ಭುವಿ, ಹರ್ಷಲ್ ಮೇಲೆ ನಾಯಕ ರೋಹಿತ್ ಶರ್ಮ ವಿಶ್ವಾಸ
Team Udayavani, Sep 26, 2022, 10:54 PM IST
ಹೈದರಾಬಾದ್: ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲರಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಮೇಲೆ ನಾಯಕ ರೋಹಿತ್ ಶರ್ಮ ಸಂಪೂರ್ಣ ವಿಶ್ವಾಸವಿರಿಸಿದ್ದಾರೆ.
“ಭುವನೇಶ್ವರ್ ಕುಮಾರ್ ನಮ್ಮ ತಂಡದ ಅನುಭವಿ ಬೌಲರ್. ಅವರು ಕೆಟ್ಟ ದಿನಗಳಿಗಿಂತ ಹೆಚ್ಚು ಒಳ್ಳೆಯ ದಿನಗಳನ್ನೇ ಕಂಡವರು.
ಲಯದಲ್ಲಿದ್ದಾಗ ಅವರು ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು. ಅವರಲ್ಲೇನೂ ಆತ್ಮವಿಶ್ವಾಸದ ಕೊರತೆಯನ್ನು ನಾವು ಕಂಡಿಲ್ಲ. ಹಾಗೆಯೇ ಹರ್ಷಲ್ ಪಟೇಲ್. ಇವರು ಟಿ20 ಡೆತ್ ಓವರ್ ಸ್ಪೆಷಲಿಸ್ಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇವರಿಬ್ಬರ ಮೇಲೂ ನಾವು ವಿಶ್ವಾಸ ಇರಿಸುವುದು ಈ ಸಂದರ್ಭದಲ್ಲಿ ಅತ್ಯಗತ್ಯ’ ಎಂಬುದಾಗಿ ರೋಹಿತ್ ಶರ್ಮ ಹೇಳಿದರು.