ಭಾರತ ಗೆಲ್ಲಬೇಕಿದೆ, ಅದಕ್ಕಾಗಿ ಐಪಿಎಲ್ ಅಮಾನತಾಗಿದೆ: ಮುಂಬೈ ಪೊಲೀಸರ ಟ್ವೀಟ್
Team Udayavani, Apr 19, 2020, 12:01 PM IST
ಮುಂಬೈ: ಕೋವಿಡ್-19 ಸೋಂಕಿನ ಕಾರಣದಿಂದ ವರ್ಣರಂಜಿತ ಕ್ರೀಡಾಕೂಟ ಐಪಿಎಲ್ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಗುರುವಾರ ಬಿಸಿಸಿಐ ಐಪಿಎಲ್ ಮುಂದೂಡಿಕೆಯ ಬಗ್ಗೆ ಅಧಿಕೃತವಾಗಿ ತಿಳಿಸಿದೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಮುಂಬೈ ಪೊಲೀಸರು, ಐಪಿಎಲ್ ಅಮಾನತು ಆಗದೆ ಯಾಕೆಂದರೆ ಭಾರತ ಗೆಲ್ಲಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮುಂಬೈ ಪೊಲೀಸರಿಗೆ ಐಪಿಎಲ್ ( ಇಂಡಿಯನ್ ಪ್ರೀಮಿಯರ್ ಲೀಗ್) ಗೆ ಹೊಸ ಅರ್ಥ ನೀಡಿದ್ದಾರೆ. ಮುಂಬೈ ಪೊಲೀಸರು ಇಂಡಿಯಾ ಪ್ರಾಕ್ಟಿಸಿಂಗ್ ಲಾಕ್ ಡೌನ್ ( ಭಾರತ ಲಾಕ್ ಡೌನ್ ಪಾಲಿಸುತ್ತಿದೆ) ಎಂಬರ್ಥದಲ್ಲಿ ಐಪಿಎಲ್ ಅನ್ನು ಬಿಂಬಿಸಿದ್ದಾರೆ.
ಭಾರತದ ನಗರಗಳು ಎದುರಾಳಿಯಾಗಿ ಆಡುವುದಿಲ್ಲ. ಈಗ ದೇಶ ಒಂದಾಗಿ ಕೋವಿಡ್-19 ವೈರಸ್ ವಿರುದ್ಧ ಸೆಣಸಾಡುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
(I)ndia (P)racticing (L)ockdown
Indian cities won’t take on each other. Instead, a united India will win this match against #coronavirus .#INDvCOVID#PerfectPitchForLockdown#TakingOnCorona pic.twitter.com/QUvpnfJq7r
— Mumbai Police (@MumbaiPolice) April 16, 2020