ಮತ್ತೆ ಸೋತ ಭಾರತ: ವಿರಾಟ್ ಪಡೆಗೆ ಕ್ಲೀನ್ ಸ್ವೀಪ್ ಮುಖಭಂಗ
Team Udayavani, Feb 11, 2020, 3:24 PM IST
ಮೌಂಟ್ ಮೌಂಗನಿ: ಆತಿಥೇಯ ಕಿವೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯವನ್ನೂ ಸೋತ ಭಾರತ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಗುರಿಯಾಗಿದೆ. ಇದರೊಂದಿಗೆ ಸುಮಾರು 30 ವರ್ಷಗಳ ಬಳಿಕ ಭಾರತ ಏಕದಿನ ಕ್ಲೀನ್ ಸ್ವೀಪ್ ಅವಮಾನಕ್ಕೆ ಒಳಗಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿ ಭಾರತ ಏಳು ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದರೆ, ಮೊತ್ತ ಬೆನ್ನತ್ತಿದ ಕಿವೀಸ್ 47 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.
ಇಲ್ಲಿನ ಬೆ ಓವಲ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತಕ್ಕೆ ಮತ್ತೆ ಆರಂಭಿಕ ಆಘಾತ ಎದುರಾಗಿತ್ತು. ಹೊಸ ಆರಂಭಿಕ ಜೊಡಿ ಮತ್ತೆ ವಿಫಲವಾಯಿತು. ವಿರಾಟ್ ಕೊಹ್ಲಿಯೂ 9 ರನ್ ಗೆ ಔಟಾದರು. 62 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತವನ್ನು ಆಧರಿಸಿದ್ದು ರಾಹುಲ್ ಮತ್ತು ಅಯ್ಯರ್.
ಅಯ್ಯರ್ 62 ರನ್ ಗಳಿಸಿದರೆ, ಕೆ ಎಲ್ ರಾಹುಲ್ 112 ಗಳಿಸಿದರು. ಕೊನೆಯದಾಗಿ ಮನೀಶ್ ಪಾಂಡೆ 42 ರನ್ ಗಳಸಿದರು. ಕಿವೀಸ್ ಪರ ಹ್ಯಾಮಿಶ್ ಬೆನೆಟ್ ನಾಲ್ಕು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಕಿವೀಸ್ ಗೆ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಉತ್ತಮ ಆರಂಭ ನೀಡಿದರು. ಗಪ್ಟಿಲ್ 66 ರನ್ ಗಳಸಿದರೆ, ಹೆನ್ರಿ ನಿಕೋಲ್ಸ್ 80 ರನ್ ಗಳಿಸಿದರು. ವಿಲಿಯಮ್ಸನ್ 22 ಮತ್ತು ರಾಸ್ ಟೇಲರ್ 12 ರನ್ ಗಳಿಸಿ ವಿಫಲವಾದರು.
ಅಂತಿಮವಾಗಿ ಕಾಲಿನ್ ಡಿ ಗ್ರಾಂಡ್ ಹೋಮ್ ಬಿರುಸಿನ ಹೊಡೆತಗಳಿಂದ ರಂಜಿಸಿದರು. ಕಾಲಿನ್ ಅಜೇಯ 58 ರನ್ ಗಳಸಿದರು. ಭಾರತದ ಪರ ವಾಹಲ್ ಮೂರು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್ 9.1 ಓವರ್ ನಲ್ಲಿ 87 ರನ್ ನೀಡಿ ದುಬಾರಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಪೂರ್ಣ ಯಾರ್ಕರ್ ಎಸೆಯಲು ನೆಟ್ ಅಭ್ಯಾಸ ಸಹಕಾರಿ: ಅರ್ಷದೀಪ್ ಸಿಂಗ್
ಬುಮ್ರಾ ಸತತ 7 ಐಪಿಎಲ್ ಋತುಗಳಲ್ಲಿ 15 ಪ್ಲಸ್ ವಿಕೆಟ್ ಉರುಳಿಸಿದ ಭಾರತದ ಮೊದಲ ಬೌಲರ್
ಐಪಿಎಲ್ ಓಪನಿಂಗ್ ಮ್ಯಾಚ್: 2020: ಚಾಂಪಿಯನ್ ಮುಂಬೈ ವಿರುದ್ಧ ಚೆನ್ನೈ ಗೆಲುವಿನ ಆರಂಭ
ಪಾಂಡ್ಯ-ಸಂಜು ಪಡೆಗಳ ಕ್ವಾಲಿಫೈಯರ್ ಪವರ್; ಇಂದು ಗುಜರಾತ್-ರಾಜಸ್ಥಾನ್ ಮುಖಾಮುಖಿ
ವನಿತಾ ಟಿ20 ಚಾಲೆಂಜರ್ ಸರಣಿ: ಸೂಪರ್ ನೋವಾಗೆ ಸೂಪರ್ ಗೆಲುವು
MUST WATCH
ಹೊಸ ಸೇರ್ಪಡೆ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ
ನಾಲತವಾಡ: ಮೂರು ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆ ಜಾತ್ರೆಗೆ ಅದ್ಧೂರಿ ಆರಂಭ
ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್
ಮಂಡ್ಯ: 5 ರೂಪಾಯಿ ವೈದ್ಯ ಡಾ.ಶಂಕರೇಗೌಡರಿಗೆ ಹೃದಯಾಘಾತ