದ ಭಾರತ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಶನಿವಾರದ ಮುಖಾಮುಖಿಯನ್ನು ರೋಹಿತ್‌ ಪಡೆ 49 ರನ್ನುಗಳ ಅಂತರದಿಂದ ಗೆದ್ದಿತು. 3ನೇ ಪಂದ್ಯ ರವಿವಾರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 8 ವಿಕೆಟಿಗೆ 170 ರನ್‌ ಪೇರಿಸಿದರೆ, ಇಂಗ್ಲೆಂಡ್‌ ಮೊದಲ ಎಸೆತದಲ್ಲೇ ಕುಸಿತಕ್ಕೆ ಸಿಲುಕಿ 17 ಓವರ್‌ಗಳಲ್ಲಿ 121ಕ್ಕೆ ಉರುಳಿತು. ಬಿಗ್‌ ಹಿಟ್ಟರ್‌ಗಳಾದ ರಾಯ್‌, ಬಟ್ಲರ್‌, ಮಲಾನ್‌, ಲಿವಿಂಗ್‌ಸ್ಟೋನ್‌ ವೈಫ‌ಲ್ಯ ಇಂಗ್ಲೆಂಡಿಗೆ ಮುಳುವಾಯಿತು. ಭುವಿ, ಬುಮ್ರಾ, ಚಹಲ್‌ ಘಾತಕ ಬೌಲಿಂಗ್‌ ಸಂಘಟಿಸಿದರು.

ರಿಷಭ್‌ ಪಂತ್‌ ಓಪನರ್‌
ರೋಹಿತ್‌ ಶರ್ಮ ಅವರೊಂದಿಗೆ ರಿಷಭ್‌ ಪಂತ್‌ ಆರಂಭಿಕನಾಗಿ ಇಳಿದರು. ಇದೊಂದು ಅಚ್ಚರಿ ಎನಿಸಿತು. ರೋಹಿತ್‌ಗೆ 4ನೇ ಎಸೆತದಲ್ಲೇ ರಾಯ್‌ ಅವರಿಂದ ಜೀವದಾನ ಸಿಕ್ಕಿತು. ಅಂತಿಮ ಎಸೆತವನ್ನು ಸಿಕ್ಸರ್‌ಗೆ ರವಾನಿಸುವ ಮೂಲಕ ಅಬ್ಬರಿಸುವ ಸೂಚನೆ ನೀಡಿದರು. ಪಂತ್‌ ಕೂಡ ಸಿಡಿಯತೊಡಗಿದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದುಬರತೊಡಗಿತು. ಈ ಜೋಡಿ 4.5 ಓವರ್‌ಗಳಲ್ಲಿ 49 ರನ್‌ ಪೇರಿಸಿತು. ಆಗ ರೋಹಿತ್‌ ಅವರನ್ನು ಔಟ್‌ ಮಾಡುವ ಮೂಲಕ ಗ್ಲೀಸನ್‌ ಚೊಚ್ಚಲ ಟಿ20 ವಿಕೆಟ್‌ ಕಿತ್ತರು. ರೋಹಿತ್‌ ಗಳಿಕೆ 20 ಎಸೆತಗಳಿಂದ 31 ರನ್‌ (4 ಬೌಂಡರಿ, 2 ಸಿಕ್ಸರ್‌). ಪವರ್‌ ಪ್ಲೇ ಸ್ಕೋರ್‌ ಒಂದಕ್ಕೆ 61.

ತಮ್ಮ ಮುಂದಿನ ಓವರ್‌ನಲ್ಲಿ ಗ್ಲೀಸನ್‌ ಭಾರತಕ್ಕೆ ಅವಳಿ ಆಘಾತವಿಕ್ಕಿದರು. ವಿರಾಟ್‌ ಕೊಹ್ಲಿ ಮತ್ತು ಪಂತ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿದರು. ಕೊಹ್ಲಿ ಆಟ ಒಂದೇ ರನ್ನಿಗೆ ಮುಗಿಯಿತು. ಪಂತ್‌ 15 ಎಸೆತಗಳಿಂದ 26 ರನ್‌ ಬಾರಿಸಿದರು (4 ಫೋರ್‌, 1 ಸಿಕ್ಸರ್‌). ಗ್ಲೀಸನ್‌ “ಡಬಲ್‌ ವಿಕೆಟ್‌ ಮೇಡನ್‌’ ಸಾಧಿಸಿ ಮೆರೆದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 3ಕ್ಕೆ 86 ರನ್‌ ಆಗಿತ್ತು.

11ನೇ ಓವರ್‌ನಲ್ಲಿ ಜೋರ್ಡನ್‌ ಅವಳಿ ಆಘಾತವಿಕ್ಕಿದರು. ಸತತ ಎಸೆತಗಳಲ್ಲಿ ಸೂರ್ಯ ಕುಮಾರ್‌ ಮತ್ತು ಪಾಂಡ್ಯ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ರೋಹಿತ್‌ ಪಡೆ ತೀವ್ರ ಒತ್ತಡಕ್ಕೆ ಸಿಲುಕಿತು. ಜಡೇಜ-ಕಾರ್ತಿಕ್‌ ವಿಕೆಟ್‌ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ಡೆತ್‌ ಓವರ್‌ ಆರಂಭವಾಗುವ ವೇಳೆ ಭಾರತ 5ಕ್ಕೆ 120ರಲ್ಲಿತ್ತು. ರವೀಂದ್ರ ಜಡೇಜ ಅವರ ಅಜೇಯ 46 ರನ್‌ (29 ಎಸೆತ, 5 ಬೌಂಡರಿ) ನೆರವಿನಿಂದ ಸವಾಲಿನ ಮೊತ್ತ ಸಾಧ್ಯವಾಯಿತು. ಕೊನೆಯ 5 ಓವರ್‌ಗಳಲ್ಲಿ ಭರ್ತಿ 50 ರನ್‌ ಒಟ್ಟುಗೂಡಿತು. ಜಡೇಜ ಭಾರತದ ಸರದಿಯ ಟಾಪ್‌ ಸ್ಕೋರರ್‌ ಎನಿಸಿದರು.

ಹೂಡಾಗೆ ಇಲ್ಲ ಜಾಗ!
ಪ್ರತಿಯೊಂದು ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತ ಬಂದ ದೀಪಕ್‌ ಹೂಡಾ ಅವರನ್ನು ಈ ಮುಖಾಮುಖೀಯಿಂದ ಕೈಬಿಟ್ಟಿದ್ದು ಅಚ್ಚರಿಯಾಗಿ ಕಂಡಿತು. ಜತೆಗೆ ಸೀನಿಯರ್‌ ಆಟಗಾರರಿಗಾಗಿ ಇಶಾನ್‌ ಕಿಶನ್‌, ಅಕ್ಷರ್‌ ಪಟೇಲ್‌ ಕೂಡ ಸ್ಥಾನ ಕಳೆದುಕೊಂಡರು. ಆರ್ಷದೀಪ್‌ ಸಿಂಗ್‌ ಮೊದಲ ಪಂದ್ಯಕ್ಕಷ್ಟೇ ತಂಡದಲ್ಲಿದ್ದರು. ಇವರ ಬದಲು ಕೊಹ್ಲಿ, ಪಂತ್‌, ಜಡೇಜ ಮತ್ತು ಬುಮ್ರಾ ಕಾಣಿಸಿಕೊಂಡರು.

ಇಂಗ್ಲೆಂಡ್‌ ತಂಡದಲ್ಲಿ 2 ಬದಲಾವಣೆ ಕಂಡುಬಂತು. ರೀಸ್‌ ಟಾಪ್ಲಿ ಮತ್ತು ಟೈಮಲ್‌ ಮಿಲ್ಸ್‌ ಬದಲು ಡೇವಿಡ್‌ ವಿಲ್ಲಿ ಹಾಗೂ ರಿಚರ್ಡ್‌ ಗ್ಲೀಸನ್‌ ಆಡಲಿಳಿದರು. ಮಧ್ಯಮ ವೇಗಿ ಗ್ಲೀಸನ್‌ ಅವರಿಗೆ ಇದು ಪದಾರ್ಪಣ ಪಂದ್ಯವಾಗಿತ್ತು.

ಸ್ಕೋರ್‌ ಪಟ್ಟಿ
ಭಾರತ
ರೋಹಿತ್‌ ಶರ್ಮ ಸಿ ಬಟ್ಲರ್‌ ಬಿ ಗ್ಲೀಸನ್‌ 31
ರಿಷಭ್‌ ಪಂತ್‌ ಸಿ ಬಟ್ಲರ್‌ ಬಿ ಗ್ಲೀಸನ್‌ 26
ವಿರಾಟ್‌ ಕೊಹ್ಲಿ ಸಿ ಮಲಾನ್‌ ಬಿ ಗ್ಲೀಸನ್‌ 1
ಸೂರ್ಯಕುಮಾರ್‌ ಸಿ ಕರನ್‌ ಬಿ ಜೋರ್ಡನ್‌ 15
ಹಾರ್ದಿಕ್‌ ಪಾಂಡ್ಯ ಸಿ ಮಲಾನ್‌ ಬಿ ಜೋರ್ಡನ್‌ 12
ರವೀಂದ್ರ ಜಡೇಜ ಔಟಾಗದೆ 46
ದಿನೇಶ್‌ ಕಾರ್ತಿಕ್‌ ರನೌಟ್‌ 12
ಹರ್ಷಲ್‌ ಪಟೇಲ್‌ ಸಿ ಗ್ಲೀಸನ್‌ ಬಿ ಜೋರ್ಡನ್‌ 13
ಭುವನೇಶ್ವರ್‌ ಕುಮಾರ್‌ ಸಿ ವಿಲ್ಲಿ ಬಿ ಜೋರ್ಡನ್‌ 2
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 0
ಇತರ 12
ಒಟ್ಟು (8 ವಿಕೆಟಿಗೆ) 170
ವಿಕೆಟ್‌ ಪತನ: 1-49, 2-61, 3-61, 4-89, 5-89, 6-122, 7-145, 8-159.
ಬೌಲಿಂಗ್‌: ಡೇವಿಡ್‌ ವಿಲ್ಲಿ 3-0-35-0
ಸ್ಯಾಮ್‌ ಕರನ್‌ 3-0-26-0
ಮೊಯಿನ್‌ ಅಲಿ 2-0-23-0
ರಿಚರ್ಡ್‌ ಗ್ಲೀಸನ್‌ 4-1-15-3
ಮ್ಯಾಥ್ಯೂ ಪಾರ್ಕಿನ್ಸನ್‌ 2-0-21-0
ಕ್ರಿಸ್‌ ಜೋರ್ಡನ್‌ 4-0-27-4
ಲಿಯಮ್‌ ಲಿವಿಂಗ್‌ಸ್ಟೋನ್‌ 2-0-23-0

ಇಂಗ್ಲೆಂಡ್‌
ಜೇಸನ್‌ ರಾಯ್‌ ಸಿ ರೋಹಿತ್‌ ಬಿ ಭುವನೇಶ್ವರ್‌ 0
ಜಾಸ್‌ ಬಟ್ಲರ್‌ ಸಿ ಪಂತ್‌ ಬಿ ಭುವನೇಶ್ವರ್‌ 4
ಡೇವಿಡ್‌ ಮಲಾನ್‌ ಸಿ ಹರ್ಷಲ್‌ ಬಿ ಚಹಲ್‌ 19
ಲಿವಿಂಗ್‌ಸ್ಟೋನ್‌ ಬಿ ಬುಮ್ರಾ 15
ಹ್ಯಾರಿ ಬ್ರೂಕ್‌ ಸಿ ಸೂರ್ಯಕುಮಾರ್‌ ಬಿ ಚಹಲ್‌ 8
ಮೊಯಿನ್‌ ಅಲಿ ಸಿ ರೋಹಿತ್‌ ಬಿ ಪಾಂಡ್ಯ 35
ಸ್ಯಾಮ್‌ ಕರನ್‌ ಸಿ ಕರನ್‌ ಬಿ ಬುಮ್ರಾ 2
ಡೇವಿಡ್‌ ವಿಲ್ಲಿ ಔಟಾಗದೆ 33
ಕ್ರಿಸ್‌ ಜೋರ್ಡನ್‌ ರನೌಟ್‌ 1
ರಿಚರ್ಡ್‌ ಗ್ಲೀಸನ್‌ ಸಿ ಕೊಹ್ಲಿ ಬಿ ಭುವನೇಶ್ವರ್‌ 2
ಮ್ಯಾಥ್ಯೂ ಪಾರ್ಕಿನ್ಸನ್‌ ಬಿ ಹರ್ಷಲ್‌ 0
ಇತರ 2
ಒಟ್ಟು (17 ಓವರ್‌ಗಳಲ್ಲಿ ಆಲೌಟ್‌) 121
ವಿಕೆಟ್‌ ಪತನ: 1-0, 2-11, 3-27, 4-41, 5-55, 6-60, 7-94, 8-95, 9-109.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 3-1-15-3
ಜಸ್‌ಪ್ರೀತ್‌ ಬುಮ್ರಾ 3-1-10-2
ಹಾರ್ದಿಕ್‌ ಪಾಂಡ್ಯ 3-0-29-1
ಹರ್ಷಲ್‌ ಪಟೇಲ್‌ 4-0-34-1
ಯಜುವೇಂದ್ರ ಚಹಲ್‌ 2-0-10-2
ರವೀಂದ್ರ ಜಡೇಜ 2-0-22-0

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.